ಕಾರವಾರ:
ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಟ ವೇತನ, ಭವಿಷ್ಯ ನಿಧಿ ಸೌಲಭ್ಯ ಹಾಗೂ ಇನ್ನಿತರ ಸವಲತ್ತುಗಳನ್ನು ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಇವರ ದರಣಿಗೆ ಚಿಂತನ ಉತ್ತರ ಕನ್ನಡ, ಸಹಯಾನ ಹಾಗೂ ಹಲವು ಸಾಹಿತಿಗಳು ಬೆಂಬಲ ನೀಡಿದರು. ನಂತರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನರ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಗಳಲ್ಲಿ ಹಲವು ವರ್ಷಗಳಿಂದ ನೂರಾರು ಕಾರ್ಮಿಕರು ಸ್ವಚ್ಚತಾ ಕೆಲಸದಲ್ಲಿ ನಿರತರಾಗಿದ್ದಾರೆ. ಕಾವಲುಗಾರರು, ನೀರು ಸರಬರಾಜು ಮಾಡುವವರು, ಕಂಪ್ಯುಟರ್ ಆಪರೇಟರಗಳು ಸೇರಿದಂತೆ ಹಲವು ಕೆಲಸಗಳಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಇವರೆಲ್ಲರೂ ತಳಮಟ್ಟದ ಶೋಷಿತ ಸಮುದಾಯದವರಾಗಿದ್ದು, ಅವರ ಬೇಡಿಕೆ ಪೂರ್ಣಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. 2016ರ ಎಪ್ರಿಲ್ನಲ್ಲಿ ಜಿಲ್ಲಾಡಳಿತ ಸಭೆ ನಡೆಸಿ 11 ಅಂಶಗಳ ಮೇಲೆ ಚರ್ಚೆ ನಡೆಸಿದಾಗ ತಿಂಗಳ ಒಳಗೆ ಕಾರ್ಮಿಕರ ಎಲ್ಲಾ ಸಮಸ್ಯೆ ಬಗೆಹರಿಸುವ ಭರವಸೆ ನೀಡಿತ್ತು. ಆದರೆ, ಇಂದಿಗೂ ಭರವಸೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ವಿಭಾಘದ ಕಾರ್ಮಿಕರಿಗೆ 5ನೇ ತಾರಿಕಿನ ಒಳಗೆ ವೇತನ ನೀಡಬೇಕು. ಭವಿಷ್ಯ ನಿಧಿಯ ಬಗ್ಗೆ ಮಾಹಿತಿ ಸಿಗಬೇಕು. ಗುರುತಿನ ಪತ್ರ ಒದಗಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೇ ಕಾರ್ಮಿಕರಿಗೆ ಸಮವಸ್ತ್ರ, ಅಗತ್ಯ ಇರುವ ಬೂಟು, ರೇನ್ಕೋಟ್, ಮಾಸ್ಕ, ಹೆಲ್ಮೇಟ್ ಒದಗಿಸಬೇಕು. ಸರ್ಕಾರಿ ರಜಾ ದಿನಗಳಲ್ಲಿ ದುಡಿಸಿಕೊಳ್ಳಬಾರದು. ಗಳಿಕೆ, ಸಾಂದರ್ಭಿಕ ಹಾಗೂ ಪರಿಮಿತ ರಜೆ ಸೌಲಭ್ಯ ಒದಗಿಸಬೇಕು. ಸಮಾನ ಕೆಲಸಕ್ಕೆ ಸಮಾನ ಕೂಲಿ ಪದ್ದತಿ ಜಾರಿಗೆ ತರಬೇಕು ಎಂದು ಹೇಳಿದರು. ಸಂಬಳ ಚೀಟಿ, ಉಪಹಾರ ಸೌಲಭ್ಯ, ತುಟ್ಟಿಭತ್ಯೆಗಳನ್ನು ನೀಡಬೇಕು. ದಾಂಡೇಲಿ ಹಾಗೂ ಶಿರಸಿ ನಗರಸಭೆಯಲ್ಲಿ ಕಸ ವಿಲೆವಾರಿ ವಿಭಾಗ ಹಾಗೂ ಲೋಡರ್ಸಗಳಿಗೆ ನೀಡಲಾಗುತ್ತಿರುವ ವೇತನ ಹಾಗೂ ಕಾರ್ಮಿಕರ ಸಂಖ್ಯೆ ಬಗ್ಗೆ ತನಿಖೆ ನಡೆಯಬೇಕು. ವಾರದ ರಜೆ ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಿದರು. ದಾಂಡೇಲಿ ನಗರಸಭೆಯಲ್ಲಿ ಮಹಿಳಾ ಕಾರ್ಮಿಕರಿಗೆ 4ಸಾವಿರ ರಊ ವೇತನ ನೀಡಲಾಗುತ್ತಿದೆ. ಪ್ರಶ್ನಿಸಿದರೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಗೂ ಮುನ್ನ ನಡೆದ ಜಾಥಾಗೆ ಬನವಾಸಿ ಶಿವಾಜಿ ಚಾಲನೆ ನೀಡಿದರು. ಪ್ರತಿಭಟನೆ ಬೆಂಬಲಿಸಿ ಸಾಹಿತಿ ರೋಹಿದಾಸ ನಾಯ್ಕ, ಆರ್.ಜಿ. ಗುಂದಿ, ಮೋಹನ ಹಬ್ಬು, ಪ್ರಮುಖರಾದ ಜಿ.ಡಿ. ಮನೋಜ, ಅನಂತ ಹುಲಸ್ವಾರ ಮಾತನಾಡಿದರು. ಕಾರ್ಮಿಕ ಸಂಘದ ಸ್ಯಾಮಸನ್, ರಮೇಶ ಬಾಬು, ನಾಗಪ್ಪ ನಾಯ್ಕ, ಯಮೂನಾ
Leave a Comment