ದಾಂಡೇಲಿ :
ಸರಳ ಸಾಹಿತ್ಯದಿಂದ ಸಹೃದಯರನ್ನು ತಲುಪುವಂತೆ ಮಾಡಿದ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ. ನಾಯಕರು ಸರಳ ಜೀವನ ಮಾಡಿ ಸಾಹಿತ್ಯದಲ್ಲಿ ಶ್ರೀಮಂತಿಕೆಯನ್ನು ಮೆರೆದವರು. ಅವರ ಸಾಹಿತ್ಯದಲ್ಲಿ ಜೀವನ್ಮುಖಿ ಧೋರಣೆಯಿದೆ ಎಂದು ನಗರದ ಪೊಲೀಸ್ ಡಿವೈಎಸ್ಪಿ ಡಿ.ಎಸ್.ಪವಾರ್ ಹೇಳಿದರು,
ಅವರು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾರವಾರ, ಸಾಕ್ಷಿ ಪ್ರಕಾಶನ ದಾಂಡೇಲಿ ಸಹಯೋಗದೊಂದಿಗೆ ಇತ್ತೀಚೆಗೆ ಜರುಗಿದ ರಾಜು ಮಾಕನೂರ ಅವರು ಬರೆದ ಮಾಸ್ಕೇರಿ ಎಂ.ಕೆ. ನಾಯಕ ಜೀವನ ಸಾಹಿತ್ಯ ದರ್ಶನ ಸಂಶೋಧನಾ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಸಾಹಿತ್ಯಿಕ ಮತ್ತು ಸಾಂಸ್ಕøತಿಕವಾಗಿ ಮಾಸ್ಕೇರಿ ನಾಯಕರು ತಮ್ಮನ್ನು ತಾವು ಅರ್ಪಣಾಭಾವದಿಂದ ಅರ್ಪಿಸಿಕೊಂಡ ಕಾಯಕಜೀವಿ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಕೆ.ಎಸ್. ಪಾಟೀಲ ಮಾತನಾಡಿ ಮಾಸ್ಕೇರಿ ನಾಯಕರೊಂದಿಗೆ ತಮ್ಮ ಒಡನಾಟ ಹಾಗೂ ಅವರ ಸಾಹಿತ್ಯದ ಕುರಿತು ಪ್ರಶಂಸಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಯು.ಡಿ.ನಾಯ್ಕ ಮಾತನಾಡಿ ಮಾಸ್ಕೇರಿ ನಾಯಕರು ಅರಣ್ಯಾಧಿಕಾರಿಯಾದ ತಮ್ಮಲ್ಲಿಯೂ ಸಾಹಿತ್ಯದ ಅಭಿರುಚಿ ಬೆಳೆಸಿದರೆಂದರು. ದಾಂಡೇಲಿ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಎಸ್. ಪೂಜಾರ್, ಮಾಸ್ಕೇರಿ ಎಂ.ಕೆ.ನಾಯಕ, ನಿವೃತ್ತ ಪ್ರಾಚಾರ್ಯ ಎ.ಕೆ. ಶೇಣ್ವಿ ಮಾತನಾಡಿದರು.
ಉಪನ್ಯಾಸಕಿ ನಾಗರೇಖಾ ಗಾಂವಕರ ಕೃತಿ ಪರಿಚಯಿಸಿದರು. ಕೃತಿಕಾರ ರಾಜು ಮಾಕನೂರ ಅವರನ್ನು ಉಪ್ಪಾರ ಸಮಾಜದ ಅಧ್ಯಕ್ಷ ಅಶೋಕ ಉಪ್ಪಾರ, ಲಕ್ಷ್ಮಿ ಉಪ್ಪಾರ, ವೈಶಾಲಿ ಉಪ್ಪಾರ ಹಾಗೂ ಇತರರು ಸನ್ಮಾನಿಸಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ನಾಯಕ ಸ್ವಾಗತಿಸಿದರು. ಸಾಕ್ಷಿ ಪ್ರಕಾಶನದ ಸಂಚಾಲಕ ಪ್ರವೀಣ ಜಿ.ನಾಯಕ ಪ್ರಾಸ್ತಾವಿಕ ಮಾತನಾಡಿದರು. ಅಂಕೋಲೆಯ ಸಾಹಿತಿ ಎನ್.ವ್ಹಿ. ನಾಯಕ ಮಾಸ್ಕೇರಿ ನಾಯಕರ ಗೀತೆಯೊಂದನ್ನು ಹಾಡಿ ರಂಜಿಸಿದರು. ನಂದಿನಿ ನಾಯ್ಕ ಪ್ರಾರ್ಥಿಸಿದರು. ಆಶಾ ಕಿಂದಳಕರ ಕಾರ್ಯಕ್ರಮ ನಿರೂಪಿಸಿದರೆ, ಅಶೋಕ ಪಾಟೀಲ ವಂದಿಸಿದರು.
Leave a Comment