ದಾಂಡೇಲಿ :
ನಗರದ ಲೆನಿನ್ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕಿನಲ್ಲಿ ಗ್ರಾಹಕರ ಸಭೆಯು ಶುಕ್ರವಾರ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಬಿ.ಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಯೋಗೇಶ ಕರ್ಕೇರ ಅವರು ಬ್ಯಾಂಕಿನ ಎ.ಟಿ.ಎಂ, ಆನ್ಲೈನ್ ಲಭ್ಯತೆಯ ಬಗ್ಗೆ, ಆಧಾರ ಜೋಡಣೆ, ಸಾಲಗಳ ವಿಚಾರವಾಗಿ ವಿವರಿಸಿದರು. ಕ್ಯಾಶ್ ಲೆಸ್ ಬ್ಯಾಕಿಂಗ್ ಬಗ್ಗೆ ಗ್ರಾಹಕರು ಹೆಚ್ಚಿನ ಅರಿವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಗ್ರಾಹಕರು ಹೆಚ್ಚಾಗಿ ಎಟಿಎಂ, ಆನ್ಲೈನ್, ಮೊಬೈಲ್ ಬ್ಯಾಂಕಿಂಗ್ ಕಡೆ ಹೆಚ್ಚಿನ ಆಸಕ್ತಿ ತೋರಿಸಲು ಹಾಗೂ ಕಾರವಾರ ಜಿಲ್ಲೆ ಡಿಜಿಟಲ್ ಬ್ಯಾಂಕಿಂಗ್ ಜಿಲ್ಲೆ ವ್ಯವಸ್ಥೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ವಿಶೇಷವಾಗಿ ಸಹಕರಿಸಿಬೇಕಾಗಿ ವಿನಂತಿಸಿದರು.
ಬ್ಯಾಂಕಿನ ಅಧಿಕಾರಿ ಸಾಹಿಲ್ ಮಿಗಲಾನಿ ಮಾತನಾಡಿ ಬ್ಯಾಂಕ್ ಒದಗಿಸುವ ವಿವಿಧ ಸೌಲಭ್ಯಗಳ ಕುರಿತು ವಿವರಿಸುತ್ತ ಬ್ಯಾಂಕಿನಿಂದ ದೊರಕುವ ಸಾಲ ಸೌಲಭ್ಯಗಳು, ಉಳಿತಾಯ ಖಾತೆ, ಚಾಲ್ತಿ ಖಾತೆಗಳು ಉಪಯುಕ್ತತತೆ ಬಗ್ಗೆ ತಿಳಿಸುತ್ತ ಪ್ರತಿಯೊಂದು ಖಾತೆಗಳಿಗೆ ಆಧಾರ ಜೋಡನೆ, ಪಾನ್ಕಾರ್ಡ ಅಗತ್ಯತೆಗಳ ಬಗ್ಗೆಯೂ ವಿವರಿಸಿದರು.
ಸಭೆಯಲ್ಲಿ ಗ್ರಾಹಕರಾದ ನಾರಾಯಣ ಮಾಡದೊಳ್ಕರ, ದೀಪಕ, ವಿನಯ ಎಸ್. ಚಾಂದಗುಡಿ, ಜಾಫರ್ ಸಾದಿಕ್, ಅಬ್ದುಲ್ ಖಾನ್, ನಗರಸಭಾ ಸದಸ್ಯ ರವಿ ಸುತಾರ ಮುಂತಾದವರು ಉಪಸ್ಥಿತರಿದ್ದು, ಬ್ಯಾಂಕನಿಂದ ಸಿಗುವ ಸಾಲ ಸೌಲಭ್ಯಗಳು, ಎಟಿಎಂ ಲಭ್ಯತೆಯ ಬಗ್ಗೆ ಆಧಾರ ಜೊಡನೆ ಮುಂತಾದ ಪ್ರಶ್ನೆಗಳ ವಿಚಾರವಾಗಿ ಕೇಳಿದ್ದರು.
ಸಭೆಯ ಆರಂಭದಲ್ಲಿ ಕು: ಸ್ಮೀತಾ ಹೆಗಡೆ ಪ್ರಾರ್ಥನೆ ಹಾಡಿದರು. ಬ್ಯಾಂಕಿನ ಉದ್ಯೋಗಿ ಮೋಹನ ಹಾರವಾಡೇಕರ ಸ್ವಾಗತಿಸಿ, ಸಭೆಯ ಉದ್ದೇಶಗಳ ಕುರಿತು ಪ್ರಸ್ತಾಪಿಸಿದರು. ನಾಗರಾಜ ಶಿರಾಲಿ ವಂದಿಸಿದರು.
Leave a Comment