ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ಅಖಿಲ ಕರ್ನಾಟಕಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಗ್ರಾಮ ಪಂಚಾಯತ್, ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಆಶ್ರಯದಲ್ಲಿ 1060ನೇ ಮದ್ಯವರ್ಜನ ಶಿಬಿರವು 4/6/2017 ರಿಂದ 11/6/2017 ರವರೆಗೆಮೂರೂರಿನಕೋಣಾರೆಯ ಶ್ರೀ ವಿಷ್ಣು ಮೂರ್ತಿದೇವಸ್ಥಾನದಲ್ಲಿಜರುಗಿದ್ದು ಸಮಾರೋಪ ಸಮಾರಂಭವನ್ನುಕರ್ನಾಟಕರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದರುದ್ರಪ್ಪನವರು ಉದ್ಘಾಟಿಸಿಇಂಥ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾಗಿರುತ್ತದೆ.ಸರಕಾರ ಮದ್ಯಪಾನವನ್ನು ನಿಷೇಧಿಸುವುದು ಒಳಿತೆಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತಡಿ.ಎಫ್.ಓ. ಹಾಗೂ ಬೆಳಕು ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಇವರು ಮಾತನಾಡಿ ಮದ್ಯಪಾನ ಸೇವನೆ ಒಂದು ಸಾಮಾಜಿಕ ಪಿಡುಗು. ಈ ದುಶ್ಚಟದಿಂದದೂರ ಉಳಿದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರಾಗಲು ಸಾಧ್ಯ.ಈ ಚಟದಿಂದ ಮಕ್ಕಳ ಭವಿಷ್ಯ ಮನೆಯ ಸ್ವಾಸ್ಥ್ಯ ಹಾಳಾಗುವುದರೊಂದಿಗೆ ಸಮಾಜದಸ್ವಾಸ್ಥ್ಯವೂಕೆಡುವುದರಲ್ಲಿ ಸಂದೇಹವಿಲ್ಲ. ಧ.ಗ್ರಾ.ಯೋಜನೆ ಮತ್ತುಇತರೇ ಸಂಘ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ನಡೆದ ಈ ಮದ್ಯವರ್ಜನ ಶಿಬಿರ ಅತ್ಯಂತ ಅನಿವಾರ್ಯವಾಗಿದ್ದುಅರ್ಥಪೂರ್ಣ ಹಾಗೂ ಸಮಾಜಮುಖಿಯಾಗಿದೆ.ಇಂತಹ ಮಹತ್ವಪೂರ್ಣವಾದಕಾರ್ಯಕ್ರಮವನ್ನು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನೇತ್ರತ್ವದಲ್ಲಿ ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದುಇದಕ್ಕೆ ಶ್ರೀ ಕ್ಷೇತ್ರಧ.ಗ್ರಾ.ಯೋಜನೆಯ ಸಹಕಾರವನ್ನುಕೋರುತ್ತೇವೆ. ಇಂತಹ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸುವಉದ್ದೇಶದಿಂದ ಹೆದ್ದಾರಿಯಿಂದ 500 ಮೀಟರ ಅಂತರದೊಳಗಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆದೇಶಿಸಿದ್ದನ್ನು ಉಲ್ಲೇಖಿಸಿ ರಾಜ್ಯ ಸರಕಾರ ಈ ಬಗ್ಗೆ ಗಂಭೀರಚಿಂತನೆ ನಡೆಸುವಅಗತ್ಯವಿದೆಎಂದರು.
ಈ ಸಂದರ್ಭದಲ್ಲಿಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಬಾಲಕೃಷ್ಣ ನಾಯಕ, ಸೂರಜನಾಯ್ಕ ಸೋನಿ.ಧ.ಗ್ರಾ. ಯೋಜನಾಧಿಕಾರಿ ನಾರಾಯಣ ಪಾಲನ್, ಶ್ರೀಮತಿ ರೇಖಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Leave a Comment