ಭಟ್ಕಳ:
ಹಿಂದೆ ಗ್ರಾಮೀಣ ಪ್ರದೇಶದಲ್ಲಿ 50 ವರ್ಷಗಳ ಹಿಂದೆ ಪ್ರೌಢ ಶಾಲೆಗೆ ಹೋಗುವುದು ಕನಸಿನ ಮಾತಾಗಿತ್ತು. ಅನೇಕ ಕಡೆಗಳಲ್ಲಿ ಕನ್ನಡ ಶಾಲೆ ಮುಗಿಸಿ ಪ್ರೌಢ ಶಾಲೆಗೆ 3-4 ಕಿ.ಮಿ. ನಡೆದು ಹೋಗಬೇಕಾಗಿತ್ತು, ಹಲವು ಕಡೆಗಳಲ್ಲಿ ನದಿ-ತೊರೆಗಳನ್ನು ದಾಟಿ ಹೋಗಬೇಕಾಗಿದ್ದರಿಂದ ಹುಡುಗಿಯರಿಗೆ ಪ್ರೌಢಶಾಲೆ ಕನಸಿನ ಮಾತಾಗಿದ್ದರೆ, ಹುಡುಗರಿಗೂ ಮನೆಯಲ್ಲಿ ದೂರ ಕಳುಹಿಸುವುದು ಕಡಿಮೆಯೇ ಆಗಿತ್ತು.
ಅಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶವಾದ ಮಾರುಕೇರಿಯಲ್ಲಿದ್ದ ಸಂಸ್ಕøತ ವಿದ್ಯಾದಾನ ಮಾಡಲು ರಚಿಸಿಕೊಂಡಿದ್ದ ದಿ. ವೇ. ವÉೂ. ಮಹಾಬಲೇಶ್ವರ ವೆಂ. ಉಪಧ್ಯಾಯ ಅವರು ಸ್ಥಾಪಿಸಿಕೊಂಡಿದ್ದ ವಿ.ಜಿ.ಎಸ್. ಟ್ರಸ್ಟ.(ರಿ) ನ ಅಂಗ ಸಂಸ್ಥೆಯಾಗಿ ಶ್ರೀ ಶಿವಶಾಂತಿಕಾ ಪರಮೇಶ್ವರೀ ಪ್ರೌಢ ಶಾಲೆಯ ಆಡಳಿತ ಮಂಡಳಿಯನ್ನು ರಚಿಸಿಕೊಂಡು ಸ್ಥಾಪಕ ಅಧ್ಯಕ್ಷರಾಗಿ ದಿ. ವೆಂಕಟಗಿರಿ ಶೇಷಗಿರಿ ಹೆಬ್ಬಾರರ ಆಯ್ಕೆಯಾಗಿ ಅವರ ನೇತೃತ್ವದಲ್ಲಿ ಶ್ರೀ ಶಿವಶಾಂತಿಕಾ ಪ್ರೌಢ ಶಾಲೆಯನ್ನು ಮಾರುಕೇರಿಯ ಭಾಡಿಗೆ ಕಟ್ಟಡದಲ್ಲಿ 1965ರ ಜೂನ್-1ರಂದು ಆರಂಭಿಸಲಾಯಿತು.
ಶ್ರೀ ಶಿವಶಾಂತಿಕಾ ಪರಮೇಶ್ವರೀ ಪ್ರೌಢಶಾಲೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಿನ ದಿನಗಳಲ್ಲಿ ಆರಂಭವಾದ ಕೆಲವೇ ಕೆಲವು ಶಾಲೆಗಳಲ್ಲಿ ಇದೂ ಒಂದಾಗಿದ್ದು ಭಟ್ಕಳ ತಾಲೂಕಿನ ಗ್ರಾಮೀಣ ಪ್ರದೇಶಾವಾದ ಮಾರೂಕೇರಿ, ಕಿತ್ರೆ, ಕೋಟಖಂಡ, ಕುಂಟವಾಣಿ, ಹಾಡುವಳ್ಳಿ, ಕೋಣಾರ, ಹಡೀಲು, ಹದ್ಲೂರು, ಬೇಣಂದೂರು ಮುಂತಾದ ಅನೇಕ ಹಳ್ಳಿಯ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಹುಡುಗಿಯರಿಗೆ ತುಂಬಾ ಅನುಕೂಲವಾಯಿತು. ಈ ಎಲ್ಲಾ ಗ್ರಾಮದ ಮಕ್ಕಳು ಪ್ರೌಢ ಶಿಕ್ಷಣ ಪಡೆಯಬೇಕಿದ್ದರೆ ಸಮೀಪದಲ್ಲೆಲ್ಲೊ ಶಾಲೆಯಿಲ್ಲದಿದ್ದರಿಂದ ಸುಮಾರು 10.ಕಿ.ಮೀ. ದೂರದ ತಾಲೂಕು ಕೇಂದ್ರವಾದ ಭಟ್ಕಳಕ್ಕೇ ಬಂದು ಹೋಗಬೇಕಾಗಿರುವುದರಿಂದ ಅನೇಕರು ತಮ್ಮ ಪ್ರೌಢ ಶಿಕ್ಷಣವನ್ನು ಪಡೆದೇ ಇಲ್ಲ. ಅಂದು ದಿ. ವೆಂಕಟಗಿರಿ ಹೆಬ್ಬಾರ್ ಅವರ ದೂರದೃಷ್ಟಿತ್ವ ಈ ಎಲ್ಲಾ ಗ್ರಾಮದ ಅನೇರಿಗೆ ಪ್ರೌಢ ಶಿಕ್ಷಣವನ್ನು ನೀಡಿತ್ತಲ್ಲದೇ, ತಾಲೂಕಿನ ಬೇರೆ ಬೇರೆ ಗ್ರಾಮದ ಅನೇಕರು, ಹೊರ ಊರಿನ ಅನೇಕರು ಕೂಡಾ ಇಲ್ಲಿಗೆ ಬಂದು ಪ್ರೌಢ ಶಿಕ್ಷಣವನ್ನು ಪಡೆಯುವಂತಾಗಿತ್ತು. ಶಿಕ್ಷಣ ವಂಚಿತರಾದ ಅನೇಕರು ತಮ್ಮ ನೋವನ್ನ ತೋಡಿಕೊಂಡಿದ್ದರ ಫಲವೇ ಅಂದು ಧೈರ್ಯ ಮಾಡಿ ಪ್ರೌಢ ಶಾಲೆಯನ್ನು ತೆರೆದಿದ್ದರಿಂದ ಸಾವಿರಾರು ಮಕ್ಕಳ ಭವಿಷ್ಯ ಬದಲಾಯಿತು ಎಂದರೆ ಅತಿಶಯವಾಗಲಾರದು.
ಅಂದು ಗ್ರಾಮೀಣ ಭಾಗದಲ್ಲಿ ಪ್ರೌಢ ಶಿಕ್ಷಣವನ್ನು ಆರಂಭಿಸುವುದು ಸುಲಭದ ಮಾತಾಗಿರಲಿಲ್ಲ. ಆರ್ಥಿಕವಾಗಿ ತೀರಾ ತೊಂದರೆ ಇದ್ದರೂ ಸಹ ಸಮಾಜ ಮನಸ್ಕರ ಸಹಕಾರದಿಂದ ಶಿಕ್ಷಣ ಸಂಸ್ಥೆ ಆರಂಭಿಸಿದ್ದನ್ನು ಮುಂದೆ ಕೂಡಾ ಯಾವುದೇ ಅಡೆ-ತಡೆ ಬಂದರೂ ಮುಂದುವರಿಸಿಕೊಂಡು ಹೋಗಿರುವುದು ಒಂದು ಭಗೀರಥ ಪ್ರಯತ್ನವೇ ಸರಿ.
ಗ್ರಾಮೀಣ ಭಾಗವಾದ ಮಾರುಕೇರಿಯಲ್ಲಿ ಅಂದು ಹೆಣ್ಣುಮಕ್ಕಳ ಪ್ರೌಢ ಶಾಲೆಯ ವಿದ್ಯಾಭ್ಯಾಸ ಕನಸಿನ ಮಾತಾಗಿತ್ತು. ಅದರಲ್ಲೂ ಹರಿಜನ-ಗಿರಿಜನರ ಸಂಖ್ಯೆ ಸಾಕಷ್ಟಿರುವ ಈ ಭಾಗದಲ್ಲಿ ಪ್ರೌಢ ಶಿಕ್ಷಣ ಆರಂಭವಾಗಿದ್ದರಿಂದ ಅನೇಕು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರು. ಅಂದು ಕೇವಲ ಮಾರುಕೇರಿ ಸುತ್ತ ಮುತ್ತಲದ ಜನರಲ್ಲದೇ ಸಾಗರ, ಸಿದ್ದಾಪುರ, ಹೊನ್ನಾವರದಿಂದ ಕೂಡಾ ಬಂದು ಇಲ್ಲಿನ ಉಚಿತ ವಸತಿ ನಿಲಯದಲ್ಲಿ ಉಳಿದು ಶಿಕ್ಷಣವನ್ನು ಪೂರೈಸಿದ ಅನೇಕರು ಇಂದು ತಮ್ಮ ಹಿಂದಿನ ದಿನಗಳನ್ನು ನೆನೆಸುತ್ತಾರೆ. ಹಲವಾರು ವರ್ಷಗಳ ಕಾಲ ಭಾಡಿಗೆ ಕಟ್ಟಡಲ್ಲಿ ನಡೆದ ಶಾಲೆಗೆ ಒಂದು ಹೊಸ ಸ್ವಂತ ಕಟ್ಟಡವನ್ನು ಕಟ್ಟುವಲ್ಲಿ ಆಡಳಿತ ಮಂಡಳಿ ಯಶಸ್ವೀಯಾಗಿದ್ದು ಇಂದು ಭವ್ಯವಾದ ಸುಂದರ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಆರಂಭದಲ್ಲಿ ಸಮಸ್ಯೆಗಳ ಸರಮಾಲೆಯೇ ಎದುರಾದರೂ ಸಹ ಎದೆಗುಂದದ ಆಡಳಿತ ಮಂಡಳಿ ತಮ್ಮ ಶಿಕ್ಷನ ವೃಂದ, ವಿದ್ಯಾರ್ಥಿಗಳ ಸಮೂಹ, ಊರ ಹಾಗೂ ಪರವೂದ ದಾನಿಗಳ ಸಹಕಾರದಿಂದ 2004ರಲ್ಲಿ ಭವ್ಯವಾದ ಸುಂದರ ಕಟ್ಟಡವನ್ನು ಕಟ್ಟಿತು.
ಕಳೆದ ಐವತ್ತು ವರ್ಷಗಳಲ್ಲಿ ಭಟ್ಕಳ ಮಾತ್ರವಲ್ಲ ಬೇರೆ ಬೇರೆ ತಾಲೂಕುಗಳಿಂದ ವಿದ್ಯಾಭ್ಯಾಸ ಮಾಡಿದವರು ಇಂದು ಉತ್ತಮ ಸ್ಥಾನದಲ್ಲಿದ್ದರೆ, ಅನೇಕರು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಇದೇ ಶಾಲೆಯಲ್ಲಿ ತಮ್ಮ ಪ್ರೌಢ ಶಾಲೆ ಮುಗಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದು ಕೂಡಾ ಈ ಶಾಲೆಗೆ ಒಂದು ಕೀರ್ತಿ ತರುಂತದ್ದಾಗಿದೆ. ವಿದೇಶಗಳಲ್ಲಿಯೂ ಕೂಡಾ ಸಾಕಷ್ಟು ಹಳೆ ವಿದ್ಯಾರ್ಥಿಗಳಿದ್ದು ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ.
ಐವತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಸ್ವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶಾಲೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅನೇಕ ವಿದ್ಯಾರ್ಥಿಗಳು ಇಂದಿಗೂ ತೀರಾ ಗ್ರಾಮೀಣ ಪ್ರದೇಶದಿಂದ ಬರಬೇಕಾಗಿದ್ದು ಸುವರ್ಣ ಮಹೋತ್ಸವ ಸವಿನೆನಪಿಗಾಗಿ ಒಂದು ಶಾಲಾ ವಾಹನ ವ್ಯವಸ್ಥೆ ಮಾಡಲು ಉತ್ಸುಕವಾಗಿದ್ದು ದಾನಿಗಳು ಈಗಾಲೇ ಸಹಕರಿಸುವ ಭರವಸೆಯನ್ನು ನೀಡಿದ್ದಾರೆ.
ಸುವರ್ಣ ಮಹೋತ್ಸವ ಇದೇ ಬರುವ ಮೇ.15ರಂದು ಆಚರಿಸಲಿದ್ದು ಅಂದು ಶಾಲೆಯಲ್ಲಿ ಸೇವೆ ಸಲಿಸಿ ನಿವೃತ್ತರಾದವರಿಗೆ ಸನ್ಮಾನ, ಕಳೆದ 50 ವರ್ಷಗಳಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಕೂಡಾ ನಡೆಯಲಿವೆ
Leave a Comment