ಹೊನ್ನಾವರ:
ಸೇಂಟ್ ಮಿಲಾಗ್ರಿಸ್ ಸೌಹಾರ್ದ ಕ್ರೆಡಿಟ್ ಸೊಸೈಟಿಯು ಪರಿಪೂರ್ಣ ಸಂಸ್ಥೆಯಾಗಿ ಜನರಿಗೆ ಸೇವೆ ಒದಗಿಸುತ್ತಿದೆ ಎಂದು ಕಾರವಾರ ಧರ್ಮಾಧ್ಯಕ್ಷ ಡಾ. ಡೆರಿಕ್ ಫರ್ನಾಂಡಿಸ್ ಹೇಳಿದರು.
ಅವರು ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಶಾಖೆಯನ್ನು ಬಾಳೇರಿ ಟ್ರೇಡ್ ಸೆಂಟರ್ನ ಹವಾನಿಯಂತ್ರಿತ ವಿಭಾಗಕ್ಕೆ ಸ್ಥಳಾಂತರಿಸುವ ಸಮಾರಂಭದಲ್ಲಿ ದೀಪ ಬೆಳಗಿ, ಆಶೀರ್ವಚನ ನೀಡಿದರು. ಈ ಸಂಸ್ಥೆ ವೇಗವಾಗಿ ಅಭಿವೃದ್ಧಿ ಹೊಂದಿ, ನೆರೆಜಿಲ್ಲೆಗಳಲ್ಲಿ ಶಾಖೆಗಳನ್ನು ಆರಂಭಿಸಿ, ಜಿಲ್ಲೆಯಲ್ಲಿ ಪ್ರಥಮ ಮತ್ತು ರಾಜ್ಯದಲ್ಲಿ ಪ್ರಥಮ ಹತ್ತು ಸಂಸ್ಥೆಗಳಲ್ಲಿ ಒಂದಾಗಿದೆ. ಈ ಯಶಸ್ಸಿಗೆ ಸಂಸ್ಥೆಯ ಸಮಾಜಮುಖಿ ಚಿಂತನೆ, ಸಮಾಜಸೇವೆ, ಠೇವಣಿದಾರರ ಮತ್ತು ಸಾಲಗಾರರ ಒಳಿತಿಗಾಗಿ ಸೇವಾ ಸಂಸ್ಥೆಯಂತೆ ಕೆಲಸ ನಿರ್ವಹಿಸುತ್ತಿರುವುದು ಮತ್ತು ಆಧುನಿಕ ತಾಂತ್ರಿಕತೆಯನ್ನು ರೂಢಿಸಿಕೊಂಡಿರುವುದು ಕಾರಣವಾಗಿದೆ. ಇಂತಹ ನೈತಿಕತೆ ಇರುವ ಸಂಸ್ಥೆಗಳು ಬೆಳೆಯುತ್ತವೆ ಎಂದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ ಫರ್ನಾಂಡಿಸ್ ಪ್ರಾಸ್ತಾವಿಕ ಮಾತನಾಡಿ, ಮೌಲ್ಯಾಧಾರಿತ ಸೇವೆಯ ಜೊತೆಗೆ ಸಮಾಜಸೇವೆಯನ್ನೂ ಮಾಡಲಾಗುತ್ತಿದೆ. 14 ವರ್ಷಗಳಲ್ಲಿ 9 ಜಿಲ್ಲೆಗಳಲ್ಲಿ ಒಟ್ಟೂ 56 ಶಾಖೆಗಳನ್ನು ತೆರೆಯಲಾಗಿದ್ದು, 1974 ಕೋಟಿ ರೂ. ದುಡಿಯುವ ಬಂಡವಾಳವಾಗಿದ್ದು, 342 ಕೋಟಿ ರೂ. ಠೇವಣಿ ಹೊಂದಿರುವ ಸಂಸ್ಥೆ, 256 ಕೋಟಿ ರೂ. ಸಾಲ ನೀಡಿದೆ. 560 ನೌಕರರು ಸಂಸ್ಥೆಯಲ್ಲಿ ದುಡಿಯುತ್ತಿದ್ದು, ಯಶಸ್ಸಿಗೆ ಕಾರಣರಾಗಿದ್ದಾರೆ ಎಂದರು.
ಪ.ಪಂ. ಅಧ್ಯಕ್ಷೆ ಜೈನಾಬಿ ಸಾಬ್, ತಹಸೀಲ್ದಾರ ವಿ.ಆರ್.ಗೌಡ, ಪ್ರಾಂಶುಪಾಲ ಎಸ್.ಎಸ್.ಹೆಗಡೆ, ಫಾ. ವಿಲಿಯಮ್ ಡಿ’ಸೋಜಾ, ಫಾ. ಪೌಲ ಸಿಕ್ವೇರಾ, ಕೆ.ಸಿ.ವರ್ಗಿಸ್, ವಕೀಲರ ಸಂಘದ ಕೆ.ವಿ. ನಾಯ್ಕ, ವಿ.ಜಿ.ನಾಯ್ಕ, ಮೋಹನ ಮೇಸ್ತ, ಪ.ಪಂಸದಸ್ಯೆ ಜೋಸ್ಪಿನ್ ಡಾಯಸ್ ಮೊದಲಾದ ಗಣ್ಯರು ಸಂಸ್ಥೆಗೆ ಶುಭ ಕೋರಿದರು. ಸೀಮಾ ಹಳದೀಪುರಕರ ಸ್ವಾಗತಿಸಿದರು. ಕಟ್ಟಡದ ಮಾಲಕ ರಾಘವ ಬಾಳೇರಿ ಇವರನ್ನು ಸನ್ಮಾನಿಸಲಾಯಿತುü ಅರುಣ ಜನ್ನು ವಂದಿಸಿದರು.
Leave a Comment