ಹೊನ್ನಾವರ:
ದೇಶದ ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ ವಕೀಲರ ಕಾಯ್ದೆಯ ತಿದ್ದುಪಡಿಗೆ ವರದಿ ಸಲ್ಲಿಸಿದ್ದು ಅದು ಅಸಂವಿಧಾನಿಕ ಮತ್ತು ವಕೀಲರ ವಿರುದ್ಧವಾಗಿದೆ ಎಂದು ಖಂಡಿಸಿ ಹೊನ್ನಾವರ ವಕೀಲರ ಸಂಘದವರು ತಿದ್ದುಪಡಿ ಮಸೂದೆಯ ಝೆರಾಕ್ಸ್ ಪ್ರತಿಗಳನ್ನು ಸಾಂಕೇತಿಕವಾಗಿ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದರು.
ವಕೀಲರ ಕಾಯ್ದೆ ತಿದ್ದುಪಡಿ 2017ನೇದರಲ್ಲಿ ವಕೀಲರ ಹಕ್ಕುಗಳಿಗೆ ಚ್ಯುತಿ ತರುವ ಹಾಗೂ ವಕೀಲ ವೃತ್ತಿಯಲ್ಲಿ ಇಲ್ಲದವರೂ ವೃತ್ತಿಯಲ್ಲಿ ಸವಾರಿ ಮಾಡಲು ಅವಕಾಶ ನೀಡಲಾಗಿದೆ ಎಂದು ಭಾರತದ ವಕೀಲರ ಪರಿಷತ್ತು ತಿದ್ದುಪಡಿ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತಿನ ಜಂಟಿ ಸಭೆಯಲ್ಲಿ ವಿರೋಧಿಸಲು ನಿರ್ಣಯಿಸಿದ್ದರ ಅನ್ವಯ ತಾಲೂಕಾ ಸಂಘಟನೆಯು ಪ್ರತಿಭಟನೆ ನಡೆಸಿತು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ.ನಾಯ್ಕ, ಕಾರ್ಯದರ್ಶಿ ಸೂರಜ್ ನಾಯ್ಕ, ಹಿರಿಯ ವಕೀಲ ಜಿ.ವಿ.ಭಟ್ಟ, ಡಿ.ಎಂ.ನಾಯ್ಕ, ಜಿ.ಎಸ್.ಹೆಗಡೆ, ಉದಯ ನಾಯ್ಕ ನವೀಲಗೋಣ, ಸಾರಿಗಾ ಶಶೀಧರನ್, ಗೋವಿಂದ ಭಂಡಾರಿ, ಉದಯ ನಾಯ್ಕ ಚಿತ್ತಾರ, ಕೃಷ್ಣ ಗೌಡ, ಪದ್ಮಾ ಸಂಕೊಳ್ಳಿ ಇತರರು ಉಪಸ್ಥಿತರಿದ್ದರು.
Leave a Comment