ಕಾರವಾರ:ಜಿಮ್ಗೆ ತೆರೆಳಿದ ಯುವಕ ನಾಪತ್ತೆಯಾಗಿರುವ ಬಗ್ಗೆ ನಗರ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಡಿಬಾಗದ ನಿವಾಸಿ ಗುಲ್ಫಾಮ್ ಶೇಖ್ (19) ನಾಪತ್ತೆಯಾದ ಯುವಕ. ಈತ ಮಂಗಳವಾರ ನಗರದ ಪಿಕಳೆ ಆಸ್ಪತ್ರೆ ಸಮೀಪದ ಜಿಮ್ಗೆ ತೆರಳಿದ್ದನು. ಆತನನ್ನು ಸ್ವಂತ ಅವರ ತಂದೆ ತನ್ನ ಆಟೋದಲ್ಲಿ ಜಿಮ್ನ ಎದುರಿನ ರಸ್ತೆ ಬಳಿ ಬಿಟ್ಟು ಬಂದಿದ್ದರು. ಆದರೆ ಗುಲ್ಫಾನ್ ಜಿಮ್ಗೆ ತೆರಳದೇ ಮನೆಗೂ ಬಾರದೇ ಕಾಣಿಯಾಗಿದ್ದಾನೆ. ಕುಟುಂಬದವರು ಸ್ನೇಹಿತರ ಹಾಗೂ ಸಂಬಂಧಿ ಮನೆಯಲ್ಲಿ … [Read more...] about ನಾಪತ್ತೆಯಾದ ಯುವಕ
ಠಾಣೆ
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರಿಕ್ಷೆ ಜುಲೈ 23 ಕ್ಕೆ
ಕಾರವಾರ:ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯವತಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ ನಾಗರಿಕ (ಪುರುಷ ಹಾಗೂ ಮಹಿಳೆ) ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರಿಕ್ಷೆಯು ಜುಲೈ 23 ರಂದು ಕಾರವಾರ ಹಾಗೂ ಅಂಕೋಲಾ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಈಗಾಗಲೇ ಅರ್ಹ ಎಲ್ಲ ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದು, ಅದನ್ನು ಪಡೆದು ಪರೀಕ್ಷೆಗೆ ಹಾಜರಾಗಬೇಕು. ಜಿಲ್ಲೆಯಲ್ಲಿ ಒಟ್ಟು 9,280 ಅಭ್ಯರ್ಥಿಗಳು ನೋಂದಣಿ … [Read more...] about ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರಿಕ್ಷೆ ಜುಲೈ 23 ಕ್ಕೆ
ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ
ಕಾರವಾರ:ಶಿರವಾಡ ಯುವಕನೊಬ್ಬ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಗಾರಪ್ಪನಗರದ ನಿವಾಸಿ ಪರಶುರಾಮ ಗೋಪಾಲ ವಡ್ಡರ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಈತನ ವಿರುದ್ಧ ಗೋವಾ ಹಾಗೂ ಕಾರವಾರ ಗ್ರಾಮೀಣ ಠಾಣೆಯಲ್ಲಿ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿವೆ ಎನ್ನಲಾಗಿದೆ. ಹೀಗಾಗಿ ನ್ಯಾಯಾಲಯದಿಂದ ವಿವಿಧ ಕೇಸುಗಳ ವಾರಂಟ್ ಸಹ ಜಾರಿಯಾಗಿತ್ತು. ಇದರಿಂದ ಜಿಗುಪ್ಸೆ ಹೊಂದಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು … [Read more...] about ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ
ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ
ಭಟ್ಕಳ:ತಾಲೂಕಿನಲ್ಲಿ ರಾತ್ರಿ ಹಾಗೂ ಹಗಲು ಸಂದರ್ಭದಲ್ಲಿ ಗಸ್ತು ತಿರುಗಲು ಪೊಲೀಸ್ ಇಲಾಖೆಗೆ ನೀಡಲಾದ ನೂತನ ಹೊಯ್ಸಳ ವಾಹನವನ್ನು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾಧೀಕ್ ಮಟ್ಟಾ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳದ ಪೊಲೀಸ್ ಇಲಾಖೆಗೆ ಹೊಯ್ಸಳ ವಾಹನ ನೀಡಿರುವುದರಿಂದ ಅತೀ ಹೆಚ್ಚು ಪ್ರಯೋಜನವಾಗಲಿದೆ. ಇದರಿಂದ ಯಾವುದೇ ಪ್ರದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ತಕ್ಷಣ … [Read more...] about ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ
ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕನ ಉಪಟಳ
ಹೊನ್ನಾವರ:ತಾಲೂಕಿನ ಅರೇಅಂಗಡಿ ಹಿ.ಪ್ರಾ ಶಾಲೆಯಲ್ಲಿ ಡಾನ್ಸ ಪ್ರಾಕ್ಟೀಸ್ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕ ಉಪಟಳ ನೀಡಿದ್ದಲ್ಲದೇ ಇದನ್ನು ಪ್ರಶ್ನಿಸಲು ಬಂದ ಎಸಿಡಿಎಮ್ಸಿ ಅಧ್ಯಕ್ಷರಿಗೆ ಹೊಡೆದಿರುವ ಕುರಿತು ಹಲ್ಲೆಗೊಳಗಾದ ಎಸ್ಡಿಎಮ್ಸಿ ಅಧ್ಯಕ್ಷ ಹೊನ್ನಾವರ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ದೂರು ನೀಡಿದ್ದಾರೆ. ತಾಲೂಕಿನ ಅರೇಅಂಗಡಿಯ ಹಿ.ಪ್ರಾ. ಶಾಲೆಯಲ್ಲಿ ಈ ಘಟನೆ ನಡೆದಿರುವುದಾಗಿ ಎಸ್ಡಿಎಮ್ಸಿ ಅಧ್ಯಕ್ಷ ಗೋಪಾಲ … [Read more...] about ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕನ ಉಪಟಳ