ಕಾರವಾರ:
ಕಾರವಾರ ತಾಲ್ಲೂಕಿನಲ್ಲಿ ಜೂನ್ 2 ರಿಂದ ಜೂನ್ 13 ರವರೆಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ರೈತರಿಗೆ ಸಮಗ್ರ ಕೃಷಿ ಮಾಹಿತಿಯನ್ನು ನೀಡುವ ವಿಶಿಷ್ಟ ಕಾರ್ಯಕ್ರಮ “ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ” ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜೂನ್ 2 ರಂದು ಬೆಳಿಗ್ಗೆ 10 ಗಂಟೆಗೆ ಜಂಟಿ ಕೃಷಿ ನಿರ್ದೇಶಕರು ಕಾರವಾರ ಇವರ ಕಾರ್ಯಾಲಯದಲ್ಲಿ ಶಾಸಕ ಸತೀಶ ಸೈಲ್ ಅಭಿಯಾನಕ್ಕೆ ಚಾಲನೆ ನೀಡುವರು. ಪ್ರತಿ ಹೋಬಳಿಯಲ್ಲಿ ಗ್ರಾಮ ಪಂಚಾಯತವಾರು ಕಾರ್ಯತಂಡವನ್ನು ರಚಿಸಿಕೊಂಡು ಆಯಾ ಪಂಚಾಯತಿಗೆ ಸಿದ್ಧಪಡಿಸಿದ ವೇಳಾಪಟ್ಟಿಯಂತೆ ರೈತರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕೃಷಿ ಅಭಿಯಾನ ಕಾರ್ಯಕ್ರಮದ ವೇಳಾಪಟ್ಟಿ ಈ ರೀತಿಯಾಗಿದೆ.
ಜೂನ್ 2 ರಂದು ಬಾಡ ಹೋಬಳಿ ವ್ಯಾಪ್ತಿಯ ಬಿಣಗಾ, ಚೆಂಡಿಯಾದಲ್ಲಿ, ಜೂನ್ 3 ರಂದು ಅಮದಳ್ಳಿ, ತೋಡೂರುನಲ್ಲಿ, ಜೂನ್ 4 ರಂದು ತೋಡೂರು ಪಂಚಾಯತದಲ್ಲಿ. ಜೂನ್ 5 ರಂದು ಚಿತ್ತಾಕುಲ ಹೋಬಳಿ ವ್ಯಾಪ್ತಿಯ ಚಿತ್ತಾಕುಲ, ಮಾಜಾಳಿ, ಮುಡಗೇರಿ, ಜೂನ್ 6 ರಂದು ಅಸ್ನೋಟಿ, ಹಣಕೋಣ ಹಾಗೂ ಜೂನ್ 7 ರಂದು ಆರವದಲ್ಲಿ ಹಮ್ಮಿಕೊಳ್ಳಲಾಗಿದೆ. ಜೂನ 8 ರಂದು ಘಾಡಸಾಯಿ ವ್ಯಾಪ್ತಿಯ ಕೆರವಡಿ, ಮಲ್ಲಾಪುರ ಕದ್ರಾ, ಜೂನ 9 ರಂದು ಗೋಟಗಾಳಿ, ಘಡಸಾಯಿ ಹಾಗೂ ಜೂನ 10 ರಂದು ಘಾಡಸಾಯಿಯಲ್ಲಿ ನಡೆಯಲಿದೆ.
ಜೂನ್ 11 ರಂದು ಕಿನ್ನರ ಹೋಬಳಿ ವ್ಯಾಪ್ತಿಯ ಶಿರವಾಡ, ಕಡವಾಡ, ಕಿನ್ನರ, ಜೂನ್ 12ರಂದು ವೈಲವಾಡ, ದೇವಳಮಕ್ಕಿ, ಹಾಗೂ ಜೂನ್ 13 ರಂದು ದೇವಳಮಕ್ಕಿಯಲ್ಲಿ ಕೃಷಿ ಅಭಿಯಾನ, ಕೃಷಿ ವಸ್ತು ಪ್ರದರ್ಶನ, ವಿಜ್ಞಾನಿ ಹಾಗೂ ತಜ್ಞರಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ. ಎಂದು ಕಾರವಾರ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
Leave a Comment