ದಾಂಡೇಲಿ:
ಆನ್ಲೈನ್ನಲ್ಲಿ ವಸ್ತುಗಳನ್ನು ನೀಡುವ ವಂಚನೆ ಪ್ರಕರಣಕ್ಕೆ ಸಂಬಂದಿಸಿ ಗ್ರಾಹಕರೊಬ್ಬರಿಗೆ ದೂರವಾಣಿಯಲ್ಲಿ ಜೀವ ಬೆದರಿಕೆ ಹಾಕುತ್ತಿದ್ದ ದೂರಿನ ಹಿನಲೆಯಲ್ಲಿ ಚಿತ್ರದುರ್ಗದ ಚಳಕೆರೆ ಪೋಲಿಸರು ದಾಂಡೇಲಿಯ ಜಂಗಲ್ಲಾಡ್ಜ್ ಎಂಡ್ ರೆಸಾರ್ಟನ ಉದ್ಯೋಗಿ ಉತ್ತರ ಪ್ರದೇಶ ಮೂಲದ ಸಂಜಯಕುಮಾರ ರಜಪೂತ್ ಎಂಬರನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಟಿವಿಯೊಂದರಲ್ಲಿ ಬರುತ್ತಿದ್ದ ಜಾಹಿರಾತನ್ನು ವೀಕ್ಷಿಸಿದ ಚಳಕೆರೆಯ ಎನ್. ಮನುರವರು ಜಶಹಿರಾತಿನಲ್ಲಿ ಹೇಳಿದಂತೆ ಆನ್ಲೈನ್ನಲಿ ಕ್ರೀಂ ಪ್ರಾಡಕ್ಟ್ ಒಂದಕ್ಕೆ ಅಪ್ಲಾಯ್ ಮಾಡಿದ್ದರು. ಆದರೆ ಅವನಿಗೆ ಅವರು ಜಾಹಿರಾತಿನಲ್ಲಿ ಹೇಳಿದಂತಹ ಸಾಮಗ್ರಿ ಬಂದಿರಲಿಲ್ಲ. ಈ ಬಗ್ಗೆ ಎನ್. ಮನು ಚಳಕೆರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆನ್ಲೈನ್ನಲ್ಲಿ ಮೋಸ ಮಾಡುತ್ತಿದ್ದ ಉತ್ತರ ಪ್ರದೇಶ ವ್ಯಕ್ತಿ ಹಾಗೂ ದಾಂಡೇಲಿಯ ಜಂಗಲ್ ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ ಸಂಜಯಕುಮಾರ ರಜಪೂತ ಎಂಬವರು ಗೆಳೆಯರು ಎನ್ನಲಾಗಿದೆ. ಉತ್ತರ ಪ್ರದೇಶ ಮೂಲದ ಆ ವ್ಯಕ್ತಿ ತನ್ನೂರಿನ ದಾಂಡೇಲಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಗೆಳೆಯ ಸಂಜಯಕುಮಾರಗೆ ತನ್ನ ಮೇಲೆ ಚಳ್ಳಕೆರೆಯ ವ್ಯಕ್ತಿ ದೂರು ನೀಡಿದ್ದ ವಿಷಯ ತಿಳಿಸಿದಾಗ ಈ ಸಂಹಯಕುಮಾರ ರಜಪೂತ ಚಳಕೆರೆಯ ವ್ಯಕ್ತಿಗೆ ಪೋನ್ ಮಾಡಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದು ಕೂಡಾ ಚಳಕೆರೆ ಪೋಲಿಸ್ ಠಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣದ ಬೆನ್ನು ಹತ್ತಿದ ಚಳಕೆರೆ ಪೊಲಿಸರು ದಾಂಡೇಲಿಗಾಗಮಿಸಿ, ದಾಂಡೇಲಿಯ ನಗರ ಠಾಣೆಯ ಪಿ.ಎಸ್.ಐ ಕುಮಾರ ಹಾಡಕರ ಅವರ ಸಹಕಾರದೊಂದಿಗೆ ಜಂಗಲ್ಲಾಡ್ಜ್ ಎಂಡ್ ರೆಸರ್ಟ ಉದ್ಯೋಗಿ ಉತ್ತರ ಪ್ರದೇಶ ಮೂಲದ ಸಂಜಯಕುಮಾರ ರಜಪೂತನನ್ನು ಬಂದಿಸಿ ಕರೆದೊಯ್ದಿದ್ದಾರೆ.
Leave a Comment