ದಾಂಡೇಲಿ :
ನಗರದ ಕೆನರಾ ವೆಲ್ಫೇರ್ ಟ್ರಸ್ಟ್ ಬಿ.ಇಡಿ. ಕಾಲೇಜಿನ ನೂತನ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಡೆಯಿತು
ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಎಂ. ಎಸ್. ಲಮಾಣಿಯವರು ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು. ಸಾಮಾಜಿಕ ಕಳಕಳಿಯಿದ್ದವ ಸಮಾಜದ ಶಕ್ತಿಯಾಗಬಲ್ಲ. ಆ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲೆ ಭವಿಷ್ಯದ ನಾಡು ಕಟ್ಟವ ಕನಸನ್ನು ಹೊಂದಿರಬೇಕೆಂದು ಕರೆ ನೀಡಿದ ಅವರು ಸಂಘಟನೆಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ವಿದ್ಯಾರ್ಥಿ ಸಂಘ ವಿದ್ಯಾರ್ಥಿಗ ಕಷ್ಟ ಸುಖಗಳಿಗೆ ಪರಿಹಾರವನ್ನು ನೀಡುವ ವೇದಿಕೆಯಾಗಲೆಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯೆ ಡಾ. ಜಯಶ್ರಿ ವಿ. ಕೊರಟಿಯವರು ವಿದ್ಯಾರ್ಥಿ ಸಂಘವು ಕಾಲೇಜಿನ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿ ಸಂಘಟನೆಯ ಉದ್ದೇಶ, ಮಹತ್ವ ಹಾಗೂ ನಾಯಕತ್ವಕ್ಕೆ ಅವಶ್ಯವಿರುವ ಗುಣವನ್ನು ತಿಳಿಸಿದರು.
ಉಪನ್ಯಾಸಕಿ ಅಶ್ವಿನಿ ಟಿ. ಜಿ. ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರೇಷ್ಮಾ ಎಸ್.ರವರು ವಂದಿಸಿದರು. ಉಪನ್ಯಾಸಕರಾದ ನೀಲಕಂಠ ಜಿ. ನಾಯ್ಕ ಹಾಗೂ ನಾಗೇಶ ಎಂ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
Leave a Comment