ಹೊನ್ನಾವರ :
ತಾಲೂಕಿನ ಅಳ್ಳಂಕಿಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ (ಹಳ್ಳೇರ್) ಸಮಾಜ & ಸಾಂಸ್ಕøತಿಕ ಕಲಾಭಿವೃದ್ಧಿ ಸಂಘವು 18 ನೇ ವಾರ್ಷಿಕೋತ್ಸವ ಮತ್ತು ಡಾ|| ಬಿ. ಆರ್. ಅಂಬೇಡ್ಕರ್ರವರ 126ನೇ ಜನ್ಮ ದಿನೋತ್ಸವವು ಯಶಸ್ವಿಯಾಗಿ ನಡೆಯಿತು. ಸಂಘದ ಅಧ್ಯಕ್ಷರಾದ ನಾರಾಯಣ ಹಳ್ಳೇರ್ ಅಧ್ಯಕ್ಷತೆ ವಹಿಸಿದ್ದರು . ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ದಲಿತನು ಶಿಕ್ಷಣದಿಂದ ವಂಚಿತನಾಗದೇ ಶಿಕ್ಷಣ ಕಲಿತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿ ಶೋಷಣೆ ದಬ್ಬಾಳಿಕೆ ಬಡತನದಿಂದ ಮುಕ್ತಿ ಹೊಂದಿ ಸಮಾಜದಲ್ಲಿ ಎಲ್ಲಾ ವರ್ಗದವರ ಜೊತೆಯಲ್ಲಿಯೂ ಸಮಾನರಾಗಿ ಬದುಕಲು ಸಾಧ್ಯ ಎಂದರು.
ಗ್ರಾ.ಪಂ. ಅಧ್ಯಕ್ಷರಾದ ರಾಜೇಶ್ವರಿ ನಾಯ್ಕ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಳ್ಳೇರ್ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶ ಹಳ್ಳೇರ್, ಗ್ರಾ,ಪಂ. ಸದಸ್ಯರಾದ ಜಿ.ಟಿ. ಹಳ್ಳೇರ್, ಚಂದ್ರಕಾಂತ ಕೊಚರೇಕರ್, ಈರಮ್ಮ ಹಳ್ಳೇರ್, ಜಿಲ್ಲಾ ಯುವ ಪ್ರಶಸ್ತಿ ವಿಜೇತ ವಿನಾಯಕ ನಾಯ್ಕ ಶಿಕ್ಷಕರಾದ ಸುಬ್ರಾಯ ಹಳ್ಳೆರ್, ಜಯಕರ್ನಾಟಕ ಗ್ರಾಮೀಣ ಘಟಕದ ಅಧ್ಯಕ್ಷರಾದ ಕೃಷ್ಣ ಗೌಡ, ಪ್ರಭು ಹಳ್ಳೇರ್, ನಾರಾಯಣ ಹಳ್ಳೇರ್ ಮತ್ತೀತರರು ಉಪಸ್ಥಿತರಿದ್ದರು.
ಈ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜೊತೆಗೆ ಡಾ|| ಬಿ. ಆರ್. ಅಂಬೇಡ್ಕರ್ ಹಳ್ಳೇರ್ ಯುವಕ ಸಂಘದಿಂದ “ಧರ್ಮದ ಊರಲ್ಲಿ ಕರ್ಮದ ನಾಯಕ” ಎನ್ನುವ ನಾಟಕ ಪ್ರದರ್ಶನ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿಯಾದ ಗಣೇಶ ಹಳ್ಳೇರ್ ಸ್ವಾಗತಿಸಿದರು, ಮಾರುತಿ ಹಳ್ಳೇರ್ ವಂದಿಸಿದರು, ಗಣೇಶ ವಿ. ಹಳ್ಳೇರ್ ಕಾರ್ಯಕ್ರಮವನ್ನು ನಿರೂಪಿಸಿದರು.
Leave a Comment