ಹೊನ್ನಾವರ :
ಎಲ್ಲದಕ್ಕೂ ಭಗವಂತನ ಇಚ್ಚೆ ಬೇಕು. ಯಾವ ಒಳ್ಳೆಯ ಕೆಲಸ ಮಾಡಲು ದೇವಾನುದೇವರ ಅನುಗ್ರಹ ಬೇಕು ಎಂದು ಉದ್ಘಾಟಕರಾಗಿ ಆಗಮಿಸಿದ ಮಾದೇವ ಸ್ವಾಮಿ ನೀಲಗೋಡೇಶ್ವರಿ ಕ್ಷೇತ್ರ ಬಳ್ಕೂರ ಇವರು ನುಡಿದರು.
ಮಾವಿನಕುರ್ವಾ ಗ್ರಾಮದಲ್ಲಿ ಸ್ನೇಹರಂಗ ಯುವಕ ಸಂಘ ಮತ್ತು ಚಿಣ್ಣರ ಸಂಘ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ತಾಲೂಕಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಚಿಣ್ಣರ ಸಂಘ ಒಳ್ಳೆಯ ಕಾರ್ಯ ಮಾಡುತ್ತಿದೆ. ಧಾರ್ಮಿಕತೆ, ಕ್ರೀಡೆ, ಶಿಕ್ಷಣದಲ್ಲಿ ಮುಂದುವರೆದು ನಿಷ್ಠೆಯಿಂದ ಜೀವನ ನಡೆಸಿ ಕ್ರೀಡೆಯನ್ನು ಉನ್ನತ ಸ್ಥಾನಕ್ಕೆ ಮುಟ್ಟಿಸಿ, ಎಲ್ಲರ ಜೊತೆ ಗೌರವ ಮತ್ತು ಪ್ರೀತಿಯಿಂದ ನಡೆದುಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸೇಪ್ ಸ್ಟಾರ್ ಫೈನಾನ್ಸ್ ಅಧ್ಯಕ್ಷರಾದ ಜಿ. ಜಿ. ಶಂಕರ ಮಾತನಾಡಿ ಕಬಡ್ಡಿ ಕ್ರೀಡೆಯನ್ನು ಬೆಳೆಸಿ ಹರಸಿ, ಅತೀ ಚಿಕ್ಕ ವಯಸ್ಸಿನಲ್ಲಿ ಇಂತಹ ಪಂದ್ಯಾವಳಿಗಳನ್ನು ನಡೆಸಿಕೊಡುತ್ತಿರುವ ತಾವು ಧನ್ಯರು. ನಮ್ಮೆಲ್ಲರ ಸಹಕಾರ ಎಂದಿಗೂ ಇದೆ ಎಂದರು.
ಕ್ರೀಡಾಂಗಣ ಉದ್ಘಾಟಿಸಿದ ಪತ್ರಕರ್ತ ಗೋಪಾಲಕೃಷ್ಣ ನಾಗಪ್ಪ ಭಟ್ ಇವರ ಮಾತನಾಡಿ ಇದು ಗ್ರಾಮೀಣ ಕ್ರೀಡೆ. ದೇಶದ ರಾಷ್ಟ್ರೀಯತೆ ಮತ್ತು ಸಂಸ್ಕøತಿಯನ್ನು ಎತ್ತಿ ತೋರಿಸುತ್ತಿರುವ ಕ್ರೀಡೆ. ಇಂತಹ ಕ್ರೀಡೆಯನ್ನು ಅತ್ಯಂತ ದ್ವೀಪ ಪ್ರದೇಶವಾಗಿರುವ ನಮ್ಮ ಈ ಭಾಗದಲ್ಲಿ ಆಯೋಜಿಸಿರುವುದು ಸಂತಸ ತಂದಿದೆ. ಸಾಮರಸ್ಯದಿಂದ ಒಟ್ಟಿಗೆ ಎಲ್ಲಾ ಕ್ರೀಡಾಪಟುಗಳು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದು ಹಾರೈಸಿದರು.
ಪ್ರಮುಖರಾದ ನಿಕಟಪೂರ್ವ ರೋಟರಿ ಅಧ್ಯಕ್ಷರಾದ ಸತ್ಯಜಾವಗಲ್, ಶಿವರಾಜ ಮೇಸ್ತ, ರಾಘವೇಂದ್ರ ಮಡಿವಾಳ, ಚರ್ಡಪ್ಪ ವೆಂಕಟ್ರಮಣ ಭಟ್, ಕಿರಣ ಹೊನ್ನಾವರ, ಶಿಕ್ಷಕರಾದ ಎಮ್. ಜಿ. ನಾಯ್ಕ, ಪೀಟರ್ ಮೆಂಡಿಸ್, ನಾಗೇಶ ಚಂದ್ರು ಗೌಡ, ಮಾದೇವ ಕೇಶವ ಗೌಡ ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು, ಗಣೇಶ ಗೋವಿಂದ ಗೌಡ ವಂದಿಸಿದರು.
Leave a Comment