ಕಾರವಾರ:
ಭದ್ರಾ ಹೊಟೇಲ್ ಬಳಿ ನಡೆದ ಗೋ ಪ್ರಾಣ ಭೀಕ್ಷಾ ಅಭಿಯಾನದಿಂದ ಸಂಗ್ರಹಿಸಿದ 55,555 ರೂಪಾಯಿ ಹಣವನ್ನು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಹಸ್ತಾಂತರಿಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಗೋವುಗಳ ಮೇವು ಸಂಗ್ರಹಣೆಗಾಗಿ ಕಾರವಾರದ ಗೋ ಪರಿವಾರದವರು ಈ ಹಣ ಸಂಗ್ರಹಿಸಿದ್ದರು. ಈ ವೇಳೆ ಆಶಿರ್ವಚನ ನೀಡಿದ ರಾಘವೇಶ್ವರ ಭಾರತೀ ಸ್ವಾಮೀಜಿ, ಬರಗಾಲಕ್ಕೆ ತುತ್ತಾಗಿರುವ ಅದೆಷ್ಟೊ ಪ್ರದೇಶಗಳಲ್ಲಿ ಗೋವುಗಳು ಮೇವಿಲ್ಲದೆ ಹಸಿವಿನಿಂದ ಸಾಯುತ್ತಿವೆ. ಅಲ್ಲದೆ ಮಲೆಮದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಬರಗೂರ್ ತಳಿಯ ಲಕ್ಷಾಂತರ ಗೋವುಗಳು ತೀವ್ರ ಬರಗಾಲ ಎದುರಾದ ಹಿನ್ನೆಲೆಯಲ್ಲಿ ಮೇವು ನೀರಿಗೆ ಕೊರತೆಯಾಗುತ್ತಿದೆ. ಇಂತಹ ಗೋವುಗಳನ್ನು ಸಾಕಲಾಗುತ್ತಿದೆ. ಇವುಗಳ ರಕ್ಷಣೆಗೆ ರಾಜ್ಯದಾಂದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅದೆ ರಿತಿ ಕಾರವಾರದಲ್ಲಿಯೂ ಇವುಗಳ ರಕ್ಷಣೆಗೆ ಉತ್ತಮ ಬೆಂಬಲ ನೀಡಿರುವುದು ಒಳ್ಳೆಯ ಕೆಲಸ ಎಂದರು.
ಮಲೇಮಹದೇಶ್ವರ ಬೆಟ್ಟಕ್ಕೆ ಗೋ ಭಕ್ತರು ಹೋಗಿರಬೇಕು. ಆಗ ಅಲ್ಲಿನ ಪರಿಸ್ಥಿತಿ ಅರ್ಥವಾಗುತ್ತದೆ. ಇಂದು ಗೋವುಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವುಗಳ ರಕ್ಷಣೆಗೆ ಪ್ರತಿಯೊಬ್ಬರು ಸದಾ ಮುಂದಿರಬೇಕು ಎಂದರು. ಪ್ರೋ. ವಿ. ಎಂ ಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ತಿನ ಬಿ.ಜಿ ಮೋಹನ್, ಪ್ರೋ. ವಿ.ಎಂ. ಹೆಗಡೆ, ನ್ಯಾಯವಾದಿ ನಾಗರಾಜ ನಾಯಕ, ಪಿಎಸ್ ಭಟ್ಟ, ಅನುಮೋಲ ರೇವಣಕರ್, ಎಸ್. ಬಿ. ಹೆಗಡೆ, ಎಸ್ ಬಿ. ಭಟ್ ಇದ್ದರು.
Leave a Comment