ಹೊನ್ನಾವರ :
ತಾಲೂಕಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತುಂಬೊಳ್ಳಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೋತ್ಸವ ಕಾರ್ಯಕ್ರಮವು ಏಪ್ರಿಲ್ 27 ಗುರುವಾರದಂದು ನೆರವೇರಿಸಲಾಗುತ್ತದೆ. ಶ್ರೀ ಕ್ಷೇತ್ರ ತುಂಬೊಳ್ಳಿಯಲ್ಲಿ ಅಂದು ಬೆಳಿಗ್ಗೆ ದೇವತಾ ಪ್ರಾರ್ಥನೆ ಶುದ್ಧಿಕರ್ಮ, ಗಣಪತಿ ಪೂಜೆ, ಸ್ವಸ್ಥಿಕ್ ಪುಣ್ಯಾಹ, ಸಂಕಲ್ಪ, ಕಲಶ ಸ್ಥಾಪನೆ, ಸತ್ಯನಾರಾಯಣ ಪೂಜೆ, ಆದಿವಾಸ ಹೋಮ, ತತ್ವ ಹೋಮಾದಿಗಳು,ಪೂರ್ಣಾಹುತಿ ಕುಂಬಾಭಿಷೇಕ, ಮದ್ಯಾಹ್ನ ಪೂಜಾ, ಮದ್ಯಾಹ್ನ ಬಲಿ, ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನ ಇರುತ್ತದೆ. ಅಂದು ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಪಿ.ಟಿ.ನಾಯ್ಕ ಮೂಡ್ಕಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment