ದಾಂಡೇಲಿ:
ನಗರಸಭೆಯ ಮನೆ ತೆÀರಿಗೆ ತುಂಬಿಸಿಕೊಳ್ಳುತ್ತಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ನಗರದ ಆದಿ ಜಾಂಬವಂತ ಸಂಘ ನಗರಸಭೆಯ ಪೌರಾಯುಕ್ತರಿಗೆ ಲಿಖಿತವಾಗಿ ಮನವಿ ನೀಡಿ ಆಗ್ರಹಿಸಿದೆ.
ನಗರ ವ್ಯಾಪ್ತಿಯಲ್ಲಿ ಬರುವ ಮನೆಗಳ ತೆರಿಗೆ ತುಂಬಿಸಿಕೊಳ್ಳುವ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿರುವ ಸಂಘಟನೆ ನಗರದಲ್ಲಿನ ಸಾವಿರಾರು ಮನೆಗಳ ತೆರಿಗೆ ತುಂಬಲು ಬರುವ ಜನರಿಗೆ ತೆರಿಗೆ ಪಾವತಿ ಮಾಡುವ ಪೂರ್ವದಲ್ಲಿ ಇಪ್ಪತೈದು ರೂಪಾಯಿಗಳನ್ನು ಪಡೆದುಕೊಂಡು ತೆರಿಗೆ ಪಾವತಿ ಚಲನನ್ನು ನೀಡುತ್ತಾರೆ. ಇಪ್ಪತೈದು ರೂ.ಗಳನ್ನು ಪಡೆದದ್ದಕ್ಕೆ ಯಾವುದೇ ರಶೀದಿಯನ್ನು ನೀಡುವುದಿಲ್ಲ, ಇದರಿಂದ ನಗರಸಭೆಯ ಖಜಾನೆಗೆ ಜಮಾ ಆಗಬೇಕಿದ್ದ ಲಕ್ಷಾಂತರ ರೂಪಾಯಿಗಳ ಅಧಿಕಾರಿಗಳ ಪಾಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಈ ಬಗ್ಗೆ ಸರಕಾರದ ಮಾನ್ಯತೆ ಇದ್ದರೆ ಸಂಬಂದಪಟ್ಟ ತೆರಿಗೆ ಇಲಾಖೆಯ ಮುಂದೆ ಸಾರ್ವಜನಿಕರ ಗಮನಕ್ಕೆ ಬರುವಂತೆ ಫಲಕಗಳನ್ನು ಅಳವಡಿಸಬೇಕು. ಅದೆಲ್ಲ ಬಿಟ್ಟು ಬಂದ ಪ್ರತಿಯೊಬ್ಬರಿಂದ ಇಪ್ಪತೈದು ರೂ.ಗಳನ್ನು ಪಡೆದು ರಶೀದಿ ನೀಡದೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತರದೆ ತೆರಿಗೆ ಅಧಿಕಾರಿಗಳು ಹಣ ಪಡೆದುಕೊಳ್ಳುತ್ತಿದ್ದರೆ ಅಂತಹ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಆದಿ ಜಾಂಬವಂತ ಸಂಘದ ಅಧ್ಯಕ್ಷ ಚಂದ್ರಕಾಂತ ನಡಿಗೇರ, ಪ್ರೇಮಕುಮಾರ ಪೆರುಮಾಲಾ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಒತ್ತಾಯಿಸಿದ್ದಾರೆ.
Leave a Comment