ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತನಲ್ಲಿ ಅಧ್ಯಕ್ಷ ಜೈನಾಬಿ ಸಾಬ್ ಇವರ ವಿರುದ್ಧ ಒಟ್ಟು 14 ಸದಸ್ಯರು ಅವಿಶ್ವಾಸ ವ್ಯಕ್ತ ಪಡಿಸಿರುವುದರ ಕುರಿತು ವಿವರವಾದ ವರದಿಯನ್ನು ಈಗಾಗಲೇ ಪಕ್ಷದ ವರಿಷ್ಠರಿಗೆ ನೀಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅದರಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಈ ಕುರಿತು ಎಲ್ಲರೊಡನೆ ಚರ್ಚಿಸಿ ಮಾಹಿತಿ ಸಂಗ್ರಹಿಸಿ ವಿವರ ನೀಡಲು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. ಎಂ. ನಾಯ್ಕ ಮುಂಡಗೋಡ ಇವರನ್ನು ಹೊನ್ನಾವರಕ್ಕೆ ಕಳುಹಿಸಿದ್ದರು. ಅದರಂತೆ ನಿನ್ನೆ ವೀಕ್ಷಕರಾಗಿ ಆಗಮಿಸಿದ ಎಚ್. ಎಮ್. ನಾಯ್ಕ ಎಲ್ಲಾ ಸದಸ್ಯರೊಂದಿಗೆ ಖುದ್ದು ಮತ್ತು ಊರಿನಿಂದ ಆಚೆಯಿರುವ ಸದಸ್ಯರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಒಮ್ಮತಾಭಿಪ್ರಾಯಕ್ಕೆ ಬರಲು ಪ್ರಯತ್ನಿಸಿದ್ದಾರೆ. ಮತ್ತು ಅವಿಶ್ವಾಸ ಗೊತ್ತುವಳಿ ಸುಖಾಂತ್ಯಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂದು ಅವರು ತಿಳಿಸಿದರು.ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತನಲ್ಲಿ ಅಧ್ಯಕ್ಷ ಜೈನಾಬಿ ಸಾಬ್ ಇವರ ವಿರುದ್ಧ ಒಟ್ಟು 14 ಸದಸ್ಯರು ಅವಿಶ್ವಾಸ ವ್ಯಕ್ತ ಪಡಿಸಿರುವುದರ ಕುರಿತು ವಿವರವಾದ ವರದಿಯನ್ನು ಈಗಾಗಲೇ ಪಕ್ಷದ ವರಿಷ್ಠರಿಗೆ ನೀಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅದರಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಈ ಕುರಿತು ಎಲ್ಲರೊಡನೆ ಚರ್ಚಿಸಿ ಮಾಹಿತಿ ಸಂಗ್ರಹಿಸಿ ವಿವರ ನೀಡಲು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. ಎಂ. ನಾಯ್ಕ ಮುಂಡಗೋಡ ಇವರನ್ನು ಹೊನ್ನಾವರಕ್ಕೆ ಕಳುಹಿಸಿದ್ದರು. ಅದರಂತೆ ನಿನ್ನೆ ವೀಕ್ಷಕರಾಗಿ ಆಗಮಿಸಿದ ಎಚ್. ಎಮ್. ನಾಯ್ಕ ಎಲ್ಲಾ ಸದಸ್ಯರೊಂದಿಗೆ ಖುದ್ದು ಮತ್ತು ಊರಿನಿಂದ ಆಚೆಯಿರುವ ಸದಸ್ಯರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಒಮ್ಮತಾಭಿಪ್ರಾಯಕ್ಕೆ ಬರಲು ಪ್ರಯತ್ನಿಸಿದ್ದಾರೆ. ಮತ್ತು ಅವಿಶ್ವಾಸ ಗೊತ್ತುವಳಿ ಸುಖಾಂತ್ಯಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
ಪಕ್ಷದ ನೀತಿ ನಿಯಮಾವಳಿ ಪ್ರಕಾರ ಇಂತಹ ಸಂದರ್ಭದಲ್ಲಿ ಪಕ್ಷದ ವಿಫ್ ಜಾರಿ ಮಾಡುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಕಾಂಗ್ರೆಸ್ ಪಕ್ಷದ ಎಲ್ಲಾ ಒಂಬತ್ತು ಸದಸ್ಯರು ಕೂಡ ಅವಿಶ್ವಾಸ ಗೊತ್ತುವಳಿ ವಿರುದ್ಧ ಮತ ಚಲಾಯಿಸುವಂತೆ ಪಕ್ಷದ ವಿಫ್ ಜಾರಿಗೊಳಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ.
Leave a Comment