ಹೊನ್ನಾವರ:
ಹೊನ್ನಾವರ ಪಟ್ಟಣದಿಂದ 34ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ ಗೇರುಸೊಪ್ಪಾದಿಂದ 7ಕಿ.ಮೀ ಮಹಿಮೆಗೆ ಇಂದಿನಿಂದ ದಿನಕ್ಕೆರಡು ಬಾರಿ ಸಾರಿಗೆ ಸಂಸ್ಥೆಯ ಬಸ್ ಆರಂಭವಾಗಿದೆ. ಊರನ್ನು ಪ್ರಥಮಬಾರಿಗೆ ಪ್ರವೇಶಿಸಿದ ಬಸ್ಗೆ ಜನ ಹೂಹಾರ ಹಾಕಿ, ಕಾಯಿ ಒಡೆದು, ಸಿಹಿ ಹಂಚಿದ್ದು, ಆ ಭಾಗದ ಜನರ ಸಂಭ್ರಮ ಹೇೀಳತೀರದಾಗಿದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ಮೇಲೆ 250 ಮನೆಗಳುಳ್ಳ ಈ ಮಹಿಮೆ ಗ್ರಾಮಕ್ಕೆ ಸಾಧಾರಣ ಕಚ್ಚಾ ರಸ್ತೆಯಾಗಿದ್ದು, ಶಾಸಕ ಮಂಕಾಳು ವೈದ್ಯ, ಜಿ.ಪಂ.ಸದಸ್ಯೆ, ಪುಷ್ಪಾ ನಾಯ್ಕ ಇವರ ಪ್ರಯತ್ನದಿಂದಾಗಿ ಬಸ್ ಸೌಕರ್ಯ ಸಿಗುವಂತಾಯಿತು. ಅವರಿಗೆ ನಾವು ಕೃತಜ್ಞರು ಎಂದು ನಾಗರಿಕರು ಹೇಳಿದ್ದರು. ಪಂಚಾಯತ ಸದಸ್ಯರಾದ ಗಣೇಶ ನಾಯ್ಕ, ಗಣಪಯ್ಯ ನಾಯ್ಕ, ಊರ ಹಿರಿಯರಾದ ಮಾದೇವ ಶೆಟ್ಟಿ, ಸತ್ಯನಾರಾಯಣ ಭಟ್ಟ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಬಸ್ ಸೌಕರ್ಯಕ್ಕೆ ಅಪಾರ ಹರ್ಷ ವ್ಯಕ್ತ ಪಡಿಸಿದ್ದಾರೆ.
Leave a Comment