ಹಳಿಯಾಳ:
ದಾಂಡೇಲಿ ಕಾಳಿನದಿಯಿಂದ ಹಳಿಯಾಳ ಪಟ್ಟಣಕ್ಕೆ ಪೂರೈಸಲಾಗುತ್ತಿರುವ ಕುಡಿಯುವ ನೀರಿನ ಪೈಪಲೈನ್ ದುರಸ್ಥಿ ನೆಪದಲ್ಲಿ ಹಗಲು ದರೊಡೆ ನಡೆಸಲಾಗುತ್ತಿದ್ದು ಮೇಲಿಂದ ಮೇಲೆ ದುರಸ್ಥಿಯ ನೇಪವೊಡ್ಡಿ ಸರ್ಕಾರದ ಬೊಕ್ಕಸಕ್ಕೆ ಅಧಿಕಾರಿ, ಸಿಬ್ಬಂದಿಗಳು ಕತ್ತರಿ ಹಾಕುತ್ತಿದ್ದಾರೆಂದು ಹಳಿಯಾಳ ಪುರಸಭೆ ಆಡಳಿತ ಮಂಡಳಿ ಹಿರಿಯ ಸದಸ್ಯ ಸುರೇಶ ತಳವಾರ ಗಂಭೀರ ಆರೋಪ ಮಾಡಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದ ಮಾಸಿಕ ಸಾಮಾನ್ಯ ಸಾಧಾರಣ ಸಭೆಯಲ್ಲಿ ಅವರು ಈ ಆರೋಪ ಮಾಡಿದರು. ಕೊಟ್ಯಂತರ ರೂ ಸರ್ಕಾರದಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಮಂಜೂರಾಗುತ್ತಿದೆ ಆದರೇ ಹಳಿಯಾಳ ಪುರಸಭೆಯ ಅಧಿಕಾರಿಗಳು ಮಾತ್ರ ಕೇವಲ ದುರಸ್ಥಿಯ ನೆಪದಲ್ಲೇ ಹಣ ಲೂಟಿ ಮಾಡುತ್ತಿದ್ದು ಈ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸಿದರು.
ಪುರಸಭೆಯಲ್ಲಿ ಝೇರಾಕ್ಸ್ ಮಶೀನ್ ಇದ್ದರೂ ಕೂಡ ಅದರ ರಿಪೇರಿಯನ್ನು ಮಾಡಿಸದೆ ಹೊರಗಡೆಯಿಂದ ಸಾವಿರಾರು ಹಣ ವೆಚ್ಚ ಮಾಡಿ ಝೇರಾಕ್ಸ್ ಮಾಡಿಸಲಾಗುತ್ತಿದ್ದು ಇದರಿಂದ ಪುರಸಭೆಗೆ ಹಾನಿವುಂಟಾಗುತ್ತಿದೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಸದಸ್ಯ ಸತ್ಯಜೀತ ಗಿರಿ ಸಭೆಗೆ ಆಗ್ರಹಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ ಪುರಸಭೆಯಿಂದ ಕೈಗೊಳ್ಳಲಾಗುತ್ತಿರುವ ಯಾವುದೇ ಕಾಮಗಾರಿಗಳು ನಡೆಯುತ್ತಿರುವಾಗ ಈ ಬಗ್ಗೆ ಆಯಾ ವಾರ್ಡಗಳ ಸದಸ್ಯರಿಗೆ ಮತ್ತು ಕಮೀಟಿಯ ಸದಸ್ಯರ ಗಮನಕ್ಕೆ ತರಬೇಕೆಂದರು.
ಸದಸ್ಯ ಬಾಬು ಮಾದರ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಾಲನಿಗಳಲ್ಲಿ ಈವರೆಗೆ ರಸ್ತೆಗಳ ಡಾಂಬರೀಕರಣ ಆಗಿಲ್ಲ, ಮಳೆಗಾಲದ ಮುಂಚೆ ಡಾಂಬರೀಕರಣ ಮಾಡುವಂತೆ ಆಗ್ರಹಿಸಿದರು.
ಇನ್ನೂ ಪಟ್ಟಣದ ಮೌರ್ಯ ಹೋಟೆಲ್ ಪಕ್ಕದಲ್ಲಿ ಅಂಬೇಡ್ಕರ ಭವನ ನಿರ್ಮಿಸಲು ಪುರಸಭೆಯವರು ನಿವೇಶನ ನೀಡುವಂತೆ ಮಾಡಲಾದ ಮನವಿ ಸಭೆಯಲ್ಲಿ ಪ್ರತಿಧ್ವನಿಸಿ ಸದಸ್ಯರಾದ ಸುರೇಶ ತಳವಾರ, ಬಾಬು ಮಾದರ ಅವರು ವಿಷಯ ಪ್ರಸ್ತಾಪಿಸಿ ದಲಿತ ಸಮುದಾಯದ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಇಂದಿರಾನಗರದಲ್ಲಿ ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು ಅದರ ಮುಂದಿನ ಮೌರ್ಯ ಹೊಟೆಲ್ ಪಕ್ಕದ ಪುರಸಭೆಗೆ ಸೇರಿದ ನಿವೇಶನದಲ್ಲಿಯೇ ಭವನ ಕಟ್ಟಲು ಠರಾವು ಪಾಸು ಮಾಡುವಂತೆ ವಿನಮ್ರತೆಯಿಂದ ಪಟ್ಟು ಹಿಡಿದರು ಇದಕ್ಕೆ ಉತ್ತರಿಸಿದ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಮನವಿಯ ಬಗ್ಗೆ ಪರಿಶೀಲನೆ ಮಾಡಲಾಗುವುದು ಈ ಕುರಿತು ಸಮೀತಿಯೊಂದನ್ನು ರಚಿಸಿ ಸಮೀಕ್ಷೆ ನಡೆಸಿ ದಲಿತ ಸಮುದಾಯದವರು ಎಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೋ ಅಲ್ಲಿ ಭವನ ನಿರ್ಮಿಸಲು ಪುರಸಭೆಯಿಂದ ನಿವೇಶನ ಮಂಜೂರು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ಮಾತನಾಡಿ ಈಗಾಗಲೇ ಅಂಬೇಡ್ಕರ ಭವನಕ್ಕೆ ಮೌರ್ಯ ಹೋಟೆಲ್ ಪಕ್ಕದಲ್ಲೇ ನಿವೇಶನ ನೀಡುವಂತೆ ಮಾಡುತ್ತಿರುವ ಹೋರಾಟದಲ್ಲಿ ರಾಜಕೀಯ ಬೆರೆತಿದ್ದು ಆದ್ದರಿಂದ ಈ ವಿಷಯದ ಕುರಿತು ತಾವು ಮಾತನಾಡುವುದಿಲ್ಲ ಕಾಂಗ್ರೇಸ್ ಸರ್ಕಾರ ಸಚಿವ ದೇಶಪಾಂಡೆಯವರ ಪ್ರಯತ್ನದಿಂದ ಈಗಾಗಲೇ ಪಟ್ಟಣದ ಆಶ್ರಯ ಬಡಾವಣೆಯ ಬ್ಲಾಕ್ ನಂ 36/5 ರಲ್ಲಿ ಅಂಬೇಡ್ಕರ ಭವನಕ್ಕೆ 1 ಕೋಟಿ, ಪಟ್ಟಣದ ಚಲವಾದಿಗಲ್ಲಿ ಹಾಗೂ ಅಂಬೇಡ್ಕರ ಗಲ್ಲಿಯಲ್ಲಿ ಅಂಬೇಡ್ಕರ ಭವನ ನಿರ್ಮಿಸಲು ತಲಾ 15 ಲಕ್ಷ ರೂ. ಮಂಜೂರಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷ ಅರುಣ ಬೋಬಾಟಿ, ಸ್ಥಾಯಿ ಸಮೀತಿ ಚೆರಮನ್ ಮಂಜುಳಾ ವಡ್ಡರ ,ಸದಸ್ಯ ಸುಬಾನಿ ಹುಬ್ಬಳ್ಳಿ, ಸದಸ್ಯರಾದ ಎಸ್.ಎ.ಶೆಟವಣ್ಣವರ, ಶಂಕರ ಬೆಳಗಾಂವಕರ, ಸಯ್ಯದಲಿ ಅಂಕೋಲೆಕರ, ಫಯಾಜ ಶೇಖ ಇತರರು ಇದ್ದರು.
Leave a Comment