ಕಾರವಾರ:
ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿಗೆ ತೊಡಗಿಸಿಕೊಳ್ಳಬೇಕು ಎಂದು ಗೋವಾ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಅನಿಲ ಪೊವಾರ ಹೇಳಿದರು.
ವಿಜ್ಞಾನ ಕೇಂದ್ರದಲ್ಲಿ ನಡೆದ ವಿಜ್ಞಾನ ಮಾದರಿ ತಯಾರಿಕಾ ಶಿಬಿರದಲ್ಲಿ ಅವರು ಮಾತನಾಡಿದರು.
ಪಾಲಕರು ಹೆಚ್ಚಿನ ಅಂಕ ಪಡೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುವದು ಸರಿಯಲ್ಲ. ಅದರ ಬದಲು ಪಟ್ಯೇತರ ಚಟುವಟಿಕೆಗಳತ್ತವೂ ಆಸಕ್ತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಸದಾಶಿವಗಡದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಮಹೇಶ ಗೋಳಿಕಟ್ಟೆ ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕರ್ತವ್ಯದಲ್ಲಿ ದೇವರಿದ್ದಾನೆ ಎಂದು ಜನ ನಂಬಬೇಕು ಎಂದು ಹೇಳಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿ ಡಾ. ವಿ. ಎನ್. ನಾಯಕ ಮಾತನಾಡಿದರು. ನ್ಯೂ ಹೈಸ್ಕೂಲ್ ಪ್ರೌಢಶಾಲೆಯ ಶಿಕ್ಷಕರಾದ ರಾಜೇಶ ಶೇಣ್ವಿ ಪ್ರಸ್ಥಾಪಿಸಿದರು. ಪ್ರಮುಖರಾದ ಅನಂತ ರಾಯಕರ, ಅನಿಲ ನಾಯ್ಕ, ಎನ್. ಜಿ. ನಾಯಕ ಇತರರಿದ್ದರು. ಕರಾವಿಪದ ಉತ್ತರ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಸುಧೀರ ಡಿ. ನಾಯಕ ಸ್ವಾಗತಿಸಿದರು. ರಾಜೇಂದ್ರ ನಾಯಕ ನಿರ್ವಹಿಸಿದರು. ಕರಾವಿಪದ ಶಿರಸಿ ಶೈಕ್ಷಣಿಕ ಜಿಲ್ಲೆಯ ಕಾರ್ಯದರ್ಶಿ ಎಂ ರಾಜಶೇಖರ ವಂದಿಸಿದರು.
Leave a Comment