ಕಾರವಾರ:
ತಾಲೂಕಿನ ಶೇಜವಾಡ ಶೆಜ್ಜೇಶ್ವರ ದೇವಸ್ಥಾನದ ಬಳಿ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ರವರ ಜನ್ಮ ದಿನಾಚರಣೆಯ ಅಂಗವಾಗಿ ಟ್ಯಾಂಕರ ಮೂಲಕ ನೀರು ಪೂರೈಕೆಯ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಶೆಜ್ಜೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರದೀಪ ಶೇಜವಾಡಕರ ಮುತ್ತಪ್ಪ ರೈ ಜನ್ಮ ದಿನದ ನಿಮಿತ್ತ ಕೇಕ್ ಕತ್ತರಿಸಿದರು. ಬಳಿಕ ಸ್ಥಳೀಯ ನಿವಾಸಿಗಳಿಗೆ ಟ್ಯಾಂಕರ ಮೂಲಕ ನೀರು ಪೂರೈಸಲಾಯಿತು. ಬಳಿಕ ವಿಪರೀತ ನೀರಿನ ಸಮಸ್ಯೆ ಇರುವ ಪ್ರದೇಶಗಳಾದ ಮೇಲಿನ ಮಖೇರಿ, ಹಳೆಕೋಟ್, ಕಡವಾಡ ಈ ಪ್ರದೇಶಗಳಿಗೆ ನೀರನ್ನು ಪೂರೈಸಿದರು. ಪ್ರತಿ ದಿನ ಈ ನೀರು ಪೂರೈಕೆ ಅಭಿಯಾನವು ನಡೆಯಲಿದ್ದು ಶಿರವಾಡ, ಕಿನ್ನರ ಮುಂತಾದ ಪ್ರದೇಶಗಳಿಗೂ ನೀರನ್ನು ತಲುಪಿಸಲಾಗುವುದು. ಈ ಅಭಿಯಾನವು ಮಳೆಗಾಲದ ಪ್ರಾರಂಭದ ವರೆಗೂ ನಿರಂತರವಾಗಿ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ದೇವಿದಾಸ ನಾಯ್ಕ, ದಿವ್ಯಾ ದೇವಿದಾಸ ನಾಯ್ಕ, ಸುಭಾಷ ಗುನಗಿ, ಚೇತನ ಹರಿಕಂತ್ರ, ವಿಲಾಸ ಮಹೇಕರ, ಸತೀಶ ನಾಗೇಕರ ಮುಂತಾದವರು ಇದ್ದರು.
Leave a Comment