ಹೊನ್ನಾವರ :
ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಉನ್ನತ ಶಿಕ್ಷಣದ ಬಗ್ಗೆ ದೇಶಾದ್ಯಂತ ಗಂಭೀರವಾದ ಚರ್ಚೆ ಆರಂಭಗೊಂಡಿದೆ. ಈ ಬಗ್ಗೆ ಎಲ್ಲಾ ರೀತಿಯ ಚರ್ಚೆ ತುಂಬಾ ಆಳವಾಗಿ ನಡೆಯುತ್ತಿದೆ. ಇತಿಮಿತಿಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ವಿಚಾರ ವಿನಿಮಯ ನಡೆಯುತ್ತಿದೆ. ವಿದೇಶಿ ವಿಶ್ವವಿದ್ಯಾಲಯದಿಂದ ಶಿಕ್ಷಣವನ್ನು ನಮ್ಮಲ್ಲಿ ಅಳವಡಿಸುವ ಬಗ್ಗೆ ಅವಲೋಕಿಸುತ್ತಿದ್ದೇವೆ.
ಪದವಿಗೋಸ್ಕರ ಈಗ ವಿಶ್ವವಿದ್ಯಾಲಯ ನಡೆಸುತ್ತಿದ್ದೆವೋ ಅಥವಾ ಜ್ಞಾನ ಸಂಪಾದನೆ ನಡೆಸುವ ಉದ್ದೇಶದಿಂದ ವಿಶ್ವವಿದ್ಯಾಲಯ ನಡೆಸುತ್ತಿದ್ದೇವೋ ಎಂಬುವುದೇ ಮೂಲ ಪ್ರಶ್ನೆಯಾಗಿದೆ. ಶಿಕ್ಷಣ ಎಂದರೆ ಪ್ರಮಾಣಪತ್ರ ಅಲ್ಲ, ಮುಂದಿನ ತಲೆಮಾರಿಗೆ, ಸ್ಪರ್ಧಾತ್ಮಕ ಜಗತ್ತಿಗೆ ತೆರೆದು ನಿಲ್ಲಿಸುವ ಪ್ರಕ್ರಿಯೆಯಾಗಿದೆ. ಪ್ರತಿಕ್ಷಣ, ಪ್ರತಿದಿನ, ಜಗತ್ತಿನ ಕಲ್ಪನೆ ಬದಲಾಗುತ್ತಿದೆ.
ಪ್ರಮಾಣಪತ್ರ ಕೊಡುವ ಈ ಶಿಕ್ಷಣ ಎಷ್ಟರ ಮಟ್ಟಿಗೆ ಇದೆ ಎಂದರೆ “ನಿಂತ ನೀರಿನಲ್ಲಿ, ಕೊಳೆತ ನೀರಿನಲ್ಲಿ ನಿಂತು ಈಜಾಡುತ್ತಿದ್ದೇವೆ” ಎಂದು ಬಾಸವಾಗುತ್ತಿದೆ. ನಿಜವಾದ ಅಭಿವೃದ್ದಿ ಎಂದರೆ ಕಲ್ಪನೆಯಲ್ಲಿ, ಪ್ರಜ್ಞಾವಂತಿಕೆಯಲ್ಲಿ ಇರುತ್ತದೆ.
ಮೊದಲು ನಾವು ನಮ್ಮನ್ನು ನೋಡಿಕೊಳ್ಳುವ ದೃಷ್ಟಿ ಬದಲಾಗಬೇಕು. ಜೊತೆಯಲ್ಲಿ ವಿದ್ಯಾರ್ಥಿಗಳ ಗುಣಮಟ್ಟ ಸಹ ಬದಲಾಗಬೇಕು. ಜೊತೆಗೆ ಜಗತ್ತಿನ ಸಿಗುವ ಅನೇಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜಗತ್ತಿನಲ್ಲಿ ಶೇ. 60-70 ಫಲಿತಾಂಶ ಪಡೆದಂತವರು ಜೀವನದಲ್ಲಿ ತನ್ನ ಕಾಲ ಮೇಲೆ ನಿಂತು ಗೆಲುವ ಸಾಧಿಸುತ್ತಾರೆ. ಗರಿಷ್ಟ ಅಂಕ ಗಳಿಸಿದ ಕೆಲವರು ಅಡಿಯಾಗಿ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೊ ಅಡಿಯಾಳಾಗಿ ವಿದೇಶಿ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾನೆ. ಇದು ನಮ್ಮ ದುರ್ದೈವ ಎಂದರು.
ಪ್ರಾಚಾರ್ಯ ಎಸ್.ಎಸ್.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಡಾ|| ಎಂ.ಪಿ. ಕರ್ಕಿ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಾಗರಾಜ ಹೆಗಡೆ ಅಪಗಾಲ ವಂದಿಸಿದರು. ಉಪನ್ಯಾಸಕ ಹೆಬ್ಬಾರ ನಿರೂಪಿಸಿದರು
Leave a Comment