ಭಟ್ಕಳ:
ಕಿತ್ರೆಯ ರಾಂಬಾಳದಲ್ಲಿ ನಬಾರ್ಡ ಹಣಕಾಸು ನೆರವಿನಿಂದ ನಿರ್ಮಿಸಲಾದ ಸೇತುವೆ ಹಾಗೂ ತಡೆಗೋಡೆಯನ್ನು ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು.
ಈ ಹಿಂದೆ ಕಿ.ಮಿ. ಗಟ್ಟಲೆ ನಡೆದುಕೊಂಡೇ ಹೋಗಬೇಕಾಗಿದ್ದು, ಮಳೆಗಾಲದಲ್ಲಿ ನದಿಯನ್ನು ದಾಟಿ ಬರುವುದು ದುಸ್ತರವಾಗಿದ್ದನ್ನು ಅರಿತು ಕಿತ್ರೆಯ ಕೊರಕೋಡು, ಮಸಿಕೊಳಪೆ ಮುಂತಾದ ಕುಗ್ರಾಮಗಳಿಗೆ ತೆರಳಲು ಸೇತುವೆ ನಿರ್ಮಿಸಿ ಕೊಡಲಾಗಿದೆ. ಈ ಭಾಗದಲ್ಲಿ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಮಾಡಿಕೊಡಲಾಗುವುದು ಎಂದ ಅವರು ಅಗತ್ಯವಿರುವ ಕಡೆ ರಸ್ತೆ, ಸೇತುವೆ ಮಾಡಲು ಆದ್ಯತೆ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅತ್ಯಂತ ಗ್ರಾಮೀಣ ಪ್ರದೇಶಕ್ಕೆ ಸೇತುವೆ ನಿರ್ಮಾಣ ಮಾಡಿ ಈ ಭಾಗದ ಜನತೆಗೆ ವರ್ಷದ ಎಲ್ಲಾ ದಿನಗಳಲ್ಲಿಯೂ ಓಡಾಡಲು ಅನುಕೂಲ ಮಾಡಿಕೊಟ್ಟ ಶಾಸಕರನ್ನು ಊರಿನ ನಾಗರೀಕರು ಸೇರಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಅಲ್ಬರ್ಟ ಡಿಕೋಸ್ತ, ತಾ.ಪಂ.ಸದಸ್ಯೆ ಜಯಲಕ್ಷ್ಮೀ ಗೊಂಡ, ಮಾರುಕೇರಿ ಗ್ರಾ.ಪಂ. ಅಧ್ಯಕ್ಷ ನಾರಾಯಣ ಹೆಬ್ಬಾರ, ಉಪಾಧ್ಯಕ್ಷೆ ನಾಗಮ್ಮ ಗೊಂಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ. ಡಿ. ನಾಯ್ಕ, ಮುಖಂಡರಾದ ಶಿವಾನಂದ ಹೆಬ್ಬಾರ, ಕೆ. ಜೆ. ನಾಯ್ಕ, ಸುಬ್ರಮಣ್ಯ ಶೆಟ್ಟಿ, ಗಣಪಯ್ಯ ಹೆಗಡೆ, ಶ್ರೀಪಾದ ಹೆಬ್ಬಾರ, ಕರಿಯಾ ಗೊಂಡ, ಸದಾಶಿವ ಹೆಬ್ಬಾರ, ಮೋಹನ ಗೊಂಡ, ಗಣಪಯ್ಯ ಗೊಂಡ ಮುಂತಾದವರಿದ್ದರು.
Leave a Comment