ದಾಂಡೇಲಿ :
ನಗರದ ಹಳಿಯಾಳ ರಸ್ತೆಯಲ್ಲಿ ಹೆಸ್ಕಾಂನ ಕಚೇರಿಯಲ್ಲಿ ಸೋಮವಾರ ಮೇ 8 ರಂದು ಮಧ್ಯಾಹ್ನ 3 ಗಂಟೆಗೆ ಹೆಸ್ಕಾಂನ ಗ್ರಾಹಕರ ಸಭೆಯನ್ನು ಕರೆಯಲಾಗಿದೆ ಎಂದು ಸ್ಥಳೀಯ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಪುರುಷೋತ್ತಮ ಮಲ್ಯಾ ತಿಳಿಸಿದ್ದಾರೆ.
ಶಿರಸಿಯ ಹೆಸ್ಕಾಂನ ಅಧಿಕ್ಷಕ ಅಭಿಯಂತರರಾದ ಕೃಷ್ಣಮೂರ್ತಿ ಸಬೆಯ ಅಧ್ಯಕ್ಷತೆ ವಹಿಸಲಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಬಹುದೆಂದು ಮಲ್ಯಾರವರು ತಿಳಿಸಿದ್ದಾರೆ.
Leave a Comment