ಕಾರವಾರ:
ನಗರದ ಜೆಎಂಎಫ್ಸಿ ನ್ಯಾಯಾಲಯದ ಎದುರಿನ ಎಂ.ಜಿ.ರಸ್ತೆಯಲ್ಲಿ ಮಾವಿನ ಹಣ್ಣು ವ್ಯಾಪಾರ ಮಾಡುವ ಮಹಿಳೆಗೆ ರಸ್ತೆಯ ಬದಿಯಲ್ಲಿ ಸಂಚಾರಿ ಕಾನೂನಿನ ಸೂಚನಾ ಪಟ್ಟಿಗೆ ಹಾಕಲಾದ ಬಿಸಿ ಪೇಂಟ್ ತಗಲಿ, ಕಾಲು ಸುಟ್ಟುಕೊಂಡ ಘಟನೆ ನಡೆದಿದೆ.
ಅಂಕೋಲಾದ ನಿವಾಸಿ ಪ್ರೇಮಾ ಜಡ್ಡಿಗದ್ದೆ ಕಾಲು ಸುಟ್ಟುಕೊಂಡ ವ್ಯಾಪಾರಿ. ನಗರಸಭೆಯು ನಗರದ ರಸ್ತೆಯಲ್ಲಿ ಪೇಂಟ್ ಮಾಡಲಾದ ಸಂಚಾರಿ ನಿಯಮಗಳ ಸೂಚನೆಗಳನ್ನು ಪೇಂಟ್ ಮೂಲಕ ಬರೆಯಲು ಟೆಂಡರ್ ನೀಡಲಾಗಿದೆ. ಅದರಂತೆ ಸಂಚಾರಿ ನಿಯಮಗಳನ್ನು ಸೂಚಿಸುವ ಚಿಹ್ನೆಯನ್ನು ರಸ್ತೆಯ ಅಂಚಿನಲ್ಲಿ ಬಿಡಿಸುವ ಕಾರ್ಯ ನಡೆದಿತ್ತು. ಮಶೀನ್ ಮೂಲಕ ಬಿಸಿ ಪೇಂಟ್ನ್ನು ಎಕ್ಯೂರೆಟ್ ಆಗಿ ರಸ್ತೆಯಲ್ಲಿ ಲೈನ್ ಎಳೆಯಲಾಗಿತ್ತು. ಪಕ್ಕದ ಅಂಗಡಿಗೆ ಚಹಾ ಕುಡಿಯಲು ಬರಿಗಾಲಲ್ಲಿ ಹೋದ ವ್ಯಾಪಾರಿಯು ವಾಪಸ್ ಬರುತ್ತಿರುವಾಗ ಆಕಸ್ಮಿಕವಾಗಿ ಲೈನ್ ಎಳೆದ ಪೇಂಟ್ ಮೇಲೆ ಕಾಲಿಟ್ಟಿದ್ದಾಳೆ. ಬಿಸಿ ಪೇಂಟ್ ಅವಳ ಕಾಲನ್ನು ಸುಟ್ಟಿದೆ. ಆ ನೋವನ್ನು ತಾಳಲಾಗದ ಮಹಿಳೆ ಅಲ್ಲಿಯೇ ಅಶ್ವಸ್ಥಳಾಗಿದ್ದಾಳೆ. ತಕ್ಷಣ ಸ್ಥಳೀಯರ ನೆರವಿನಿಂದ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ
Leave a Comment