ಕಾರವಾರ:
ಕಳೆದ ಒಂದು ವರ್ಷದಿಂದ ದುರಸ್ಥಿಯಲ್ಲಿದ್ದ ಅರ್ಜುನ್ ಚಿತ್ರ ಮಂದಿರ ಶುಕ್ರವಾರದಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ಶುಕ್ರವಾರ ಹಿಂದಿ ಚಿತ್ರ ಟುಬ್ಲೈಟ್ ಬಿಡುಗಡೆಯಾಗಲಿದೆ.
ಚಿತ್ರಮಂದಿರವನ್ನು ಸಂಪೂರ್ಣವಾಗಿ ನವಿಕರಿಸಲಾಗಿದ್ದು, ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸದ್ಯ ಹಿಂದಿ ಚಿತ್ರ ಪ್ರದರ್ಶನಕ್ಕೆ ಬಾಲ್ಕನಿಗೆ 120ರೂ ಹಾಗೂ ಸ್ಟಾಲ್ಗೆ 80ರೂ ದರ ನಿಗದಿ ಮಾಡಲಾಗಿದ್ದು, ಬರುವ ತಿಂಗಳಿನಲ್ಲಿ ಜಿಎಸ್ಟಿ ಜಾರಿಯಾದ ನಂತರ ಕನ್ನಡ ಚಿತ್ರ ಪ್ರದರ್ಶನ ದರ ಬದಲಾವಣೆ ಸಾಧ್ಯತೆಗಳಿವೆ. ಈ ಚಿತ್ರಮಂದಿರವೂ 580 ಆಸನಗಳನ್ನು ಹೊಂದಿದೆ. ನವಿಕೃತ ಚಿತ್ರ ಮಂದಿರದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡುವದಾಗಿ ಚಿತ್ರಮಂದಿರದ ಮಾಲಿಕ ರಮೇಶ ರಾಯ್ಕರ್ ಹೇಳಿದರು. ಗುರುವಾರ ಈ ಬಗ್ಗೆ ವಿವರಣೆ ನೀಡಿದ ಅವರು, ಅರ್ಜುನ್ ಚಿತ್ರಮಂದಿರದ ವೈಶಿಷ್ಟ್ಯಗಳ ಬಗ್ಗೆ ವಿವರಿಸಿದರು. ಇಲ್ಲಿ ಕಂಟೆಂಟ್ಗಳು ಸೆಟ್ಲೈಟ್ ಆಧಾರಿತವಾಗಿ ಚಿತ್ರ ಪ್ರದರ್ಶನ ನಡೆಯಲಿದೆ. ಹೊಸದಾಗಿ ಜೆಬಿಎಲ್ 7.2 ಸೌಂಡ್ ಸಿಸ್ಟಂನ್ನು ಅಳವಡಿಸಲಾಗಿದೆ. ಇದರೊಂದಿಗೆ ಡಿಜಿಟಲ್ ಸೆಟಲೈಟ್ ಸ್ಕ್ರಿನ್ ಚಿತ್ರದ ಗುಣಮಟ್ಟವನ್ನು ಕಾಯ್ದುಕೊಂಡು ಜನರನ್ನು ಸೆಳೆಯಲಿದೆ ಎಂದು ಅವರು ವಿವರಿಸಿದರು.
ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಅತ್ಯಾಧುನಿಕ ಸೌಲಭ್ಯವುಳ್ಳ ಚಿತ್ರ ಮಂದಿರವನ್ನು ತೆರೆಯಲಾಗಿದೆ. ಬಾಲ್ಕನಿಯಲ್ಲಿ ಕುಳಿತ ಪ್ರೇಕ್ಷಕರಿಗೆ ಕಾಲು ಹಾಗೂ ಬೆನ್ನು ನೋವು ಬಾರದಂತೆ ತಡೆಯಲು ಖುರ್ಚಿ ವಿನ್ಯಾಸ ಮಾಡಲಾಗಿದೆ. ಮುಂದಿನ ದಿನದಲ್ಲಿ ಸ್ವಚ್ಚ ಆಹಾರ ವಿತರಣೆ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಸುರಕ್ಷತೆಗಾಗಿ ಸೆಕ್ಯುರಿಟಿ ವ್ಯವಸ್ಥೆ ಮಾಡಲಾಗುವದು ಎಂದು ತಿಳಿಸಿದರು.
Leave a Comment