ಭಟ್ಕಳ:
ತಾಲೂಕಿನಲ್ಲಿ ರಾತ್ರಿ ಹಾಗೂ ಹಗಲು ಸಂದರ್ಭದಲ್ಲಿ ಗಸ್ತು ತಿರುಗಲು ಪೊಲೀಸ್ ಇಲಾಖೆಗೆ ನೀಡಲಾದ ನೂತನ ಹೊಯ್ಸಳ ವಾಹನವನ್ನು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾಧೀಕ್ ಮಟ್ಟಾ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳದ ಪೊಲೀಸ್ ಇಲಾಖೆಗೆ ಹೊಯ್ಸಳ ವಾಹನ ನೀಡಿರುವುದರಿಂದ ಅತೀ ಹೆಚ್ಚು ಪ್ರಯೋಜನವಾಗಲಿದೆ. ಇದರಿಂದ ಯಾವುದೇ ಪ್ರದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ತಕ್ಷಣ ಸ್ಪಂದಿಸಲು ಇಲಾಖೆಗೆ ಅನುಕೂಲವಾಗಲಿದೆಯಲ್ಲದೇ ಅಪಘಾತದಂತಹ ತುರ್ತು ಸಂದರ್ಭದಲ್ಲಿ ಇದು ಉಪಯೋಗವಾಗಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ ಸುರೇಶ ನಾಯಕ ನೂತನ ಹೊಯ್ಸಳ ವಾಹನ ಭಟ್ಕಳ ನಗರ, ಗ್ರಾಮೀಣ ಹಾಗೂ ಮುರ್ಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು ಅಪಘಾತದಂತಹ ಸಂದರ್ಭದಲ್ಲಿ ತುರ್ತು ಸ್ಪಂಧನೆಗೆ ಇಲಾಖೆಗೆ ಸಹಾಯವಾಗಲಿದೆ ಎಂದರು.
ವಾಹನ ಉದ್ಘಾಟಿಸಿದ ನಂತರ ಪಟ್ಟಣದಲ್ಲಿ ಒಂದು ಸುತ್ತು ಸಂಚಾರ ನಡೆಸಿದ ಹೊಯ್ಸಳ ವಾಹನ ನಾಗರೀಕರ ಗಮನ ಸೆಳೆಯುವಲ್ಲಿ ಯಶಸ್ವೀಯಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಎಂ. ಓ. ಶಿವಕುಮಾರ, ವಿಜಯ ಬ್ಯಾಂಕಿನ ನಿವೃತ್ತ ಹಿರಿಯ ವ್ಯವಸ್ಥಾಪಕ ಎಂ. ಆರ್. ನಾಯ್ಕ, ಪುರಸಭೆಯ ಉಪಾಧ್ಯಕ್ಷ ಕೆ. ಎಂ. ಅಷ್ಫಾಕ್, ನಗರ ಠಾಣೆಯ ಪಿಎಸೈಗಳಾದ ಅಣ್ಣಪ್ಪ ಮೊಗೇರ, ಹನುಮಂತಪ್ಪ ಕುಡಗುಂಟಿ, ಗ್ರಾಮೀಣ ಠಾಣೆಯ ಪಿಎಸೈ ಚಂದಾವರ, ರಿಕ್ಷಾ ಚಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.
Leave a Comment