ಹಳಿಯಾಳ:
ವಾಹನದಲ್ಲಿ ಬೆಲೆಬಾಳುವ ಸಾಗವಾಣಿ ಮರದ ತುಂಡುಗಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ತಾಲೂಕಿನ ಸಾಂಬ್ರಾಣಿ ವಲಯದ ಅರಣ್ಯಾಧಿಕಾರಿಗಳು ವಾಹನ ಸಮೇತ ಮಾಲನ್ನು ವಶಪಡಿಸಿಕೊಂಡಿದ್ದು ಕಾಡುಗಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.
ಹಳಿಯಾಳ ವಿಭಾಗದ ಸಾಂಬ್ರಾಣಿ ವಲಯದ ಗರಡೊಳ್ಳಿ ಶಾಖೆಯಲ್ಲಿ ಸಾಂಬ್ರಾಣಿ ವಲಯ ಅರಣ್ಯ ಅಧಿಕಾರಿ ದೀಪಕ ನಾಯ್ಕ ಹಾಗೂ ಸಿಬ್ಬಂದಿಗಳು ಗರಡೊಳ್ಳಿ ಗ್ರಾಮಕ್ಕೆ ಹೊಗುವ ರಸ್ತೆಯಲ್ಲಿ ಮೈನಾಳ ಗ್ರಾಮದ ಕಡೆಯಿಂದ ಅನುಮಾಸ್ಪಾದವಾಗಿ ಗರಡೊಳ್ಳಿ ಗ್ರಾಮದ ಕಡೆ ಸಾಗುತ್ತಿದ್ದ ವಾಹನವನ್ನು ಅಡ್ಡಗಟ್ಟಿದಾಗ ಚಾಲಕ ಹಾಗೂ ಇನ್ನಿಬ್ಬರು ತಕ್ಷಣ ಪರಾರಿಯಾಗಿದ್ದು ವಾಹನ ಹಾಗೂ ಮಾಲನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದು ದೀಪಕ ನಾಯ್ಕ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ವಾಹನದಲ್ಲಿ ಅಂದಾಜು 40 ಸಾವಿರ ಬೆಲೆಯ 0.413 (ಸಿ.ಯು.ಎಮ್) ಕ್ಯೂಬಿಕ್ ಮೀಟರ್ 7 ಚೌಕ ಸಾಗವಾನಿ ನಗಗಳು ಹಾಗೂ 1 ಲಕ್ಷ ಬೆಲೆಯ ವಾಹನ ಜಪ್ತು ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆರೋಪಿತರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Leave a Comment