ಹೊನ್ನಾವರ. ಕಾಲೇಜುಶಿಕ್ಷಣಇಲಾಖೆ, ಬೆಂಗಳೂರು ಇವರ ನಿರ್ದೇಶನದಂತೆ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ‘ಮತದಾರರ ಸಾಕ್ಷರತಾ ಸಂಘ’ದಿಂದ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಸ್ವರೂಪಗಳ ಕುರಿತು ತಿಳುವಳಿಕೆಯನ್ನು ನೀಡುವುದಕ್ಕಾಗಿ ಕಾರ್ಯಾಗಾರವನ್ನು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪತ್ರಕರ್ತರಾದ ಜಿ.ಯು.ಭಟ್ಟ ಮತ್ತು ಸೆಂಟ್ಥಾಮಸ್ ಪ್ರೌಢಶಾಲೆಯ ವಿಶ್ರಾಂತ ಪ್ರಾಂಶುಪಾಲರಾದ, ಎಸ್.ಜೆ.ಕೈರನ್ ಭಾಗವಹಿಸಿದ್ದರು.
ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ.ಎಂ.ಆರ್.ನಾಯಕ ಮಾತನಾಡಿ ಯುವ ಜನಾಂಗವು ಪ್ರಜ್ಞಾವಂತರಾದರೆ ಭಾರತದ ಸಂಸದೀಯ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎನ್ನುವುದು ಚುನಾವಣಾ ಆಯೋಗದ ಅಭಿಪ್ರಾಯವಾಗಿದ್ದು, ಮತದಾರರಲ್ಲಿ ಸಾಕ್ಷರತೆಯನ್ನುಂಟುಮಾಡಲು ನಮ್ಮ ಕಾಲೇಜಿನಲ್ಲಿ ‘ಮತದಾರರ ಸಾಕ್ಷರತಾ ಸಂಘ’ವನ್ನು ಸ್ಥಾಪಿಸಲಾಗಿದ್ದು ವಿದ್ಯಾರ್ಥಿಗಳಲ್ಲಿ ಸಂಸದೀಯ ಪ್ರಜಾಪ್ರಭುತ್ವ ಪದ್ಧತಿಯ ಸ್ವರೂಪಗಳ ಕುರಿತಾದ ತಿಳುವಳಿಕೆಯನ್ನುಂಟು ಮಾಡಲು ಚುನಾವಣಾ ಆಯೋಗದ ನಿರ್ಧೆಶನದಂತೆ ಈ ಕಾರ್ಯಾಗಾರವನ್ನು ಸಂಘಟಿಸಲಾಗಿದೆ ಎಂದುರು.
ವಿದ್ಯಾರ್ಥಿಗಳು ನಮ್ಮ ಸಂಸದೀಯ ಸರಕಾರದ ಸ್ವರೂಪಗಳಲ್ಲಿ ಕಂಡುಬರುವ ಹಲವು ಸಮಸ್ಯೆಗಳನ್ನು ಪ್ರಶ್ನೆಗಳ ರೂಪದಲ್ಲಿ ಕೇಳಿ ಸಂಪನ್ಮೂಲ ವ್ಯಕ್ತಿಗಳಿಂದ ಸಮರ್ಪಕ ಉತ್ತರವನ್ನು ಪಡೆದರು. ಸುಮಾರು 30 ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಕಾರ್ಯಾಗಾರದ ಉದ್ಧೇಶವನ್ನು ಸಫಲಗೊಳಿಸಲು ಕಾರಣರಾದರು. ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕಂಡುಬರುವ ಸಮಸ್ಯೆಗಳನ್ನು ಮತದಾರರು ಮಾತ್ರವೇ ಪ್ರಜ್ಞಾವಂತರಾಗುವ ಮೂಲಕ ಪರಿಹರಿಸಬಹುದೆಂಬ ಒಮ್ಮತಕ್ಕೆ ಬರಲಾಯಿತು. ತನ್ಮೂಲಕ ಮತದಾರರಲ್ಲಿ ಸಾಕ್ಷರತೆಯನ್ನು ಮೂಡಿಸಲು ಈ ಕಾರ್ಯಾಗಾರ ಯಶಸ್ವಿಯಾಯಿತುಎಂದುರು.
. ಪ್ರಾಂಶುಪಾಲರಾದ ಡಾ.ವಿಜಯಲಕ್ಷ್ಮೀ ಎಂ. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಳೆದ ಸೆಮಿಸ್ಟರ್ಗಳಲ್ಲಿ ರಾಜ್ಯಶಾಸ್ತ್ರದಲ್ಲಿ ಹೆಚ್ಚು ಅಂಕಗಳಿಸಿದ ನಾಲ್ಕು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೊ.ಹರಿದಾಸ ಆರ್ವಾರೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಕುಮಾರಿ ಪ್ರಗತಿ ಭಂಡಾರಿ ವಂದಿಸಿದರು.
Leave a Comment