ಹೊನ್ನಾವರ. ಕಾಲೇಜುಶಿಕ್ಷಣಇಲಾಖೆ, ಬೆಂಗಳೂರು ಇವರ ನಿರ್ದೇಶನದಂತೆ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ‘ಮತದಾರರ ಸಾಕ್ಷರತಾ ಸಂಘ’ದಿಂದ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಸ್ವರೂಪಗಳ ಕುರಿತು ತಿಳುವಳಿಕೆಯನ್ನು ನೀಡುವುದಕ್ಕಾಗಿ ಕಾರ್ಯಾಗಾರವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪತ್ರಕರ್ತರಾದ ಜಿ.ಯು.ಭಟ್ಟ ಮತ್ತು ಸೆಂಟ್ಥಾಮಸ್ ಪ್ರೌಢಶಾಲೆಯ ವಿಶ್ರಾಂತ ಪ್ರಾಂಶುಪಾಲರಾದ, ಎಸ್.ಜೆ.ಕೈರನ್ … [Read more...] about ಸಂಸದೀಯ ಪ್ರಜಾಪ್ರಭುತ್ವದ ಕುರಿತು ಕಾರ್ಯಾಗಾರ
ಕುರಿತು
ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕನ್ನಡ ಜಿಲ್ಲಾ ಪ್ರವಾಸ ;ರೂಪರೇಷೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ
ಕಾರವಾರ:ಡಿಸೆಂಬರ್ 6 ಮತ್ತು 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಇದರ ರೂಪರೇಷೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಕಾರವಾರ, ಶಿರಸಿ, ಮುಂಡಗೋಡ, ಹಳಿಯಾಳದಲ್ಲಿ ಮುಖ್ಯಮಂತ್ರಿಗಳು ಎರಡು ದಿನ ಪ್ರವಾಸ ಕೈಗೊಳ್ಳಲಿದ್ದು, ಜಿಲ್ಲೆಯಲ್ಲಿನ ಪ್ರಮುಖ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಕಟ್ಟಡಗಳ ಉದ್ಘಾಟನೆ … [Read more...] about ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕನ್ನಡ ಜಿಲ್ಲಾ ಪ್ರವಾಸ ;ರೂಪರೇಷೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ
ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ವಿಫ್ ಜಾರಿ
ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತನಲ್ಲಿ ಅಧ್ಯಕ್ಷ ಜೈನಾಬಿ ಸಾಬ್ ಇವರ ವಿರುದ್ಧ ಒಟ್ಟು 14 ಸದಸ್ಯರು ಅವಿಶ್ವಾಸ ವ್ಯಕ್ತ ಪಡಿಸಿರುವುದರ ಕುರಿತು ವಿವರವಾದ ವರದಿಯನ್ನು ಈಗಾಗಲೇ ಪಕ್ಷದ ವರಿಷ್ಠರಿಗೆ ನೀಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅದರಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಈ ಕುರಿತು ಎಲ್ಲರೊಡನೆ ಚರ್ಚಿಸಿ ಮಾಹಿತಿ ಸಂಗ್ರಹಿಸಿ ವಿವರ ನೀಡಲು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. … [Read more...] about ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ವಿಫ್ ಜಾರಿ
ಟಿಪ್ಪು ಜಯಂತಿ ಕುರಿತು ವಿರೋಧ ವ್ಯಕ್ತಪಡಿಸುತ್ತಿರುವದು ರಾಜಕೀಯ ಕೆಸರಾಟ;ಸಚಿವ ಆರ್.ವಿ. ದೇಶಪಾಂಡೆ
ಕಾರವಾರ: ಟಿಪ್ಪುವಿನ ಸಾಧನೆ ಕೊಂಡಾಡಿದ್ದ ಬಿಜೆಪಿ ಮುಖಂಡರೇ ಈಗ ಟಿಪ್ಪು ಜಯಂತಿ ಕುರಿತು ವಿರೋಧ ವ್ಯಕ್ತಪಡಿಸುತ್ತಿರುವದು ರಾಜಕೀಯ ಕೆಸರಾಟವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ, ಜಗದೀಶ ಶೇಟ್ಟರ್, ಸದಾನಂದ ಗೌಡ ಅವರು ಟಿಪ್ಪುವನ್ನು ಕೊಂಡಾಡಿದ್ದರು. ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಟಿಪ್ಪು ವಿರೋಧಿ ಹೇಳಿಕೆ ನೀಡಲಾರಂಭಿಸಿದ್ದಾರೆ ಎಂದು ದೂರಿದರು. … [Read more...] about ಟಿಪ್ಪು ಜಯಂತಿ ಕುರಿತು ವಿರೋಧ ವ್ಯಕ್ತಪಡಿಸುತ್ತಿರುವದು ರಾಜಕೀಯ ಕೆಸರಾಟ;ಸಚಿವ ಆರ್.ವಿ. ದೇಶಪಾಂಡೆ
ರೋಟರಿ ಕ್ಲಬ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದಲ್ಲಿ ಚಿಂತನಾ ಸಮಾವೇಶ
ಕಾರವಾರ: ಕಡವಾಡ ಜನರ ಆರ್ಥಿಕ ಸ್ವಾವಲಂಬಿ ಕುರಿತು ಚರ್ಚಿಸಲು ರೋಟರಿ ಕ್ಲಬ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದಲ್ಲಿ ಚಿಂತನಾ ಸಮಾವೇಶ ನಡೆಸಲಾಯಿತು. ಮಹಿಳಾ ಸ್ವಸಹಾಯ ಸಂಘದವರು ಸಮಾವೇಶದಲ್ಲಿ ಭಾಗವಹಿಸಿ ವಿವಿಧ ಸಲಹೆ ನೀಡಿದರು. ಸಿಂಡಿಕೇಟ ಬ್ಯಾಂಕ್ನ ಪ್ರಾದೇಶಿಕ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕಿ ಶೈಲಾ ಎ. ಜೆ. ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಶ್ರಮಿಸುವುದು ಎಲ್ಲರ ಜವಾಬ್ದಾರಿ ಎಂದರು. ಕಡವಾಡ … [Read more...] about ರೋಟರಿ ಕ್ಲಬ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದಲ್ಲಿ ಚಿಂತನಾ ಸಮಾವೇಶ