ಭಟ್ಕಳ:
ಮುರ್ಡೇಶ್ವರದಲ್ಲಿ ತೆರವು ಕಾರ್ಯಾಚರಣೆಯಿಂದ ನೆಲೆ ಕಳೆದು ಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸುವ ನಿಟ್ಟಿನಲ್ಲಿ ಮಂಗಳವಾರ ಶಾಸಕ ಮಂಕಾಳ ವೈದ್ಯ ಹಿರಿಯ ಅಧಿಕಾರಿಗಳೊಂದಿಗೆ 3 ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಇದಕ್ಕೂ ಮೊದಲು ಭಟ್ಕಳದ ಉಪ ವಿಭಾಗಾಧಿಕಾರಿ ಎಂ. ಎನ್ ಮಂಜು ನಾಥ್, ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ವಿವಿಧ ಇಲಾಖೆಯ ಅಧಿಕಾರಿ ಗಳೊಂದಿಗೆ ಕಡಲತೀರಕ್ಕೆ ತೆರಳಿ ಅಂಗಡಿ ಗಳನ್ನು ತೆರೆಯಲು ಗುರುತು ಹಾಕುವ ಕಾರ್ಯ ಆರಂಭಿಸಿದರು. ಆದರೆ ಮೀನು ಗಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಅಗತ್ಯ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದಾಗ, ಪರ್ಯಾಯ ಕ್ರಮದ ಬಗ್ಗೆ ಚರ್ಚಿಸಲು ಮುರ್ಡೇಶ್ವರದ ಪ್ರವಾಸಿ ಗೃಹದಲ್ಲಿ ಶಾಸಕರು ಅಧಿಕಾರಿ ಗಳೊಂದಿಗೆ ಚರ್ಚಿಸಿದರು.
ಸಭೆಯ ನಡುವೆ ದೂರವಾಣಿ ಮೂಲಕ ಜಿಲ್ಲಾಧಿಕಾರಿಯೊಂದಿಗೂ ಮಾತನಾಡಿದ ಶಾಸಕ ವೈದ್ಯ, ಮುರ್ಡೇಶ್ವರದಲ್ಲಿನ ಸದ್ಯದ ಪರಿಸ್ಥಿತಿ, ಗೂಡಂಗಡಿಕಾರರು ಹಾಗೂ ಮೀನು ಗಾರರ ನಡುವೆ ಇರುವ ಗೊಂದಲ, ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಬಳಿಕ ಸಭೆಯಲ್ಲಿ, ಕಡಲ ತೀರದ ನೀಲನಕ್ಷೆಯಲ್ಲಿ ಖಾಲಿ ಇರುವ ಜಾಗಗಳಲ್ಲಿ, ಶಾಶ್ವತ ಕಟ್ಟಡ ನಿರ್ಮಾಣ ಆಗುವವರೆಗೂ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿ ಮೀನುಗಾರರಿಗೆ ತೊಂದರೆ ಯಾಗದಂತೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಯಿತು.
ಪ್ರವಾಸೋದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಶಾಂತಿ ಕದಡದಂತೆ ಕಟ್ಟೆ ಚ್ಚರ ವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೈದ್ಯ, ಪ್ರವಾಸೋದ್ಯಮ ಇಲಾಖೆಯಿಂದ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಅಗತ್ಯ ಅನುದಾನವನ್ನು ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ್ ವಿ. ಎನ್ ಬಾಡ್ಕರ್, ಕಾರ್ಯನಿರ್ವಾಹಕ ಅಧಿಕಾರಿ ಸಿ. ಟಿ ನಾಯ್ಕ, ಸಿಪಿಐ ಸುರೇಶ ನಾಯಕ, ಜಿಲ್ಲಾಪಂಚಾಯ್ತಿ ಸದಸ್ಯ ಅಲ್ಬರ್ಟ್ ಡಿಕೋಸ್ತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವಿಠ್ಠಲ ನಾಯ್ಕ, ಚಂದ್ರಶೇಖರ ಗೌಡ ಇದ್ದರು.
Leave a Comment