ದಾಂಡೇಲಿ :
ಹಳಿಯಾಳದಲ್ಲಿರುವ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ರೂರಲ್ ಇನ್ಸ್ಟ್ಯೂಟ್ ಆಪ್ ಟೆಕ್ನಾಲಜಿಯ ಪ್ರವೇಶ ಕೇಂದ್ರ ಇದೀಗ ದಾಂಡೇಲಿಯ ಜೆ.ಎನ್. ರಸ್ತೆಯಲ್ಲಿರುವ ರಾಧಾಕೃಷ್ಣ ಕನ್ಯಾಡಿಯವರ ಕಟ್ಟಡದಲ್ಲಿ ಆರಂಭವಾಗಿದೆ.
ಈ ಕೇಂದ್ರವನ್ನು ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ವಿ.ವಿ. ಕಟ್ಟಿಯವರು ಉದ್ಘಾಟಿಸಿದರು. ಈ ಸಂದರ್ಬದಲ್ಲಿ ನಗರಸಭಾ ಅಧ್ಯಕ್ಷ ನಾಗೇಶ ಸಾಳೂಂಕೆ, ಉಪಾಧ್ಯಕ್ಷ ಅಷ್ಪಾಕ ಶೇಖ, ಸದಸ್ಯರಾದ ಯಾಸ್ಮಿನ್ ಕಿತ್ತೂರ, ಮಾರುತಿ ನಾಯ್ಕ, ದೀಪಾ ಮಾರಿಹಾಳ, ಮಂಜು ರಾಟೋಡ್, ಎಮ್.ಆರ್. ನಾಯಕ, ವಿಜಯಪುರ ಮಹಿಳಾ ವಿಶ್ವ ವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಡಾ. ಆರ್.ಜಿ. ಹೆಗಡೆ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಕೆ.ಜಿ. ಗಿರಿರಾಜ, ರಾಜೇಶ ತಿವಾರಿ, ಕಟ್ಟಡದ ಮಾಲಕರಾದ ರಾಧಾಕೃಷ್ಣ ಕನ್ಯಾಡಿ, ಮೀನಾಕ್ಷಿ ಕನ್ಯಾಡಿ, ನಗರಸಭೆ ಮಾಜಿ ಅಧ್ಯಕ್ಷ ತಸ್ವರ ಸೌದಾಗರ, ಸಾಹಿತಿ ಮಾಸ್ಕೇರಿ ಎಮ್.ಕೆ. ನಾಯಕ, ಪ್ರಮುಖರಾದ ಮೋಹನ ಹಲವಾಯಿ, ಬಲವಂತ ಬೊಮ್ನಳ್ಳಿ, ಗೌರೀಶ ಬಾಬ್ರೇಕರ, ಮಾಡ್ದೊಳಕರ, ಇಂಜಿನಿಯರ ಕಾಲೇಜಿನ ಸಿಬ್ಬಂದಿಗಳಾದ ಕೆ.ಎಸ್. ಪೂಜಾರ್, ರವೀಂದ್ರ ಎಮ್, ಕುರ್ಲಿ, ಗಿರೀಶ ಚಳಗೇರಿ, ಸಮೀರ ಗಲಗಲಿ, ಎಸ್.ವಿ. ಕೊಲ್ಲಿ ಮುಂತಾದವರಿದ್ದರು.
Leave a Comment