ಕಾರವಾರ:ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ನೀಡುವ ಜಿಲ್ಲಾ ಪ್ರಶಸ್ತಿಗೆ ಅಂಕೋಲಾದ ಜೇನುಗೂಡು ಸಂಘಟನೆ ಆಯ್ಕೆಯಾಗಿದೆ. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಹಾಗೂ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ವಿಲ್ಪ್ರೆಡ್ ಡಿಸೋಜ ಈ ಕುರಿತು ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆಯಲ್ಲಿ ಜೇನುಗೂಡು ಬಳಗ ಪ್ರಶಸ್ತಿಗೆ ಭಾಜನವಾಯಿತು ಎಂದು ತಿಳಿಸಿದರು. ಕಳೆದ ಎರಡು ವರ್ಷಗಳಿಂದ ವಿವಿಧ … [Read more...] about ಜಿಲ್ಲಾ ಪ್ರಶಸ್ತಿಗೆ ಅಂಕೋಲಾದ ಜೇನುಗೂಡು ಸಂಘಟನೆ ಆಯ್ಕೆ
ಸ್ವಚ್ಚತೆ
ಪೌರಕಾರ್ಮಿಕರ ಜೀವನ ಮಟ್ಟದ ಸ್ಥತಿ-ಗತಿ ಕುರಿತು ಪ್ರಗತಿ ಪರಿಶೀಲನೆ
ಕಾರವಾರ:ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಯೋಗದ ಸದಸ್ಯ ಗೋಕುಲ ನಾರಾಯಣಸ್ವಾಮಿ ಅವರು ಸೋಮವಾರ ಕಾರವಾರ ನಗರ ಪೌರಕಾರ್ಮಿಕರು ವಾಸಿಸುವ ಕಲೋನಿಗಳಿಗೆ ಬೇಟಿ ನೀಡಿ ಪೌರಿಕಾರ್ಮಿಕರ ಜೀವನ ಮಟ್ಟದ ಸ್ಥತಿ-ಗತಿ ಕುರಿತು ಪ್ರಗತಿ ಪರಿಶೀಲನೆ ಮಾಡಿದರು. ಕಾರವಾರ ನಗರಸಭೆ ಪೌರಾಯುಕ್ತರು, ಪರಿಸರ ಅಭಿಯಂತರು, ಮತ್ತು ಸಿಬ್ಬಂದಿಗಳೊಂದಿಗೆ ನಗರದ ಗಾಂಧಿನಗರದಲ್ಲಿ ವಾಸಿಸುವ ಪೌರಕಾರ್ಮಿಕರ ಮನ-ಮನೆಗಳಿಗೆ ತೆರಳಿ ಕಾರ್ಮಿಕರು ಹಾಗೂ ಕಾರ್ಮಿಕ ಮನೆಯ ಸದಸ್ಯರಿಂದ ಅವರ ಸಮಸ್ಯೆಗಳ … [Read more...] about ಪೌರಕಾರ್ಮಿಕರ ಜೀವನ ಮಟ್ಟದ ಸ್ಥತಿ-ಗತಿ ಕುರಿತು ಪ್ರಗತಿ ಪರಿಶೀಲನೆ
ನವಿಕರಣಗೊಂಡ ಅರ್ಜುನ್ ಚಿತ್ರ ಮಂದಿರ
ಕಾರವಾರ:ಕಳೆದ ಒಂದು ವರ್ಷದಿಂದ ದುರಸ್ಥಿಯಲ್ಲಿದ್ದ ಅರ್ಜುನ್ ಚಿತ್ರ ಮಂದಿರ ಶುಕ್ರವಾರದಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ಶುಕ್ರವಾರ ಹಿಂದಿ ಚಿತ್ರ ಟುಬ್ಲೈಟ್ ಬಿಡುಗಡೆಯಾಗಲಿದೆ. ಚಿತ್ರಮಂದಿರವನ್ನು ಸಂಪೂರ್ಣವಾಗಿ ನವಿಕರಿಸಲಾಗಿದ್ದು, ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸದ್ಯ ಹಿಂದಿ ಚಿತ್ರ ಪ್ರದರ್ಶನಕ್ಕೆ ಬಾಲ್ಕನಿಗೆ 120ರೂ ಹಾಗೂ ಸ್ಟಾಲ್ಗೆ 80ರೂ ದರ ನಿಗದಿ ಮಾಡಲಾಗಿದ್ದು, ಬರುವ ತಿಂಗಳಿನಲ್ಲಿ ಜಿಎಸ್ಟಿ ಜಾರಿಯಾದ ನಂತರ ಕನ್ನಡ … [Read more...] about ನವಿಕರಣಗೊಂಡ ಅರ್ಜುನ್ ಚಿತ್ರ ಮಂದಿರ
ಜಿಲ್ಲಾಧಿಕಾರಿ ಸೂಚನೆ,ಚರಂಡಿ ಸ್ವಚ್ಚತೆ ಭರದಿಂದ
ಕಾರವಾರ:ಮಳೆಗಾಲಕ್ಕಿಂತ ಮೊದಲು ಚರಂಡಿ ಸ್ವಚ್ಛಗೊಳಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಆಯಾ ತಾಲೂಕಿನ ಚರಂಡಿ, ರಾಜಕಾಲುವೆಗಳ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯ ಎಲ್ಲ ತಾಲೂಕಿನ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಂದಿನ 5 ದಿನಗಳ ಕಾಲ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದ್ದು ಚರಂಡಿಗಳಲ್ಲಿ ತುಂಬಿರುವ ಕಸಕಡ್ಡಿ, ಮಣ್ಣು, ಗಿಡಗಂಟಿಗಳನ್ನು ತೆಗೆದು … [Read more...] about ಜಿಲ್ಲಾಧಿಕಾರಿ ಸೂಚನೆ,ಚರಂಡಿ ಸ್ವಚ್ಚತೆ ಭರದಿಂದ
ಶರಾಬಿ ಹೊಳೆಗೆ ಹರಿಯುತ್ತಿರುವ ಮಲಿನ ನೀರು
ಭಟ್ಕಳ:ಸರಕಾರ ನದಿ, ತೊರೆ, ಕೆರೆಗಳನ್ನು ಸ್ವಚ್ಚವಾಗಿಟ್ಟುಕೊಂಡು ಪರಿಸರವನ್ನು ಉಳಿಸುವಂತೆ ಸದಾ ಕಾಲ ಜಾಗೃತಗೊಳಿಸುತ್ತಿರುತ್ತದೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವುದು, ಸ್ವಚ್ಚತೆಯ ಕಾರ್ಯ ವ್ಯಾಪಕವಾಗಿ ಸರಕಾರದ ನೆರವಿನಿಂದ ಸಾರ್ವಜನಿಕರ ಸಹಕಾರದಿಂದ ನಡೆಯುತ್ತಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಇದೇ ಉತ್ತರ ಕನ್ನಡದ ನದಿಯೊಂದು ಒಳಚರಂಡಿ ನೀರಿನಿಂದಾಗಿ ಕಲುಷಿತಗೊಂಡು ರೋಗ ಹರಡುವ ಭೀತಿ ಇದ್ದರೂ ಸರಕಾರವಾಗಲೀ, ಸಂಘ … [Read more...] about ಶರಾಬಿ ಹೊಳೆಗೆ ಹರಿಯುತ್ತಿರುವ ಮಲಿನ ನೀರು