ಕಾರವಾರ:
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಯೋಗದ ಸದಸ್ಯ ಗೋಕುಲ ನಾರಾಯಣಸ್ವಾಮಿ ಅವರು ಸೋಮವಾರ ಕಾರವಾರ ನಗರ ಪೌರಕಾರ್ಮಿಕರು ವಾಸಿಸುವ ಕಲೋನಿಗಳಿಗೆ ಬೇಟಿ ನೀಡಿ ಪೌರಿಕಾರ್ಮಿಕರ ಜೀವನ ಮಟ್ಟದ ಸ್ಥತಿ-ಗತಿ ಕುರಿತು ಪ್ರಗತಿ ಪರಿಶೀಲನೆ ಮಾಡಿದರು.
ಕಾರವಾರ ನಗರಸಭೆ ಪೌರಾಯುಕ್ತರು, ಪರಿಸರ ಅಭಿಯಂತರು, ಮತ್ತು ಸಿಬ್ಬಂದಿಗಳೊಂದಿಗೆ ನಗರದ ಗಾಂಧಿನಗರದಲ್ಲಿ ವಾಸಿಸುವ ಪೌರಕಾರ್ಮಿಕರ ಮನ-ಮನೆಗಳಿಗೆ ತೆರಳಿ ಕಾರ್ಮಿಕರು ಹಾಗೂ ಕಾರ್ಮಿಕ ಮನೆಯ ಸದಸ್ಯರಿಂದ ಅವರ ಸಮಸ್ಯೆಗಳ ಕುರಿತು ಆಲಿಸಿದರು. ಪೌರಕಾರ್ಮಿಕರು ವಾಸಿಸುವ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತೆ, ಶೌಚಾಲಯ ಸಮಸ್ಯೆ, ಕುಡಿಯುವ ನೀರು ಇತ್ಯಾಧಿ ವಿಷಯಗಳ ಕುರಿತು ಕುಲಂಕುಶವಾಗಿ ಪರಶೀಲಿಸಿದರು.
ಶೌಚಾಲಯ ಸಮಸ್ಯೆ : ಕಾರ್ಮಿಕರು ವಾಸಿಸುವ ಪ್ರದೇಶದಲ್ಲಿ ಶೌಚಾಲಯ ಸಮಸ್ಯೆ ಪ್ರಮುಖವಾಗಿದ್ದು, ಒಂದು ಶೌಚಾಲಯವನ್ನು ನಾಲ್ಕು ಮನೆಗಳ ಸದಸ್ಯರು ಜಂಟಿಯಾಗಿ ಬಳಸುತ್ತಿದ್ದು, ಸ್ವಚ್ಚತೆ ನಿರ್ವಹಿಸುವದು ಕಷ್ಟವಾಗಿದೆ. ಮನೆಯ ಪಕ್ಕವೇ ಶಾಚಾಲಯವಿರುವದರಿಂದ ಸಾಕಷ್ಟು ದುರ್ಗಂದ ಬರುವದಲ್ಲದೇ ಡ್ರೈನೇಜ ಸಮಸ್ಯೆ ತುಂಭಾ ಇದೆ ಎಂದು ಕೊಳಚೆ ಪ್ರದೇಶದ ಮಹಿಳೆಯೊರ್ವಳು ವಿವರಿಸಿದಳು.
ಕಾರ್ಮಿಕರೊಂದಿಗೆ ಸಂವಾದ : ಸಫಾಯಿ ಕರ್ಮಚಾರಿಗಳ ಹಿತರಕ್ಷಣೆಗೆ ಸಂಭಂಧಿಸಿದಂತೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಗೋಗುಲ ನಾರಾಣಸ್ವಾಮಿ ಹಾಗೂ ಸಂಶೋಧನಾಧೀಕಾರಿ ಮಂಜುನಾಥ ಅವರು ಕಾರವಾರ ನಗರಸಭೆ ಸಭಾಭವನದಲ್ಲಿ ಜಿಲ್ಲೆಯ ಪೌರಕಾರ್ಮಿಕರು ಮತ್ತು ಪೌರಕಾರ್ಮಿಕ ಸಂಘದ ಅಧ್ಯಕ್ಷರೊಂದಿಗೆ ಸಂವಾಧ ನಡೆಸಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದರು.
ಸಂವಾಧದಲ್ಲಿ ಪಿ.ರಮೇಶಬಾಬು ಕಾರ್ಮಿಕನು 26 ದಿನಗಳ ಪಗಾರ ಮಾತ್ರ ನಮಗೆ ಸಿಗುತ್ತದೆ ಉಳಿದ 4 ದಿನಗಳ ರಜೆ ಎಂದು ಪಗಾರ ನೀಡುವದಿಲ್ ಎಂದು ಅಳಲನ್ನು ತೋಡಿಕೊಂಂಡಾಗ ಆಯೋಗದ ಸದಸ್ಯರು ಸ್ಥಳಿಯ ಸಂಸ್ಥೆಯ ಆಯುಕ್ತರಿಗೆ ಕಾರ್ಮಿಕರಿಗೆ ಮಾಸಿಕ ಕನೀಷ್ಠ ಕೂಲಿ ಕೊಡುವದರೊಂದಿಗೆ ನಾಲ್ಕು ದಿನಗಳ ರಜೆಗಳಲ್ಲದೇ ಒಂದೂವರೆ ದಿನದ ರಜೆಯನ್ನೂ ಕೋಡಬೇಕು ಮತ್ತು ಆರು ದಿನಗಳ ಕೆಲಸದ ನಂತರ ಏಳನೆ ದಿನ ಕಡ್ಡಾಯವಾಗಿ ರಜೆ ಕೋಡಬೇಕೆಂದು ಸೂಚಿಸಿದರು. ಕಾರವಾರ ನಗರಸಭೆಯಲ್ಲಿ 8 ಜನ ಕಾರ್ಮಿಕರನ್ನು ಮತ್ತು ದಾಂಡೇಲಿ ನಗರಸಭೆಯಲ್ಲಿ 2 ಜನ ಕಾರ್ಮಿಕರನ್ನು ಕೇಲಸದಿಂದ ತೆಗೆದು ಹಾಕಿದ್ದು ಅವರನ್ನು ತಕ್ಷಣದಿಂದ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದರು. ಪೌರಕಾರ್ಮಿಕರು ಪಿಂಚಣಿ,ಪಗಾರ ಸಿಗದಿರುವ ಅಥವಾ ಇತರೆ ಸಮಸ್ಯೆಗಳ ಬಗ್ಗೆ ಆಧಾರ ಸಮೇತ ದೂರು ಸಲ್ಲಿಸಿದಾಗ ಬೇಗನೆ ಸ್ಪಂದಿಸುವಲಾಗುವದು ಮತ್ತು ಸರಕಾರ ಪೌರಕಾರ್ಮಿಕರಿಗೆ ರೂಪಿಸಿರುವ ಎಲ್ಲ ಯೋಜನೆಗಳ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ವಿ.ನಾಯ್ಕ, ಉಪಾಧ್ಯಕ್ಷೆ ಲಿಲಾಭಾಯಿ ಠಾಣೆಕರ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿಧೇಶಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Leave a Comment