ಹಳಿಯಾಳ:
ಮಹಾತ್ಮಾ ಗಾಂಧಿ ಗ್ರಾಮ, ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವ ಮಧ್ಯ, ಗುಟಕಾ ಮುಕ್ತ ಗ್ರಾಮದಲ್ಲಿ ದಿ.29, 30 ಎರಡು ದಿನಗಳ ಕಾಲ ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಶಿಷ್ಠ ರೀತಿಯಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ನಿಟ್ಟಿನಲ್ಲಿ ಹಾಗೂ ವಿಜೃಂಭಣೆಯಿಂದ ನಡೆಸಲು ಸಿದ್ದತೆಗಳು ಅಂತಿಮ ಹಂತದಲ್ಲಿದ್ದು ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಪಟ್ಟಣದಿಂದ 5 ಕೀಮಿ ಅಂತರದಲ್ಲಿರುವ ತೇರಗಾಂವ ಗ್ರಾಮದಲ್ಲೇ ಅಕ್ಷರ ಜಾತ್ರೆ ನಡೆಯಲಿದ್ದು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಗ್ರಾಮೀಣ ಭಾಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಇದೆ ಮೊದಲ ಬಾರಿಗೆ ನಡೆಯುತ್ತಿದ್ದು ಇದರ ಕೀರ್ತಿಯು ತೇರಗಾಂವ ಗ್ರಾಮದ ಮುಡಿಗೆರಲಿದೆ.
ಸುಮಾರು 5500 ಜನಸಂಖ್ಯೆ ಹೊಂದಿರುವ ತೇರಗಾಂವ ಗ್ರಾಮ ತಾಲೂಕಿನ ದೊಡ್ಡ ಗ್ರಾಮವು ಆಗಿದ್ದು ಎಲ್ಲ ಸಮುದಾಯದ ಜನರು ಸಹಬಾಳ್ವೆಯಿಂದ ವಾಸಿಸುವ ಗ್ರಾಮದ ಜನರು ಕೃಷಿಯನ್ನೇ ಅವಲಂಬಿಸಿದ್ದು ಈ ಗ್ರಾಮದವರು ಮಾಡುವ ಮಾವಿನ ಕಸಿ, ಸಸಿ ಮಾರಾಟ ಹೆಸರುವಾಸಿಯಾಗಿದ್ದು ರಾಜ್ಯ ಹೊರ ರಾಜ್ಯಗಳಿಂದ ಇಲ್ಲಿಯ ಮಾವಿನ ಸಸಿಯನ್ನೇ ತೆಗೆದುಕೊಂಡು ಹೊಗುವುದು ಪ್ರಸಿದ್ದಿಯಾಗಿದೆ. ಸಾಕಷ್ಟು ಅಕ್ಷರಸ್ಥರನ್ನು, ಸುಶಿಕ್ಷಿತರನ್ನು ಹೊಂದಿರುವ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿರಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಬ್ಬದ ರೀತಿಯಲ್ಲಿ ಆಚರಿಸುವುದು ಇತರರಿಗೂ ಮಾದರಿಯಾಗಿದೆ.
ಕಳೆದ 2-3 ವರ್ಷಗಳ ಹಿಂದೆ ಗ್ರಾಮದ ಊರಿನ ಹಿರಿಯರ ನಿರ್ಣಯ ಹಾಗೂ ಯುವಕರ ಸಹಕಾರದಿಂದ ಇಂದು ತೇರಗಾಂವ ಗ್ರಾಮದಲ್ಲಿ ಮದ್ಯ ಹಾಗೂ ಗುಟಕಾ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದ್ದು ಗ್ರಾಮದ ಒಳಿತಿಗಾಗಿ, ಸಮಾಜದಲ್ಲಿ ಸಾಮರಸ್ಯಕ್ಕಾಗಿ ಇಲ್ಲಿ ಹಿರಿಯರ ಪಂಚಾಯತಿ ನಿರ್ಣಯವೆಂದರೇ ವೇದವಾಕ್ಯವೆನ್ನುವುದು ಅಷ್ಟೇ ಸತ್ಯ ಇಂತಹ ಗ್ರಾಮದಲ್ಲಿ ದಿ.29 ಹಾಗೂ 30 2 ದಿನಗಳ ಕಾಲ ವಿಶಿಷ್ಠ ರೀತಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಪಟ್ಟಣ, ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಜಿಲ್ಲಾ ಸಮ್ಮೇಳನಗಳನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಇದೆ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಈಗಾಗಲೇ ಅಂತರ್ಜಾಲ ಮೂಲಕವು ಸಾಕಷ್ಟು ಪ್ರಚಾರ ನೀಡಲಾಗಿದ್ದು ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕ ಕವಿಗೊಷ್ಠಿಯನ್ನು ಮಾಡಲಾಗಿರುವುದು ವಿಶೇಷವಾಗಿದೆ.
ಸಮ್ಮೇಳನಕ್ಕೆ 120*120 ಅಡಿ ಅಳತೆಯ ಬೃಹತ್ ಪೆಂಡಾಲ್, 40*30 ಅಳತೆಯ ದೊಡ್ಡ ಸುಂದರ ವೇದಿಕೆ ಸಿದ್ದವಾಗಿದ್ದು 5 ಸಾವಿರ ಜನ ಸೇರುವ ನೀರಿಕ್ಷೆ ಇದ್ದು 2 ದಿನಗಳ ಕಾಲ ಹೆಸರು ಬೆಳೆ ಹಾಗೂ ಗೊದಿ ಪಾಯಸವನ್ನೊಳಗೊಂಡ ಸಿಹಿ ಊಟ ಊಣ ಬಡಿಸುವ ನಿರ್ಣಯವನ್ನು ಸಮೀತಿ ಮಾಡಿದ್ದು 150 ಸಾಹಿತಿಗಳು ಪಾಲ್ಗೊಳ್ಳಲಿರುವ ಸಮ್ಮೇಳನದಲ್ಲಿ ಗ್ರಾಮೀಣ ಭಾರತದ ಸೊಗಡನ್ನು ಬಿಂಬಿಸಲು ಸಾಹಿತ್ಯ ಪರಿಷತ್ನವರು ಸೇರಿ ಪ್ರಮುಖ ಗ್ರಾಮಸ್ಥರು ಪಂಚೆ, ಪೇಟದೊಂದಿಗೆ ಗ್ರಾಮೀಣ ದಿರಿಸನ್ನು ತೊಡಲಿದ್ದು ಹೆಜ್ಜೆ ಮಜಲು, ಡೊಳ್ಳು ಕುಣಿತ, ಕರಡಿ ಮಜಲಿನೊಂದಿಗೆ ರೈತರ ಸಂಸ್ಕøತೀಯನ್ನು ಬಿಂಬಿಸಲು ಶೃಂಗಾರಗೊಂಡಿರುವ ಚಕ್ಕಡಿಗಳ ಸಾಲು, 100 ಮಹಿಳೆಯರಿಂದ ಕುಂಭ ಮೇಳ, ರಸ್ತೆಗಳೆಲ್ಲ ಸಂಪೂರ್ಣ ರಂಗೋಲಿಯಿಂದ ಕಂಗೊಳಿಸಲಿದ್ದು ಸಾಹಿತಿ ಮಾಸ್ಕೇರಿ ಎಂಕೆ ನಾಯಕರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ವಿಜೃಂಭಣೆಯಿಂದ ನಡೆಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಕಸಾಪ ಕಾರ್ಯಾಧ್ಯಕ್ಷ ಸಂತೋಷಕುಮಾರ ಮೆಹಂದಳೆ ಕಳೆದ 4-5 ವರ್ಷಗಳ ಹಿಂದೆ ತಮಗೆ ಬೇಕಾದ ಸಾಹಿತಿಗಳಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ನೀಡಲಾಗುತ್ತಿತ್ತು ಆದರೇ ಈ ಸಂಸ್ಕøತೀಯನ್ನು ಹೊಗಲಾಡಿಸಲು ಈ ಬಾರಿ ಸಾಕಷ್ಟು ಹೊಸಬರಿಗೆ ಅವಕಾಶ ನೀಡಲಾಗಿದ್ದು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೊಡಿ, ಜಿಲ್ಲಾ ಸಹಕಾರ್ಯದರ್ಶಿ ಜಯಚಂದ್ರ, ತಾಲೂಕಾಧ್ಯಕ್ಷ ಉಪೇಂದ್ರ ಘೊರ್ಪಡೆ, ಕೋಶಾಧ್ಯಕ್ಷ ನಾಗೇಶ ನಾಯ್ಕ ನೇತೃತ್ವದಲ್ಲಿ 30 ಜನರ ತಂಡ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದು ಗ್ರಾಮಸ್ಥರ ಸಹಕಾರ ಅಭೂತಪೂರ್ವವಾಗಿದ್ದು ಸಮ್ಮೇಳನ ಅದ್ದೂರಿಯಿಂದ ಯಶಸ್ವಿಯಾಗಿ ನಡೆಯಲಿದೆ ಎಂದು ಮೆಹಂದಳೆ ತಿಳಿಸಿದರು.
Leave a Comment