ಕಾರವಾರ:
ರವೀಂದ್ರನಾಥ್ ಕಡಲತೀರದ ಮೇಲೆ ಮೇ 17 ರಿಂದ ಮೇ 21 ರ ವರೆಗೆ 5 ದಿನಗಳ ಕಾಲ ಕರಾವಳಿ ಹಬ್ಬ ನಡೆಯಲಿದೆ ಎಂದು ಬೆಂಗಳೂರಿನ ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ್ ನಾಯ್ಕ ಹೇಳಿದರು.
ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಸದಾಶಿವಗಡದ ರಿದಂ ಹಾರ್ಟ್ ಬೀಟ್ ನೃತ್ಯ ಶಾಲೆ ಹಾಗೂ ತಾಂಡವ ಕಲಾ ನಿಕೇತನ ಸಂಸ್ಥೆಗಳ ಸಹಯೋಗದಲ್ಲಿ ಕರಾವಳಿ ಹಬ್ಬ ಅದ್ಧೂರಿಯಾಗಿ ಜರುಗಲಿದೆ. ಸ್ಥಳೀಯ ಕಲಾವಿದರಲ್ಲದೇ ಕನ್ನಡ ಚಿತ್ರರಂಗದ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ ನೀಡಲಿದ್ದಾರೆ. ಸರಕಾರದ ನೆರವು ಇಲ್ಲದೇ ಸಂಸ್ಥೆಯು ಸ್ವಂತ ಹಣ ಖರ್ಚು ಮಾಡಿ ಉತ್ಸವ ನಡೆಸುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಹಾವೇರಿ ಉತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕೂಡ ಕಳೆದ ಬಾರಿಗಿಂತ ಈ ಬಾರಿ ಇನ್ನಷ್ಟು ಅದ್ದೂರಿಯಾಗಿ ಕರಾವಳಿ ಹಬ್ಬ ಆಚರಿಸಲು ಸಂಸ್ಥೆ ಮುಂದಾಗಿದೆ ಎಂದರು. ಉತ್ಸವದ 5 ದಿನ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಸ್ಥಳೀಯ ಕಲಾವಿದರಿಗೆ ಉತ್ತೇಜನ ನೀಡಲು ಸಾಂಪ್ರದಾಯಿಕ ನೃತ್ಯ ಕಲೆ, ಮದುವೆ ಹಾಡುಗಳು, ಬೀಸುವ ಪದ, ಲಾವಣಿ ಮುಂತಾದ ನೆಲದ ಸಂಸ್ಕøತಿಯನ್ನು ಬಿಂಬಿಸುವ ಕಾರ್ಯಕ್ರಮ ಪ್ರಸ್ತುತ ಪಡಿಸಲು ಅವಕಾಶ ನೀಡಲಾಗುವುದು. ಕೊನೆಯ 5 ನೇ ದಿನ ಮಾತ್ರ ಜಿಲ್ಲೆಯ ಎಲ್ಲ ಕಲಾ ತಂಡಗಳಿಗೆ ಕಲೆ ಪ್ರದರ್ಶನಕ್ಕೆ ವೇದಿಕೆ ಮೀಸಲಾಗಿರುತ್ತದೆ. ಅಲ್ಲದೇ ಇಲ್ಲಿನ ಸ್ಥಳೀಯ ಕೊಂಕಣಿ ಭಾಷೆಗೂ ಕಾರ್ಯಕ್ರಮಗಳಲ್ಲಿ ಆದ್ಯತೆ ನೀಡಲಾಗುವುದು ಎಂದರು.
ಮಿಮಿಕ್ರಿ ಕಲಾವಿದ ವಸಂತ್ ಬಾಂದೇಕರ ಮಾತನಾಡಿ, ಶಾಲಾ,ಕಾಲೇಜುಗಳಿಗೆ ರಜೆ ಇರುವುದರಿಂದ ಕಾರವಾರಕ್ಕೆ ಮುಂಬೈ,ಗೋವಾ ಕಡೆಯಿಂದ ಪ್ರವಾಸಿಗರು ಬಹಳಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ರವೀಂದ್ರನಾಥ್ ಕಡಲತೀರ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು,ಈ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡೆ ಲಗ್ಗೆ ಇಡುತ್ತದೆ. ಆದರೆ ಈ ಬಾರಿ ಪ್ರವಾಸಿಗರ ಮನರಂಜನೆಗೆ ಕಡಲತೀರದಲ್ಲಿ ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮ ಆಯೋಜನೆಯಾಗಿಲ್ಲ. ಈ ದೃಷ್ಠಿಯಿಂದ ಕರಾವಳಿ ಹಬ್ಬವನ್ನು ಆಚರಿಸುವ ಉದ್ದೇಶ ಇಟ್ಟುಕೊಂಡು ಕನ್ನಡ, ಕೊಂಕಣಿ,ಹಿಂದಿ ಚಿತ್ರಗಳ ಗೀತೆ,ನೃತ್ಯ, ಸಾಂಪ್ರದಾಯಿಕ ಪದ, ಉರ್ದು ಗಝಲ್ ಗಳಿಗೆ ಅವಕಾಶ ನೀಡಲಾಗಿದೆ ಎಂದರು. ರಿದಂ ಹಾರ್ಟ್ ಬೀಟ್ನ ನಿರ್ದೇಶಕಿ ಪೂನಂ ಪ್ರಸಾದ್,ಸಂಯೋಜಕ ಸಂಜಯ ಮಾಜಾಳಿಕರ ಇದ್ದರು.
Leave a Comment