ಕಾರವಾರ:
ಅಂಧವಿಶ್ವಾಸ, ಅನಾಚಾರ, ಮೂಢ ನಂಬಿಕೆಯಿಂದ ಮುಕ್ತರಾಗಿ ಜೀವಿಸುತ್ತಿರುವ ಜಿಲ್ಲೆಯ ಕುಮಟಾ ಮತ್ತು ಗಂಗಾವಳಿ ಭಾಗದ ಸಲಫಿ ಮುಸ್ಲಿಮರು ಐಸಿಸ್ ನಂಟು ಹೊಂದಿದ್ದಾರೆ ಎಂದು ಅದೇ ಭಾಗ ಸುನ್ನಿ ಮುಸ್ಲಿಮರು ಸುಳ್ಳು ಆರೋಪ ಮಾಡಿ ಕಿರುಕುಳ, ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ಸಲಫಿ ಮೂವ್ಮೆಂಟ್ನ ಕೇಂದ್ರೀಯ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲಫಿ ಮೂವ್ಮೆಂಟ್ ಪ್ರಗತಿಪರ ಮುಸ್ಲಿಂ ಸಂಘಟನೆಯಾಗಿದೆ. ದಕ್ಷಿಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೂಢ ನಂಬಿಕೆ, ಕಂದಾಚಾರ, ಅನಕ್ಷರತೆ, ಧಾರ್ಮಿಕ ಅಸಹಿಷ್ಣುತೆ, ಕೋಮುವಾದ, ಉಗ್ರವಾದ, ಮತೀಯ ವೈಷಮ್ಯ, ಸ್ತ್ರೀ ಶೋಷಣೆಗಳಂಥ ಸಾಮಾಜಿಕ ಅನಿಷ್ಟತೆಗಳ ವಿರುದ್ಧ ಜನ ಜಾಗೃತಿ ಮೂಡಿಸುತ್ತಿರುವ ಕಾರ್ಯದಲ್ಲಿ ತೊಡಗಿಕೊಂಡಿದೆ.
ಮುಸ್ಲಿಂ ಸಮಾಜವನ್ನ ಸುಶಿಕ್ಷಿತ, ಸುಸಂಸ್ಕøತ, ದೇಶನಿಷ್ಠ ಸಮಾಜವಾಗಿ ರೂಪಿಸುವ ಸಾಮಾಜಿಕ ಆಂದೋಲನವನ್ನು ಸಲಫಿ ಮುಸ್ಲಿಮರು ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಸಲಫಿ ಮೂವ್ಮೆಂಟ್ನ ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಇವುಗಳಲ್ಲಿ ಗಂಗಾವಳಿಯ ಎಂಟು ಕುಟುಂಬಗಳ ಮೇಲೆ ಸುನ್ನಿ ಪಂಗಡದವರು ಕಳೆದ ನಾಲ್ಕೈದು ವರ್ಷಗಳಿಂದ ಅಮಾನುಷ ದೌರ್ಜನ್ಯ ಎಸಗುತ್ತಿದ್ದಾರೆ. ಗಂಗಾವಳಿಯಲ್ಲಿ ಸಲಫಿಗಳ ವಿವಾಹ ಕಾರ್ಯಗಳಿಗೆ ಬಹಿಷ್ಕಾರ ಹಾಕಲಾಗುತ್ತಿದೆ. ಶವ ಸಂಸ್ಕಾರಕ್ಕೆ ಅಡ್ಡಿ ಪಡಿಸಲಾಗುತ್ತಿದ್ದು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದರು. ಸಲಫಿಗಳ ಭಾವಚಿತ್ರಗಳನ್ನು ಅಶ್ಲೀಲಗೊಳಿಸಿ ಸಾಮಾಜಿಕ ಜಾಲ ತಾಣಗಳಿಗೆ ಹಾಕುವಂಥ ದುಷ್ಕøತ್ಯಗಳು ನಡೆಯುತ್ತಿದೆ. ಅಲ್ಲದೇ ನೀವು ಸಲಫಿ ಬಿಟ್ಟು ಸುನ್ನಿ ಪಂಗಡಕ್ಕೆ ಸೇರಬೇಕು ಎಂದು ದಬ್ಬಾಳಿಕೆ ನಡೆಸುತ್ತಾರೆ. ಸಲಫಿಗಳಿಗೆ ಐಸಿಸ್ ಉಗ್ರಗಾಮಿ ಸಂಘಟನೆಯ ನಂಟಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಅನ್ಯ ಧರ್ಮೀಯರಿಗೆ ಸಲಫಿಗಳ ಮೇಲೆ ಕೋಮು ದ್ವೇಷ ಕೆರಳುವಂತೆ ಪ್ರಚೋದಿಸಲಾಗುತ್ತಿದೆ. ಆದರೆ ಗಂಗಾವಳಿ ಭಾಗದ ಅನ್ಯ ಧರ್ಮೀಯರು ಒಳ್ಳೆಯ ಮನಸ್ಸಿನವರಾಗಿರುವ ಹಿನ್ನೆಲೆಯಲ್ಲಿ ಇದುವರೆಗೂ ಕೋಮು ಗಲಭೆಗೆ ಅವಕಾಶ ನೀಡಿಲ್ಲ ಎಂದರು.
ಗಂಗಾವಳಿಯಲ್ಲಿದ್ದ ಒಟ್ಟು ಎಂಟು ಸಲಫಿ ಕುಟುಂಬಗಳ ಪೈಕಿ ಸುನ್ನಿ ಪಂಗಡದವರ ದೌರ್ಜನ್ಯ ತಡೆಯಲಾಗದೆ ಒಂದು ಕುಟುಂಬ ಈಗಾಗಲೇ ಫಲಾಯನ ಮಾಡಿದೆ. ಇನ್ನುಳಿದ ಏಳು ಕುಟುಂಬಗಳು ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಿವೆ. ಸಲಫಿ ಕುಟುಂಬದ ಮಹಿಳೆಯೊಬ್ಬರ ಮೇಲೆ ದೌರ್ಜನ್ಯವಾಗಿರುವ ಕುರಿತು ಗೋಕರ್ಣ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಯಾವುದೋ ಆಮಿಷಕ್ಕೆ ಒಳಗಾಗಿ ಅಥವಾ ಯಾರದೋ ಪ್ರಭಾವಕ್ಕೆ ಒಳಗಾಗಿರುವ ತಮ್ಮ ದೂರುಗಳನ್ನು ಸ್ವೀಕರಿಸುತ್ತಿಲ್ಲ. ದೂರ ನೀಡಲು ತೆರಳಿದ್ದರೂ ಪೊಲೀಸರು ಸಹ ವಿನಾಕಾರಣ ತಮ್ಮ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅವರಿಗೆ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಅವರಿಗೂ ಸಹ ದೂರು ನೀಡಿದ್ದೇವೆ. ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭಾವಿಸಿದ್ದೇವೆ. ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಅಲ್ಲದೇ ಪಶ್ಚಿಮ ವಲಯದ ಐಜಿಪಿಗೂ ದೂರು ನೀಡಲಾಗಿದೆ. ಸರಕಾರ ಸಲಫಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಅಲ್ ಹದೀಸ್ ಹೆಸರಿನಲ್ಲಿ ಸಲಫಿ ಮೂವ್ಮೆಂಟ್ ಮೊದಲಿಂದಲೂ ನಡೆಯುತ್ತಿದೆ. ಮೂಲ ಮುಸ್ಲಿಂ ಧರ್ಮದಲ್ಲಿ ಏಕ ದೇವೋಪಾಸನೆ ಇದೆ. ಇದರ ಪ್ರಕಾರ ಮುಸ್ಲಿಮರು ಪ್ರವಾದಿಗಳ ಆಚಾರ ವಿಚಾರಗಳನ್ನು ಮೇಲೆ ನಡೆಯುತ್ತಿದೆ. ಸೃಷ್ಟಿಕರ್ತನ್ನೇ ಮಾತ್ರ ಆರಾಧನೆ ಮಾಡಬೇಕು ಎನ್ನವು ನಂಬಿಕೆಯನ್ನು ಸಲಫಿಗಳು ಹೊಂದಿದಾರೆ. ಸುನ್ನಿ ಪಂಗಡದಲ್ಲಿ ಎಲ್ಲ ಮೃತ ಪುಣ್ಯಾತ್ಮರ ಗೋರಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಸಲಫಿಗಳ ಪ್ರಕಾರ ಇದು ತಪ್ಪು. ಅಲ್ಲದೇ ಸಲಫಿಗಳಲ್ಲಿ ಮಹಿಳೆಯರಿಗೂ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಇಂಥಹ ಕೆಲ ಆಚರಣೆಯ ವ್ಯತ್ಯಾಸಗಳು ಸಲಫಿ ಮತ್ತು ಸುನ್ನಿ ಪಂಗಡಗಳ ನಡುವೆ ಇದೆ.
ಮೊದಲು ಸುನ್ನಿ ಪಂಗಡಕ್ಕೆ ಸೇರಿದ್ದ ಹಲವು ಮುಸ್ಲಿಂ ಕುಟುಂಬಗಳು ಬಳಿಕ ಸಲಫಿಗಳಾಗಿದ್ದಾರೆ. ಗಂಗಾವಳಿ ಭಾಗದ ಏಂಟು ಮುಸ್ಲಿಂ ಕುಟುಂಬದವರು ಮೊದಲು ಸುನ್ನಿಗಳಾಗಿದ್ದರು. ಐದು ವರ್ಷಗಳ ಹಿಂದೆ ಇವರು ಸಲಫಿಗಳಾಗಿ ಪರಿವರ್ತನೆಯಾಗಿದ್ದಾರೆ ಎಂದು ಇಸ್ಮಾಯಿಲ್ ಶಾಫಿ ತಿಳಿಸಿದರು.
ಸಲಫಿ ಮೂವ್ಮೆಂಟ್ನ ಪ್ರಮುಖರಾದ ಅಹ್ಮದ್ ಅನ್ಸಾರ್, ಟಿ. ಎಂ. ಹನೀಫ್, ಮಹಮ್ಮದ್ ಹಾರೀಸ್, ರಿಯಾಜ್ ಅಹಮ್ಮದ್ ಇತರರು ಇದ್ದರು.
Leave a Comment