• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಹಿಳೆಯರು ಆರ್ಥಿಕವಾಗಿ ಸಶಕ್ತರಾಗಬೇಕು- ರಾಧಾ ದೇಶಪಾಂಡೆ

May 7, 2017 by Sachin Hegde Leave a Comment

ದಾಂಡೇಲಿ:

ಮಹಿಳೆ ಮನಸ್ಸು ಮಾಡಿದರೇ ಏನನನ್ನು ಸಾಧಿಸಬಹುದೆಂಬುದನ್ನು ವಿಶ್ವವೆ ಕಂಡಿದೆ. ಇಂದು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿರುವುದು ಮಹಿಳಾ ಶಕ್ತಿಯ ಸಂಕೇತ. ಮಹಿಳೆಯರು ಕೇವಲ ಮನೆ ನಿರ್ವಹಣೆಗೆ ಮಾತ್ರ ಸೀಮಿತವಾಗದೇ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಮುಂದಡಿಯಿಡಬೇಕು. ಮಹಿಳೆಯರು ಆರ್ಥಿಕವಾಗಿ ಸಶಕ್ತರಾದಾಗ ಇಡಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಇದರ ಧರ್ಮದರ್ಶಿ ರಾಧಾ ದೇಶಪಾಂಡೆ ಹೇಳಿದರು.

ಅವರು ಶ್ರೀ ವಿ.ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ, ಹಳಿಯಾಳ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ವಿಸ್ತರಣಾ ಶಾಖೆ ದಾಂಡೇಲಿ ಇವರ ಸಂಯುಕ್ತ ಆಶ್ರಯದಲ್ಲಿ ಗಣೇಶ ನಗರ ಹಾಗೂ ನವಗ್ರಾಮದಲ್ಲಿ ಶನಿವಾರ ಕೈತೋಟ ಹಾಗೂ ತಾರಸಿ ತೋಟ ಪಲಾನುಭವಿಗಳಿಗೆ ಉಚಿತ ರೋಸ ಕ್ಯಾನ್ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಮಹಿಳೆಯರನ್ನು ಸಮಾಜದ ಮುಖ್ಯಭೂಮಿಕೆಗೆ ತರಬೇಕೆಂಬ ಮಹತ್ವದ ಉದ್ದೇಶದಿಂದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಮಹಿಳಾ ಸ್ವ ಸಹಾಯ ಸಂಘಗಳನ್ನು ಪ್ರವರ್ತಿಸಿಕೊಂಡು ಮಹಿಳೆಯರಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚೈತನ್ಯ ನೀಡುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ. ಮಹಿಳೆಯರು ಸಂಸಾರ ನಿರ್ವಹಣೆಯ ಜೊತೆ ಸಮಯ ಹಾಳು ಮಾಡದೇ ಉಳಿದ ಸಮಯದಲ್ಲಿ ಕೈ ತೋಟಗಳಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂಸಾರದ ಆಧಾರಸ್ತಂಭವಾಗಬೇಕೆಂದು ರಾಧಾ ದೇಶಪಾಂಡೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ನಗರಸಭಾ ಸದಸ್ಯೆ ಯಾಸ್ಮೀನ್ ಕಿತ್ತೂರ ಮಾತನಾಡಿ ಸಚಿವ ದೇಶಪಾಂಡೆಯವರ ಸಾಮಾಜಿಕ ಕಳಕಳಿಯ ಫಲವಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿಯ ಜನ್ಮವಾಗಿದೆ. ಸಚವರ ಆಶಯದಂತೆ ಸಮುದಾಯಾಭಿವೃದ್ಧಿ ಚಟುವಟಿಕೆಗಳಲ್ಲಿ ದೇಶಪಾಂಡೆ ಆರ್ ಸೆಟಿ ದಿಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಕಲ್ಯಾಣ ಸಂಸ್ಥೆಯಾಗಿ ಗಮನ ಸೆಳೆದಿದೆ ಎಂದರು.

ಸಹೇಲಿ ಟ್ರಸ್ಟ್ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿಯವರು ಮಾತನಾಡಿ ಕೈತೋಟ ಹಾಗೂ ತಾರಸಿ ತೋಟದ ಸಸಿಗಳನ್ನು ನಮ್ಮ ಮಕ್ಕಳ ಹಾಗೆ ಬೆಳಸಬೇಕೆಂದು ಹೇಳಿದರು ಅದಕ್ಕಾಗಿ ಈ ಉಚಿತ ರೋಸ ಕ್ಯಾನನನ್ನು ಶ್ರೀ ವಿ.ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ನೀಡಿದ್ದು, ಇದನ್ನು ಸದ್ಬಳಕೆ ಮಾಡಬೇಕೆಂದು ತಿಳಿಸಿದರು.

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಹಳಿಯಾಳ ನಿರ್ದೇಶಕ ರವೀಂದ್ರ ರೇವಣಕರ ಮಾತನಾಡಿ ಇಂದು ನಾವು ಸಾಂಕೇತಿಕವಾಗಿ ಗಣೇಶ ನಗರ ಹಾಗೂ ನವಗ್ರಾಮದಲ್ಲಿ 300 ರೋಸ ಕ್ಯಾನ ವಿತರಣೆ ಮಾಡುತ್ತಿದ್ದು, ಒಟ್ಟು 2000 ಪಲಾನುಭವಿಗಳಿಗೆ ನೀಡುವ ಯೋಜನೆಯನ್ನು ಮಾಡಿದೆ. ತೋಟಗಾರಿಕೆ ಇಲಾಖೆಯವರಿಂದ ಪಲಾನುಭವಿಗಳ ಆಯ್ಕೆಯಂತೆ ರೋಸ ಕ್ಯಾನ ವಿತರಣೆ ಮಾಡಲಾಗುವುದು ಎಂದರು.

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಹಳಿಯಾಳ ಯೋಜನಾ ಸಂಯೋಜಕ ವಿನಾಯಕ ಚವ್ಹಾಣರವರು ಉಪಸ್ಥಿತರಿದರು. ಯೋಜನಾಧಿಕಾರಿ ಶ್ರೀನಿವಾಸ ಎಸ್.ಕೆ ಕಾರ್ಯಕ್ರಮ ನಿರ್ವಹಿಸಿದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ದಾಂಡೇಲಿಯ ಸಿಬ್ಬಂದಿಗಳು ಕಾರ್ಯಕ್ರಮ ನಡೆಸಿಕೊಟ್ಟರು.

watermarked 06Dandeli2

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, National News Tagged With: ಆರ್ಥಿಕ, ಕೆನರಾ ಬ್ಯಾಂಕ್, ಕೈತೋಟ, ಗಣೇಶ ನಗರ, ತಾರಸಿ, ತೋಟ, ದಾಂಡೇಲಿ, ನವಗ್ರಾಮ, ಮನಸ್ಸು, ಮಹಿಳೆ, ರಾಧಾ ದೇಶಪಾಂಡೆ, ರೋಸ ಕ್ಯಾನ, ಶಕ್ತಿ, ಶನಿವಾರ, ಸದೃಢ, ಸಶಕ್ತ, ಸಸಿ, ಹಳಿಯಾಳ, ಹಾಗೂ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...