ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಅಮೃತಾ ವಿ. ಭಟ್ಟ ಇವಳಿಗೆ ಭಾರತ ಸಂಸ್ಕøತಿ ಪ್ರತಿಷ್ಠಾನ ಏರ್ಪಡಿಸಿದ್ದ 45ನೇ ವರ್ಷದ ರಾಜ್ಯಮಟ್ಟದ ರಾಮಾಯಣ ಪ್ರತಿಭಾ ಪರೀಕ್ಷೆಯಲ್ಲಿ ತೃತೀಯ ಸ್ಥಾನ ಪಡೆದ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಕ ಪ್ರಧಾನ ಮಾಡಲಾಯಿತು.
ಪೂಜ್ಯ ಶ್ರೀ ಮ.ನಿ.ಪ್ರ. ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಶ್ರೀ ಬೇಲಿಮಠ ಮಹಾಸಂಸ್ಥಾನ ಇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಎ.ಎಸ್. ಕಿರಣಕುಮಾರ್, ಅಧ್ಯಕ್ಷರು ಇನ್ಫೋಸಿಸ್, ಡಾಟಟ ತೇಜಸ್ವಿನಿ ಅನಂತಕುಮಾರ್ ಅಧ್ಯಕ್ಷರು ಅದಮ್ಯ ಚೇತನ, ಅಶೋಕ ಹಾರನಹಳ್ಳಿ ವಿಶ್ವಸ್ಥರು ಇವರು ಅತಿಥಿಗಳಾಗಿ ಆಗಮಿಸಿ ಬಹುಮಾನಿತರಿಗೆ ಶುಭಕೋರಿದರು. ವಿದ್ಯಾರ್ಥಿನಿಯ ಈ ಸಾಧನೆಗೆ ಜೆ.ಟಿ. ಪೈ ಅಧ್ಯಕ್ಷರು ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು ವಿ.ಎಸ್. ಅವಧಾನಿ, ಮಾರ್ಗದರ್ಶಿ ಶಿಕ್ಷಕರು ಹರ್ಷ ಎನ್. ಭಟ್ಟ ಸಂತಸ ವ್ಯಕ್ತಪಡಿಸಿದ್ದಾರೆ.
Leave a Comment