ಕಾರವಾರ:
ಈಚೆಗೆ ಕಟ್ಟಡ ನಿರ್ಮಾಣದ ವೇಳೆ ಕುಸಿದು ಬಿದ್ದ ಬಡ ಕಾರ್ಮಿಕನೋರ್ವ ತೀವೃ ಅಸ್ವಸ್ಥಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಬುಧವಾರ ಜನಶಕ್ತಿ ವೇದಿಕೆ ಪದಾಧಿಕಾರಿಗಳು ಆಸ್ಪತ್ರೆಗೆ ಸೇರಿಸಿದರು.
ಕಟ್ಟಡಕ್ಕೆ ಬಣ್ಣ ಬಡಿಯುತ್ತಿದ್ದ ವೇಳೆ ಕುಸಿದು ಬಿದಿದ್ದ ವಿಶ್ವನಾಥ್ ಕುಮಟಾಕರ್ಗೆ (19) ತಲೆಗೆ ಗೆ ತೀವೃ ಪೆಟ್ಟಾಗಿದ್ದು ಕೈ ಕಾಲು ಮುರಿದಿದ್ದವು. ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿಕೊಳ್ಳದ ಕಾರಣ ಸರ್ಕಾರದಿಂದ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳು ದೊರೆಯುವ ಸಾಧ್ಯತೆಗಳಿರಲಿಲ್ಲ. ಹೀಗಾಗಿ ತೀವೃವಾಗಿ ನೊಂದಿದ್ದ ಕಾರ್ಮಿಕ ಮನೆಯಲ್ಲಿಯೇ ಹಾಸಿಗೆ ಮೇಲೆ ಮಲಗಿದ್ದು, ಈ ವಿಷಯ ತಿಳಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರ ಸಹಾಯಕ್ಕೆ ಧಾವಿಸಿದರು. ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಜನಶಕ್ತಿ ವೇದಿಕೆಯವರು ಅಸ್ವಸ್ಥಗೊಂಡ ಕಾರ್ಮಿಕನ ಪರಿಸ್ಥಿತಿ ವಿವರಿಸಿದರು. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕಾರ್ಮಿಕನಿಗೆ ಸಹಾಯ ಮಾಡುವಂತೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳನ್ನು ಬೇಡಿಕೊಂಡರು. ಪರಿಕ್ಷಿಸಿದ ಡಾ. ಶಿವಾನಂದ ನಾಯ್ಕ ತಲೆಗೆ ತೀವೃವಾಗಿ ಪೆಟ್ಟು ಬಿದ್ದಿದ್ದರಿಂದ ನರ ಕಡಿತಗೊಂಡಿರುವ ಸಾಧ್ಯತೆಯಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಅತ್ಯಾಧುನಿಕ ಆಸ್ಪತ್ರೆಗೆ ರವಾನಿಸುವಂತೆ ಸೂಚಿಸಿದರು. ಎ.ಜೆ ಆಸ್ಪತ್ರೆಗೆ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಿಕೊಟ್ಟರು.
ಇನ್ನು ಚಿಕಿತ್ಸಾ ವೆಚ್ಚಕ್ಕಾಗಿ ನಗರಸಭೆ ಸದಸ್ಯ ಪ್ರೇಮಾನಂದ ಗುನಗಾ, ಕಂದಾಯ ನಿರೀಕ್ಷಕ ಪರಶಪ್ಪ ನಾಯ್ಕ ಸಹಾಯ ಮಾಡಿದರು. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳು, ಎಲ್ಲಾ ಕಾರ್ಮಿಕರು ನೊಂದಣಿ ಮಾಡಿಕೊಂಡಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬಹುದು. ನೊಂದಣಿ ಮಾಡಿಕೊಳ್ಳದೇ ಇದ್ದಲ್ಲಿ ತುರ್ತು ಸಂದರ್ಭಗಳಲ್ಲಿ ಎದುರಾಗುವ ಆಪತ್ತುಗಳನ್ನು ಎದುರಿಸಲು ಕಷ್ಟ ಪಡೆಬೇಕಾಗುತ್ತದೆ ಎಂದು ತಿಳಿಸಿದರು.
Leave a Comment