ದಾಂಡೇಲಿ :
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭವು ಮಂಗಳವಾರ ಕಾಲೇಜಿನಲ್ಲಿ ಜರುಗಿತು.
ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ ಮಾಡಿ ಮಾತನಾಡಿದ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯ ಸೈಯದ ತಂಗಳ ಅವರು ಬದಲಾಗುತ್ತಿರುವ ಈ ಸಮಾಜದಲ್ಲಿ ಬದಲಾವಣೆಗೆ ತಕ್ಕಂತೆ ನಾವು ಕ್ರಿಯಾಶೀಲರಾಗಬೇಕು. ಜೀವನದಲ್ಲಿ ಸುಸಂಕೃತ ನಡವಳಿಕೆಗಳನ್ನು ಆಳವಡಿಸಿಕೊಳ್ಳುವುದರ ಮೂಲಕ ಈ ರಾಷ್ಟ್ರದ ಮಾದರಿ ಪ್ರಜೆಯಾಗಬೇಕು. ಭವಿಷ್ಯದ ಯೋಜನೆ, ಯೋಚನೆಗಳನ್ನು ಮುಂದಿಟ್ಟು ಪ್ರಗತಿಯ ಕಡೆಗೆ ವಿದ್ಯಾರ್ಥಿಗಳು ಹೆಜ್ಜೆಯಿಡಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ನಾಸೀರಹ್ಮದ ಜಂಗೂಭಾಯಿ ವಿದ್ಯಾರ್ಥಿಗಳ ಶ್ರಮದಿಂದ ರಚಿಸಿರುವ ಪಾಂಚಜನ್ಯ ಹಸ್ತಪ್ರತಿ ವಿದ್ಯಾರ್ಥಿಗಳ ಭವಿಷ್ಯದ ಉನ್ನತಿಯನ್ನು ಎತ್ತಿತೋರಿಸುತ್ತಿದೆ. ಕ್ರಿಯಾಶೀಲತೆ ಮತ್ತು ನಿರಂತರ ಓದು ಹಾಗೂ ಸಾಮಾಜಿಕ ಜ್ಞಾನವನ್ನು ಮೈಗೂಡಿಸಿಕೊಂಡವ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಭವಿಷ್ಯದ ಬೆಳಕಾಗಬಲ್ಲರು ಎಂದರು.
ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ಎಸ್.ವಿ ಚಿಂಚಣಿಯವರು ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಕುರಿತು ಮಾತನಾಡಿ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಗುಣಗಳನ್ನು ಹೊಂದಿರಬೇಕು ಮತ್ತು ತಮ್ಮಲ್ಲಿರುವಂತ ವಿವಿಧ ಕೌಶಲ್ಯಗಳನ್ನು ಪ್ರಚುರ ಪಡಿಸುತ್ತಾ ಜೀವನದ ಶೈಲಿಯನ್ನು ಉತ್ತಮಗೊಳಿಸಿಕೊಳ್ಳಬೇಕು, ಒಳ್ಳೆಯ ಉದ್ಯೋಗಗಳನ್ನು ತಮ್ಮ ಕೌಶಲ್ಯಕ್ಕನುಗಣುವಾಗಿ ಆರಿಸಿಕೊಳ್ಳಲು ಸತತ ಪ್ರಯತ್ನವನ್ನು ಹಾಗೂ ಅದಕ್ಕೆ ಬೇಕಾಗಿರುವ ಪಠ್ಯಕ್ರಮಗಳನ್ನು ಮುಂಚಿತವಾಗಿ ಪಡೆದುಕೊಂಡು ಅವುಗಳನ್ನು ಅಭ್ಯಸಿಸಬೇಕು ಎಂದರು.
ಕಾಲೇಜಿನ ವಿದ್ಯಾರ್ಥಿಗಳಾದ ನಾಗವೇಣಿ.ರಜಪೂತ ಹಾಗೂ ಸವಿತಾ ಕುಂದಗೋಳ ಮತ್ತು ಇತರರು ತಮ್ಮ ಕಳೆದ ಶೈಕ್ಷಣಿಕ ವರ್ಷಗಳ ಕುರಿತು ವಿಷಯಾಧಾರಿತ ಹಾಗೂ ಮುಂದಿನ ಜೀವನ ನಿರ್ವಹಿಸಲು ವ್ಯಕ್ತಿತ್ವ ವಿಕಸನದ ಕುರಿತು ನೀಡಿರುವ ಅನೇಕ ತರಬೇತಿಗಳು ನಮ್ಮ ಜೀವನದಲ್ಲಿ ಮುಂದಿನ ಗುರಿಗಳನ್ನು ಸಾಧಿಸಲು ಸಹಕಾರಿಯಾಗಿರುತ್ತವೆ.
ಕಾರ್ಯಕ್ರಮದಲ್ಲ್ಲಿ ಸಹಾಯಕ ಪ್ರಾದ್ಯಾಪಕರುಗಳಾದ ಡಾ.ಸುಜಾತಾ ಮಗದುಮ್, ಮಂಜುನಾಥ ಚಲವಾದಿ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
Leave a Comment