ದಾಂಡೇಲಿ:
ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಆಶ್ರಯದಲ್ಲಿ ನಗರದ ದಂಡಕಾರಣ್ಯ ಇಕೋ ಪಾರ್ಕನಲ್ಲಿ ಕಳೆದ 9 ದಿನಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.
ದೀಪ ಬೆಳಗಿಸುವ ಮೂಲಕ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದ ನಗರಸಭೆಯ ಮಾಜಿ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರವರು ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಯುವಂತೆ ಮಾಡುತ್ತವೆ. ಇಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿರುವ ಪ್ರತಿಭೆ ಹಾಗೂ ಆಸಕ್ತಿಗಳನ್ನು ಗುರುತಿಸಲು ಸಾದ್ಯವಾಗುತ್ತದೆ. ಇಲ್ಲಿ ಪಡೆದ ತರಬೇತಿಗಳನ್ನು, ಶಿಕ್ಷಣಗಳನ್ನು ಮಕ್ಕಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಒಡನಾಡಿ ಸಂಸ್ಥೆಯ ಅಧ್ಯಕ್ಷ, ಪತ್ರಕರ್ತ ಬಿ.ಎನ್. ವಾಸರೆ ಮಾತನಾಡಿ ಹಿಂದೆ ಬೇಸಿಗೆ ಶಿಬಿರಗಳು ನಡೆಯುತ್ತಿರಲಿಲ್ಲ. ರಜಾ ಬಂದಾಗ ಮಕ್ಕಳಿಗೆ ಅವರ ಅಜ್ಜಿ ಮನೆಯಲ್ಲಿರುವುದೇ ಬೇಸಿಗೆ ಶಿಬಿರದಂತಾಗಿತ್ತು. ಆದರೆ ಇಂದಿನ ನಗರೀಕರಣದ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರಗಳು ಅನಿವಾರ್ಯವಾಗುತ್ತವೆ. ದಾಂಡೇಲಿಯಲ್ಲಿ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನವರು ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಈ ಭಾಗದ ಮಕ್ಕಳಿಗೆ ಹಲವು ವಿಷಯ ಜ್ಞಾನ ನೀಡುವಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿ ಪಡೆದ ಶಿಕ್ಷಣ ಅಥವಾ ತರಬೇತಿಗಳು ಅವು ಜೀವನ ಪಾಠವಾಗಬೇಕು. ಮಕ್ಕಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ, ಸಾಂಸ್ಕøತಿಕ ಚಟುವಟಿಕೆಯಲ್ಲಿಯೂ ಆಸಕ್ತಿ ಹೊಂದಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ ಪ್ರಭುರವರು ಬೇಸಿಗೆ ಶಿಬಿರ ಆಯೋಜನೆಯ ಆಶಯದ ಬಗ್ಗೆ ವಿವರಿಸಿ, ಈ ಬಾರಿಯ ಶಿಬಿರದಲ್ಲಿ ಮಕ್ಕಳಿಗೆ ಹಲವು ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಶಿಬಿರ ಆಯೋಜಿಸಲಾಗುವುದು. ಮಕ್ಕಳು ಸಾಧಕ ವ್ಯಕ್ತಿಗಳನ್ನು ಆದರ್ಶವನ್ನಾಗಿಟ್ಟುಕೊಂಡು ಬದುಕಿನ ಗುರಿ ತಲುಪಬೇಕು ಎಂದರು.
ವೇದಿಕೆಯಲ್ಲಿ ವಿ.ಆರ್.ಡಿ.ಎಮ್. ಎಕ್ಸಲೆಂಟ್ ಸ್ಕೂಲ್ನ ಪ್ರಾಚಾರ್ಯ ರೋಷನ್.ಪಿ, ನಗರಸಬಾ ಸದಸ್ಯ ಅನಿಲ ದಂಡಗಲ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಸಂಸ್ಥೆಯ ಶ್ರೀಧರ ಬೋಳ್ಳಣ್ಣವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಂಜುನಾಥ ಬಾರಕೇರ ಮುಂತಾದವರು ಸಹಕರಿಸಿದರು.
Leave a Comment