ಹೊನ್ನಾವರ;
ಶ್ರೀ ಲಕ್ಷ್ಮೀ ವೆಂಕಟೇಶ ಮಠದ ಸಭಾಭವನದಲ್ಲಿ 6 ತಿಂಗಳ ಉಚಿತ ಹೊಲಿಗೆ ತರಬೇತಿಯ ಮುಕ್ತಾಯ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಹಿಲ್ ಖಲೀಲ್ ಶೇಖ್ ಮಾತನಾಡಿ ಮಹಿಳೆಯರು ಈ ಭಾಗದಲ್ಲಿ ಹೊಲಿಗೆಯನ್ನು ಯಶಸ್ವಿಯಾಗಿ ಕಲಿಯಲು ಸಹಾಯ ಸಹಕಾರ ನೀಡಿದ ಮುರ್ಡೆಶ್ವರ ಸಮುದಾಯ ಅಭಿವೃದ್ಧಿ ಯೋಜನೆಯ ಅಧಿಕಾರಿಗಳಿಗೆ ಅಭಿನಂದನೆಯನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಎನ್.ಎಸ್ ಶಿಕ್ಷಣ ಸಮೂಹ ಸಂಸ್ಥೆಯ ನಿರ್ದೇಶಕರಾದ ಎಂ.ವಿ.ಹೆಗಡೆ ಮಾತನಾಡಿ ಮಹಿಳೆಯರು ಸಮುದಾಯ ಅಭಿವೃದ್ಧಿ ಯೋಜನೆಯ ಮೂಲಕ ಅನೇಕ ವೃತ್ತಿ ತರಬೇತಿಗಳನ್ನು ಪಡೆದು ಸ್ವಾವಲಂಭಿ ಜೀವನವನ್ನು ನಡೆಸುತ್ತಿದ್ದಾರೆ ಇಲ್ಲಿ ತರಬೇತಿ ಪಡೆದ ನೀವೆಲ್ಲರೂ ಕೂಡ ಒಳ್ಳೆಯ ನುರಿತ ಟೇಲರ್ಸ್ಗಳಾಗಿ ಎಂದು ಹಾರೈಸಿದರು.
ವೇದಿಕೆ ಮೇಲೆ ಉಪಪ್ರಾಚಾರ್ಯರು ಹಾಗೂ ಸಂಯೋಜಾನಾಧಿಕಾರಿಗಳಾದ ಕೆ.ಮರಿಸ್ವಾಮಿ, ಗಪುರ್ ಸಾಹೇಬ್, ಜಾಖೀರ್ ಸಾಹೇಬ್, ಸುಮತಿ ನಾಯ್ಕ, ಗೀತಾ ಆರ್.ಹರಿಕಾಂತ, ಮಾರಿಯಾ ಮಾರ್ಷಲ್ ಫರ್ನಾಂಡಿಸ್ ಹಾಗೂ ಗ್ರಾ.ಪಂ ಅನೇಕ ಸದಸ್ಯರು ಉಪಸ್ಥಿತರಿದ್ದು ಪ್ರಮಾಣ ಪತ್ರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಬೇಬಿ ಲಿಡಿಯಾ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಪ್ರಾರ್ಥನೆಯನ್ನು ಶಾಂತಿ ನಾಯ್ಕ ಹಾಡಿದರು, ಮಮತಾ ನಾಯ್ಕ ಅತಿಥಿಗಳನ್ನು ಸ್ವಾಗತಿಸಿದರು, ವೀಣಾ ಸೈನ್ ಲೂಯಿಸ್ ವಂದಿಸಿದರು. ಅಕ್ಷತಾ ಆರ್.ಹರಿಕಂತ್ರ ನಿರೂಪಿಸಿದರು.
Leave a Comment