ದಾಂಡೇಲಿ :
ನಗರದಲ್ಲಿ ಪ್ರತಿ ವರ್ಷದಂತೆ ಸ್ಥಳೀಯ ವೀರಶೈವ ಸಮಾಜÀ ಸೇವಾ ಸಂಘ, ವೀರಭದ್ರೇಶ್ವರ ಟ್ರಸ್ಟ ಅಕ್ಕನಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರರಂದು ಮೃತ್ಯುಂಜಯ ಮಠದಲ್ಲಿ ಆಚರಿಸಲಾಯಿತು.
ಬೆಳಗ್ಗೆ ಮಠದಲ್ಲಿ ಪೂಜಾ ಕಾರ್ಯ ಪೂರ್ಣಗೊಳಿಸಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಮೂಹಿಕ ವಿವಾಹದಲ್ಲಿ ನಾಲ್ಕು ನೂತನ ಜೋಡಿಗೆ ಮಾಂಗಲ್ಯಭಾಗ್ಯ ಕಲ್ಪಿಸಲಾಯಿತು. ನೂತನ ವಧು-ವರರಿಗೆ ನಗರಸಭೆಯ ಅಧ್ಯಕ್ಷ ನಾಗೇಶ ಸಾಳುಂಕೆ ಆರ್ಶೀವದಿಸಿದರು. ಮಧ್ಯಾನ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ವೀರಶೈವ ಸಮಾಜದ ಅಧ್ಯಕ್ಷ ಅಶೋಕ ಪಾಟೀಲ, ಗೌರವಾಧ್ಯಕ್ಷ ಸಿ.ಎಸ್. ವಸ್ತ್ರದ, ಕಾರ್ಯದರ್ಶಿ ಶಿವಬಸಪ್ಪಾ ನರೇಗಲ್, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಂದೀಶ ಮುಂಗರವಾಡಿ, ನಗರಸಭಾ ಸದಸ್ಯ ಅಡಿವೆಪ್ಪಾ ಭದ್ರಕಾಳಿ, ಚನ್ನಬಸವೇಶ್ವರದ ಯುವಕ ಮಂಡಳದ ಅಧ್ಯಕ್ಷ ಶರಣಪ್ಪ ನರೇಗಲ್, ವೀರಭದ್ರೇಶ್ವರ ಕಮಿಟಿಯ, ಅಕ್ಕಮಹಾದೇವಿ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಜೆ ಬಸವೇಶ್ವರದ ಭಾವ ಚಿತ್ರದೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
Leave a Comment