ಕಾರವಾರ: ಕಡವಾಡ ಜನರ ಆರ್ಥಿಕ ಸ್ವಾವಲಂಬಿ ಕುರಿತು ಚರ್ಚಿಸಲು ರೋಟರಿ ಕ್ಲಬ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದಲ್ಲಿ ಚಿಂತನಾ ಸಮಾವೇಶ ನಡೆಸಲಾಯಿತು.
ಮಹಿಳಾ ಸ್ವಸಹಾಯ ಸಂಘದವರು ಸಮಾವೇಶದಲ್ಲಿ ಭಾಗವಹಿಸಿ ವಿವಿಧ ಸಲಹೆ ನೀಡಿದರು. ಸಿಂಡಿಕೇಟ ಬ್ಯಾಂಕ್ನ ಪ್ರಾದೇಶಿಕ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕಿ ಶೈಲಾ ಎ. ಜೆ. ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಶ್ರಮಿಸುವುದು ಎಲ್ಲರ ಜವಾಬ್ದಾರಿ ಎಂದರು. ಕಡವಾಡ ಗ್ರಾಮ ಪಂಚಾಯತ ಅಧ್ಯಕ್ಷ ಸುಧೀರ ಕೃಷ್ಣಾ ಸಾಳಸಕರ ಮಾತನಾಡಿ, ಕಡವಾಡದಂತಹ ಗ್ರಾಮೀಣ ಭಾಗದ ಜನರ ಅನುಕೂಲಕ್ಕೆ ಸ್ವ ಸಹಾಯ ಸಂಘಗಳ ಅವಷ್ಯಕತೆಯಿದೆ ಎಂದರು. ರೋಟರಿ ಕ್ಲಬ್ನ ಅಧ್ಯಕ್ಷ ರಾಜೇಶ ವೆರ್ಣೇಕರ್, ಸಮುದಾಯ ಸೇವಾ ನಿರ್ದೇಶಕ ಎಮ್. ಪಿ. ಕಾಮತ, ಸಿಂಡಿಕೇಟ್ ಬ್ಯಾಂಕ್ನ ಕಡವಾಡ ಶಾಖೆಯ ಶಾಖಾ ಪ್ರಬಂಧಕ ವಿ. ಆರ್. ನಾಯ್ಕ ಇತರರಿದ್ದರು. ಸಮಾವೇಶದಲ್ಲಿ ಕಡವಾಡ ಗ್ರಾಮ ಪಂಚಾಯತ್ನ ಸದಸ್ಯರಾದ ಶ್ವೇತಾ ದುಧಾಳ್ಕರ್, ಆನಂದು ನಾಯ್ಕ ಸಲಹೆ ನೀಡಿದರು. ಪ್ರಮುಖರಾದ ಅಮರನಾಥ ಶೆಟ್ಟಿ, ಸುಶೀಲಾ ಗಾಂವಕರ, ಮನೋಹರ ಕಾಂಬಳಿ, ಪ್ರಸನ್ನಾ ತೆಂಡೂಲಕರ, ಸೂರಜ ಗಾಂವಕರ, ಅನಮೋಲ ರೇವಣಕರ, ಡಾ. ಸಮೀರ ನಾಯಕ, ರಾಘವೇಂದ್ರ ಪ್ರಭು, ಮೋಹನ ನಾಯ್ಕ, ಕೇಶವ ಕಾಮತ, ಡಾ. ವೆಂಕಟರಾಯ್ ಶೆಟ್ಟಿಗಾರ, ಗಣಪತಿ ಬಾಡಕರ, ಅರ್ಚನಾ ಶೆಟ್ಟಿ, ಜ್ಯೋತಿ ಶೆಟ್ಟಿಗಾರ ಭಾಗವಹಿಸಿದ್ದರು. ನಾಗರಾಜ ಜೋಷಿ ನಿರ್ವಹಿಸಿದರು. ಸಾತಪ್ಪಾ ತಾಂಡೇಲ್ ವಂದಿಸಿದರು.
Leave a Comment