ಮಂಗಳೂರು :
ದುಬೈನಿಂದ ಇಲ್ಲಿಯ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾಸರಗೋಡಿನ ವ್ಯಕ್ತಿಯೊಬ್ಬರಿಂದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಒಟ್ಟು ₹10 . 50 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ .
ಕಾಸರಗೋಡಿನ ಚಟ್ಟಂಚಾಲ್ ನಿವಾಸಿ ಅಬ್ದುಲ್ ರಜಾಕ್ ಎಂಬವರಿಂದ 24 ಕ್ಯಾರೆಟ್ನ 349 . 80 ಗ್ರಾಂ ತೂಕದ ನಾಲ್ಕು ಚಿನ್ನದ ಬಿಸ್ಕಿಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬುಧವಾರ ಸಂಜೆ 6 .30 ಕ್ಕೆ ಸ್ಪೈಸ್ ಜೆಟ್ ವಿಮಾನದ ಮೂಲಕ ಅಬ್ದುಲ್ ರಜಾಕ್ , ನಗರಕ್ಕೆ ಬಂದಿದ್ದರು . ಈ ಸಂದರ್ಭದಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು, ಚಿನ್ನವನ್ನು ವಶಕ್ಕೆ ಪಡೆದು, ಅಬ್ದುಲ್ ರಜಾಕ್ ಅವರನ್ನು ಬಂಧಿಸಿದ್ದಾರೆ. ಅಬ್ದುಲ್ ರಜಾಕ್ ತನ್ನ ಗುದದ್ವಾರದಲ್ಲಿ ಈ ಚಿನ್ನದ ಬಿಸ್ಕಿಟ್ಗಳನ್ನು ಬಚ್ಚಿಟ್ಟಿದ್ದು , ವೈದ್ಯರ ಸಹಾಯದಿಂದ ಇವುಗಳನ್ನು ಹೊರತೆಗೆಯಲಾಗಿದೆ .
‘ನಾನು ನಿಯಮಿತವಾಗಿ ಚಿನ್ನದ ಸಾಗಾಟ ಮಾಡುತ್ತಿದ್ದೇನೆ. ವಿಮಾನ ನಿಲ್ದಾಣದಲ್ಲಿ ಬ್ಯಾಗ್ಗಳನ್ನು ಮಾತ್ರ ತಪಾಸಣೆ ಮಾಡುತ್ತಿದ್ದು , ಗುದದ್ವಾರದಲ್ಲಿ ಇಟ್ಟುಕೊಂಡು ಹಲವಾರು ಬಾರಿ ಚಿನ್ನದ ಕಳ್ಳಸಾಗಣೆ ಮಾಡಿದ್ದೇನೆ’ ಎಂದು ವಿಚಾರಣೆಯ ವೇಳೆ ಅಬ್ದುಲ್ ರಜಾಕ್ ಒಪ್ಪಿಕೊಂಡಿದ್ದಾರೆ .
‘ಪಾಸ್ಪೋರ್ಟ್ ಪರಿಶೀಲಿಸಿದಾಗ , ನಿಯಮಿತವಾಗಿ ದುಬೈನಿಂದ ಮಂಗಳೂರು , ಮುಂಬೈ , ದೆಹಲಿ, ಅಹಮದಾಬಾದ್ , ಚೆನ್ನೈ , ಕೊಚ್ಚಿ, ತಿರುವನಂತಪುರ , ಬೆಂಗಳೂರು , ಗೋವಾ ಮತ್ತು ಲಖನೌ ವಿಮಾನ ನಿಲ್ದಾಣಗಳಲ್ಲಿ ಇಳಿದಿರುವುದು ಪತ್ತೆಯಾಗಿದೆ ’ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಮಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ .
Leave a Comment