ಅಂಕೋಲಾ :
ಅಂಕೋಲಾ ತಾಲೂಕಿನ ಕೇಣಿ ವಿವೇಕಾನಂದ ಮೈದಾನದಲ್ಲಿ ಏ. 26 ರಿಂದ ಮೇ.1 ರವರೆಗೆ ನಡೆಯಲಿರುವ ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ ಮಾಡಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಅಂಜಲಿ ಐಗಳ ಮಾತನಾಡಿ ಐದು ದಿನಗಳ ಈ ಹಬ್ಬ ನಡೆಯಲಿದ್ದು ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯದ ವಿವಿಧ ಕಲಾ ತಂಡಗಳು ಇಲ್ಲಿ ಬಾಗವಹಿಸಲಿದ್ದು ಸ್ಥಳೀಯ ಕಲಾತಂಡಗಳಿಗು ಇಲ್ಲಿ ಅವಕಾಶ ಕಲ್ಪಿಸಿಕೋಡಲಾಗಿದೆ ಎಂದು ಹೇಳಿದರು.
ಅಂಕೋಲಾ ಹಬ್ಬ ಸಮಿತಿಯ ಅಧ್ಯಕ್ಷ ಸಂದೀಪ ಬಂಟ ಮಾತನಾಡಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರÀ ಅಂಕೋಲಾ ಹಬ್ಬದ ಉದ್ಘಾಟನೆಯನ್ನು ಮಾಡಲಿದ್ದಾರೆ. ಸಾಕ್ಷಿತ ಹಾರ್ಡವೇರ್ ಮಾಲೀಕ ಸುರೇಶ ನಾಯಕ ಅಲಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕಿನ ವಿವಿಧ ಗಣ್ಯರು ವೇದಿಕೆಯಲ್ಲಿ ಉಸ್ಥಿತರಿರಲಿದ್ದಾರೆ. ಗ್ರಾಮೀಣ ಕಲೆಯನ್ನು ಪ್ರೋತ್ಸಾಹಿಸುವ ಮತ್ತು ವೈವಿಧ್ಯಮಯ ಕಲೆ , ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದೊಂದಿಗೆ ಐದು ದಿನಗಳ ಕಾಲ ಅಂಕೋಲಾ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಪತ್ರಕರ್ತ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್, ಪುರಸಭೆ ಉಪಾಧ್ಯಕ್ಷ ಮಂಜುನಾಥ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಲಕ್ಷ್ಮಿ ನರಸಹ್ಯ, ಸದಸ್ಯೆ ಸೀಮಾ ಬಂಟ, ಅಂಕೋಲಾ ಹಬ್ಬ ಸಮಿತಿಯ ಸುಬ್ರಮಣ್ಯ ಗಾಂವಕರ, ಪ್ರಶಾಂತ ಬಂಟ, ಸಂತೋಷ ಬಂಟ, ಚಂದ್ರಕಾಂತ ಬಂಟ, ಮುರಳಿಧರ ಬಂಟ ಗಜಾನನ ನಾಯ್ಕ, ದಿನೇಶ ನಾಯ್ಕ ಉಪಸ್ಥಿತರಿದ್ದರು.
Leave a Comment