ಹೊನ್ನಾವರ:
ತಾಲೂಕಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಅಪರ ಸರ್ಕಾರಿ ವಕೀಲರರನ್ನಾಗಿ ಪ್ರಮೋದ ಲಕ್ಷ್ಮೀನಾರಾಯಣ ಭಟ್ರನ್ನು ನೇಮಕ ಮಾಡಿ ಕಾನೂನು ಇಲಾಖೆ ಆದೇಶ ಹೊರಡಿಸಿದೆ. ರಾಜ್ಯಪಾಲ ವಜುಬಾಯಿ ಪಟೇಲ್ ಆದೇಶದ ಅನುಸಾರ ಕಾನೂನು ಇಲಾಖೆಯ ಆಧೀನ ಕಾರ್ಯದರ್ಶಿ ಈ ಆದೇಶವನ್ನು ಹೊರಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಹೊನ್ನಾವರದ ನ್ಯಾಯಾಲಯದಲ್ಲಿ ವಕೀಲರಾಗಿ ತೊಡಗಿಕೊಂಡ ಪ್ರಮೋದ ಭಟ್ರನ್ನು ಅಪರ ಸರ್ಕಾರಿ ವಕೀಲರನ್ನಾಗಿ (ಎ.ಜಿ.ಪಿ.) ನೇಮಕ ಮಾಡಿದಕ್ಕೆ ಅವರ ಮಿತ್ರರು, ಹಿತೈಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Leave a Comment