ಹೊನ್ನಾವರ:
ಪಟ್ಟಣದ ಬಸ್ ನಿಲ್ದಾಣ ಪಕ್ಕದ ಶನಿ ದೇವಾಲಯದಲ್ಲಿ ಮೇ 9 ಮತ್ತು ಮೇ 10 ರಂದು 11ನೇ ವಾರ್ಷಿಕ ವರ್ಧಂತಿ ನಡೆಯಲಿದೆ.
ಮೇ 9ರಂದು ಸಂಜೆ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿಯವರು ದೇವರಿಗೆ ರಜತ ಉತ್ಸವ ಮೂರ್ತಿ ಸಮರ್ಪಿಸಲಿದ್ದಾರೆ. ಸಾಗರ ಶನಿ ಕ್ಷೇತ್ರದ ದುರ್ಗಪ್ಪನವರು ಪಾಲ್ಗೊಳ್ಳುವರು. ನಂತರ ವಾಸ್ತು ಹವನ ಧಾರ್ಮಿಕ ಕಾರ್ಯಕ್ರಮ ರಾತ್ರಿ ಯಕ್ಷಗಾನ ನಡೆಯಲಿದೆ.
ಮೇ 10ರಂದು ಬೆಳಿಗ್ಗೆ ಶನಿಶಾಂತಿ, ಪತಂಜಲಿ ವೀಣಾಕರ ಪ್ರವಚನ ನೀಲಗೋಡ ಕ್ಷೇತ್ರದ ಮಹಾದೇವ ಸ್ವಾಮಿಯವರು ಉಪಸ್ಥಿತಿ ರಾತ್ರಿ ಕಲಾಶ್ರೀ ಬಳಗದ ಯಕ್ಷಗಾನ ನಡೆಯಲಿದೆ.
ಹಿರಿಯ ಯಕ್ಷಗಾನದ ಕಲಾವಿದರಾದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಜಲವಳ್ಳಿ ವೆಂಕಟೇಶ್ ರಾವ್ ಪಾಲ್ಗೊಳ್ಳುವರು. ನಂತರ ಪ್ರಥಮ ಬಯಲಾಟ ನಡೆಯಲಿದೆ ಎಂದು ಶನಿ ದೇವಾಲಯದ ಟ್ರಸ್ಟಿನ ಅಧ್ಯಕ್ಷ ಸುಬ್ರಾಯ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment