ಹೊನ್ನಾವರ
`ಅರಣ್ಯದ ಉಳಿವಿನಿಂದ ಮಾತ್ರ ನಮ್ಮೆಲ್ಲರ ಉಳಿವು ಸಾಧ್ಯ’ ಎಂದು ಹೊನ್ನಾವರ ಜೆ.ಎಮ್.ಎಫ್.ಸಿ. ಹಿರಿಯ ನ್ಯಾಯಾಧೀಶ ಸಿ. ಕೆ. ರೆಡ್ಡಿ ಹೇಳಿದರು.
ತಾಲೂಕಿನ ಕಾಸರಕೋಡದ ಕಾಂಡ್ಲಾ ಮಾಹಿತಿ ಕೇಂದ್ರದಲ್ಲಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ನಡೆದ `ವಿಶ್ವ ಪರಿಸರ ದಿನಾಚರಣೆ’ಯ ಅಂಗವಾಗಿ ವೃಕ್ಷಾರೋಪಣ ಅಭಿಯಾನ, ಬೀಜದುಂಡೆ ಬಿತ್ತುವ ಅಭಿಯಾನ ಹಾಗೂ ಜೀವವೈವಿಧ್ಯತೆ ಕುರಿತ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಆದರೂ ಅರಣ್ಯ ನಾಶ ಮಾಡುವ ರೂಢಿಸಿಕೊಂಡಿರುವುದು ದೊಡ್ಡ ದುರಂತವಾಗಿದೆ. ನಾವು ನಿರೀಕ್ಷಿತ ಮಟ್ಟದಲ್ಲಿ ಅರಣ್ಯ ಸಂರಕ್ಷಣೆಯ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪರಿಸರದ ಕಾಳಜಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ಉತ್ತಮ ಪರಿಸರ ನಿರ್ಮಾಣವಾಗಲು ಸಾಧ್ಯ ಎಂದರು.
ಉಪ ಅರಣ್ಯ ಸಂರಕ್ಷಾಣಧಿಕಾರಿ ವಸಂತ ರೆಡ್ಡಿ ಕೆ.ವಿ. ಮಾತನಾಡಿ ಅಂತರ್ಜಲದ ಉಳಿವಿಗೆ ಹಾಗೂ ಮನುಷ್ಯನ ಆರೋಗ್ಯಕರ ಬದುಕಿಗೆ ಕಟ್ಟಕಡೆಯ ಪರಿಹಾರ ಅರಣ್ಯ. ಅರಣ್ಯ ಸಂರಕ್ಷಣೆಯಲ್ಲಿ ಪೂರ್ಣ ಪ್ರಮಾಣದ ಭಾಗವಹಿಸುವಿಕೆ ಇದ್ದರೆ ಮಾತ್ರ ಪರಿಸರ ಸಮತೋಲನ ಸಾಧ್ಯ ಎಂದರು.
ನ್ಯಾಯಾಧೀಶ ಮಧುಸೂಧನ ಭಾಗ್ವತ, ಸಹ ಶಿಕ್ಷಕರಾದ ನಾಗರಾಜ ನಾಯ್ಕ ಮಾತನಾಡಿದರು.
ಶಿರಸಿಯ ಜೇನು ಕೃಷಿ ತಜ್ಞ ಹಾಗೂ ಔಷಧಿ ಸಸ್ಯಗಳ ಪರಿಣಿತ ಮಧುಕೇಶ್ವರ ಹೆಗಡೆಯವರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ವಂದಿಸಿದರು. ವಲಯ ಅರಣ್ಯಾಧಿಕಾರಿಗಳಾದ ಪಿ.ಎಸ್.ಗೊಂಡ, ಫರಾನಾ ಮಣಿಯಾರ, ಸಿಬ್ಬಂದಿಗಳು ಹಾಗೂ ಜನತಾ ವಿದ್ಯಾಲಯ ಕಾಸರಕೋಡದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್. ಸಿ. ಪ್ರಾಸ್ತವಿಕವಾಗಿ ಮಾತನಾಡಿದರು. ಉಪ ವಲಯ ಅರಣ್ಯಾಧಿಕಾರಿ ಹರಿಶ್ಚಂದ್ರ ಪಟಗಾರ ಕಾರ್ಯಕ್ರಮ ನಿರೂಪಿಸಿದರು.
Leave a Comment